AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2026ಕ್ಕೆ ತೆರೆಗೆ ಬರಲಿದೆ ರಾಜಮೌಳಿ ಮುಂದಿನ ಸಿನಿಮಾ; ಮಾಹಿತಿ ಹಂಚಿಕೊಂಡ ಜ್ಯೂ.ಎನ್​ಟಿಆರ್​

ಮಹೇಶ್​ ಬಾಬು ಹಾಗೂ ನಿಮ್ಮ ಕಾಂಬಿನೇಷನ್​ ಸಿನಿಮಾದ ಕೆಲಸ ಆರಂಭವಾಗೋದು ಯಾವಾಗ ಎನ್ನುವ ಪ್ರಶ್ನೆಯನ್ನು ರಾಜಮೌಳಿಗೆ ಕೇಳಲಾಯಿತು. ಇದಕ್ಕೆ ಜ್ಯೂ.ಎನ್​ಟಿಆರ್​ ಉತ್ತರಿಸೋಕೆ ಮುಂದಾದರು.

2026ಕ್ಕೆ ತೆರೆಗೆ ಬರಲಿದೆ ರಾಜಮೌಳಿ ಮುಂದಿನ ಸಿನಿಮಾ; ಮಾಹಿತಿ ಹಂಚಿಕೊಂಡ ಜ್ಯೂ.ಎನ್​ಟಿಆರ್​
ರಾಜಮೌಳಿ
TV9 Web
| Edited By: |

Updated on:Dec 28, 2021 | 12:12 AM

Share

ಸ್ಟಾರ್​ ನಿರ್ದೇಶಕ ರಾಜಮೌಳಿ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿದರೂ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರುತ್ತದೆ. ಈ ಹಿಂದೆ ಅವರು ಅಂಥ ಅದ್ದೂರಿ ಸಿನಿಮಾಗಳನ್ನು ನೀಡಿದ್ದೇ ಇದಕ್ಕೆ ಕಾರಣ. ಇನ್ನು, ಅವರ ಸಿನಿಮಾ ಅನೌನ್ಸ್​ ಆದ ದಿನದಿಂದಲೇ ಹೊಸ ಹೊಸ ಗಾಸಿಪ್​ಗಳು ಕೂಡ ಕೇಳಿಬರಲು ಆರಂಭಿಸುತ್ತವೆ. ‘ಆರ್​ಆರ್​ಆರ್’ ಸಿನಿಮಾ ತೆರೆಗೆ ಬರೋಕೆ ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗಲೇ ‘ಪ್ರಿನ್ಸ್​’ ಮಹೇಶ್​ ಬಾಬು ಜತೆ ಮಾಡಲಿರುವ ಚಿತ್ರದ ಬಗ್ಗೆಯೂ ಹಲವು ಗಾಸಿಪ್​ಗಳು ಹುಟ್ಟಿಕೊಂಡಿವೆ. ಈ ವಿಚಾರದ ಬಗ್ಗೆ ಜ್ಯೂ.ಎನ್​ಟಿಆರ್​ ಮಾಹಿತಿ ನೀಡಿದ್ದಾರೆ.

ಮಹೇಶ್​ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್​ನಲ್ಲಿ ಸಿನಿಮಾ ಆಗುತ್ತಿರುವುದೇನೋ ನಿಜ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಕಥೆ ಬರೆಯಲು ಆರಂಭಿಸಿದ್ದಾರೆ ಎಂಬುದು ಬಿಟ್ಟರೆ ಸದ್ಯಕ್ಕಂತೂ ಬೇರೆ ಯಾವ ಕೆಲಸಗಳೂ ಶುರು ಆಗಿಲ್ಲ. ಪ್ರಸ್ತುತ ‘ಆರ್​ಆರ್​ಆರ್’ ಚಿತ್ರದ ಪ್ರಚಾರದ ಕೆಲಸಗಳಲ್ಲಿ ರಾಜಮೌಳಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಮಹೇಶ್​ ಬಾಬು ಜೊತೆಗಿನ ಚಿತ್ರದ ಕಥೆಯ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ‘ಆರ್​ಆರ್​ಆರ್​’ ಪ್ರೆಸ್​ಮೀಟ್​ನಲ್ಲಿ ಕೇಳಲಾದ ಪ್ರಶ್ನೆಗೆ ಜ್ಯೂ.ಎನ್​ಟಿಆರ್​ ಉತ್ತರಿಸಿದ್ದಾರೆ.

ಮಹೇಶ್​ ಬಾಬು ಹಾಗೂ ನಿಮ್ಮ ಕಾಂಬಿನೇಷನ್​ ಸಿನಿಮಾದ ಕೆಲಸ ಆರಂಭವಾಗೋದು ಯಾವಾಗ ಎನ್ನುವ ಪ್ರಶ್ನೆಯನ್ನು ರಾಜಮೌಳಿಗೆ ಕೇಳಲಾಯಿತು. ಇದಕ್ಕೆ ಜ್ಯೂ.ಎನ್​ಟಿಆರ್​ ಉತ್ತರಿಸೋಕೆ ಮುಂದಾದರು. ನನಗೆ ಈ ಬಗ್ಗೆ ಸ್ವಲ್ಪ ಮಾಹಿತಿ ಸಿಕ್ಕಿದೆ ಎಂದು ಮೈಕ್​ ತೆಗೆದುಕೊಂಡರು. ಅವರು ಮಾತು ಕೇಳಿ ಎಲ್ಲರೂ ನಕ್ಕರು. ಏಕೆಂದರೆ ಅವರು ಹೇಳಿದ್ದು ಕೇವಲ ಜೋಕ್​ಗಾಗಿ ಮಾತ್ರ ಆಗಿತ್ತು.

‘ಈ ಚಿತ್ರಕ್ಕೆ ಸಂಬಂಧಿಸಿದ ಚರ್ಚೆಗಳು 2022ರಲ್ಲಿ ಪ್ರಾರಂಭವಾಗುತ್ತದೆ. ಚಿತ್ರೀಕರಣವು 2023 ರಲ್ಲಿ ಶುರುವಾಗಬಹುದು.  ಬಹುಶಃ 2026ರಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದು ನಕ್ಕರು ಜ್ಯೂ.ಎನ್​ಟಿಆರ್​. ಈ ವೇಳೆ ಮೈಕ್​ ಕಸಿದುಕೊಂಡ ರಾಮ್​ ಚರಣ್​, ‘ಸಾಂಕ್ರಾಮಿಕ ಇಲ್ಲದಿದ್ದರೆ ಈ ಚಿತ್ರ 2025ರಲ್ಲೇ ರಿಲೀಸ್​ ಆಗುತ್ತದೆ’ ಎಂದರು. ​ ಇದನ್ನು ಕೇಳಿ ಎಲ್ಲರೂ ಮತ್ತೊಮ್ಮೆ ನಕ್ಕರು.

ಇದನ್ನೂ ಓದಿ: ಮತ್ತೆ ಮುಂದೂಡಲ್ಪಡುತ್ತೆ ‘ಆರ್​ಆರ್​ಆರ್​’ ರಿಲೀಸ್ ದಿನಾಂಕ? ರಾಜಮೌಳಿ ತಂಡಕ್ಕೆ ಮೊದಲ ಹಿನ್ನಡೆ

Published On - 10:03 pm, Mon, 27 December 21

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು