ರಾಜಮೌಳಿ ತಂದೆ ಮೊಬೈಲ್​ ವಾಲ್​ಪೇಪರ್​ನಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಫೋಟೋ; ಕಾರಣ ಏನು?

| Updated By: ಮದನ್​ ಕುಮಾರ್​

Updated on: May 28, 2021 | 7:21 AM

ವಿಜಯೇಂದ್ರ ಪ್ರಸಾದ್​ ಅವರು ಹೇಳಿರುವ ಮಾತು ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಪುರಿ ಜಗನ್ನಾಥ್​ ಅಭಿಮಾನಿಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ರಾಜಮೌಳಿ ತಂದೆ ಮೊಬೈಲ್​ ವಾಲ್​ಪೇಪರ್​ನಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಫೋಟೋ; ಕಾರಣ ಏನು?
ವಿಜಯೇಂದ್ರ ಪ್ರಸಾದ್
Follow us on

ಎಸ್​.ಎಸ್​. ರಾಜಮೌಳಿ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್​ ಹಿರಿಯ ಸಿನಿಮಾ ಕಥೆ ಬರಹಗಾರರು. ಬಾಹುಬಲಿ ಸಿನಿಮಾ ಕಲ್ಪನೆ ಮೂಡಿ ಬಂದಿದ್ದು ಅವರಿಂದಲೇ. ಅಚ್ಚರಿ ಎಂದರೆ ವಿಜಯೇಂದ್ರ ಪ್ರಸಾದ್​ ಅವರ ಮೊಬೈಲ್​ ವಾಲ್​ಪೇಪರ್​ನಲ್ಲಿ ಅವರ ಫೋಟೋ ಹಾಕಿಕೊಂಡಿಲ್ಲ. ಬದಲಿಗೆ ಟಾಲಿವುಡ್​ ನಿರ್ದೇಶಕ ಪುರಿ ಜಗನ್ನಾಥ್​ ಅವರ ಫೋಟೋ ಇದೆ.

ವಿಜಯೇಂದ್ರ ಪ್ರಸಾದ್ ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನವೊಂದನ್ನು ನೀಡಿದ್ದರು. ಆಗ ಅವರಿಗೆ ರಾಜಮೌಳಿ ಹೊರತುಪಡಿಸಿ ನಿಮ್ಮ ಫೇವರಿಟ್​ ನಿರ್ದೇಶಕರು ಯಾರು ಎಂದು ಪ್ರಶ್ನೆ ಮಾಡಲಾಗಿದೆ. ಈ ವೇಳೆ ಅವರು ಮೊಬೈಲ್​ ವಾಲ್​ಪೇಪರ್​ ಬಗ್ಗೆ ಮಾತನಾಡಿದ್ದಾರೆ. ನನಗೆ ಪುರಿ ಜಗನ್ನಾಥ್​ ಇಷ್ಟ. ಅವರ ಬಗ್ಗೆ ನಾನು ಅಸೂಯೆಪಟ್ಟುಕೊಳ್ಳುತ್ತೇನೆ. ಅವರಿಂದ ನಾನು ಸ್ಪೂರ್ತಿ ಪಡೆದುಕೊಂಡಿದ್ದೇನೆ. ಹೀಗಾಗಿ, ನನ್ನ ಮೊಬೈಲ್​ ವಾಲ್​ಪೇಪರ್​ನಲ್ಲಿ ಅವರ ಫೋಟೋ ಇದೆ ಎಂದಿದ್ದಾರೆ ರಾಜಮೌಳಿ.

ರಾಜಮೌಳಿ ಕುಟುಂಬ ಅನೇಕ ಬಾರಿ ಪುರಿ ಅವರನನ್ನು ಹೊಗಳಿದೆ. ರಾಜಮೌಳಿ ಸಿನಿಮಾಗಳನ್ನು ಮಾಡೋಕೆ ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಆ ರೀತಿ ಮಾಡದೇ ವೇಗವಾಗಿ ಸಿನಿಮಾ ಮಾಡೋದು ಹೇಗೆ ಎಂಬುದನ್ನು ಪುರಿಯಿಂದ ಕಲಿಯುವಂತೆ ರಾಜಮೌಳಿ ಹೆಂಡತಿ, ಕಾಸ್ಟ್ಯೂಮ್​ ಡಿಸೈನರ್​ ರಮಾ ಅವರು ರಾಜಮೌಳಿಗೆ ಹೇಳಿದ್ದರಂತೆ.

ವಿಜಯೇಂದ್ರ ಪ್ರಸಾದ್​ ಅವರು ಹೇಳಿರುವ ಮಾತು ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಪುರಿ ಜಗನ್ನಾಥ್​ ಅಭಿಮಾನಿಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ರಾಜಮೌಳಿ ಸದ್ಯ ಆರ್​ಆರ್​ಆರ್​ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊವಿಡ್​ ಕಾರಣದಿಂದ ಸಿನಿಮಾ ಕೆಲಸಗಳು ನಿಂತಿವೆ. ಈ ಸಿನಿಮಾದ ಕತೆ ಹೆಣೆದಿದ್ದು ವಿಜಯೇಂದ್ರ ಪ್ರಸಾದ್​ ಅವರೇ. ಇನ್ನು ಪುರಿ ಜಗನ್ನಾಥ್​ ವಿಜಯ್​ ದೇವರಕೊಂಡ ನಟನೆಯ ಲೈಗರ್​ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: RRR ಫೈಟಿಂಗ್​ ದೃಶ್ಯದಲ್ಲಿ ರಾಜಮೌಳಿ ಹೊಸ ಪ್ರಯೋಗ; ತಂದೆಯಿಂದಲೇ ಬಯಲಾದ ಸೀಕ್ರೆಟ್​ ಏನು?

RRR Ott Rights: 325 ಕೋಟಿ ರೂ.ಗೆ ಸೇಲ್​ ಆಯ್ತು ಆರ್​ಆರ್​ಆರ್ ಚಿತ್ರ; ಯಾವ ಓಟಿಟಿಯಲ್ಲಿ ಪ್ರಸಾರ?