AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRR: ಆಲಿಯಾ ಮುಂದೆ ರಾಮ್​ ಚರಣ್ ಹಾಗೂ ಜ್ಯೂ ಎನ್​ಟಿಆರ್ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದರು? ಅಚ್ಚರಿಯ ವಿಚಾರ ಇಲ್ಲಿದೆ

Alia Bhatt | Jr NTR | Ram Charan: ಚಿತ್ರೀಕರಣದ ಸಂದರ್ಭದಲ್ಲಿ ರಾಮ್ ಚರಣ್ ಹಾಗೂ ಜ್ಯೂ.ಎನ್​ಟಿಆರ್ ಯಾವ ಭಾಷೆಯಲ್ಲಿ ಸಂವಹನ ಮಾಡುತ್ತಿದ್ದರು? ಆಲಿಯಾ ತೆರೆದಿಟ್ಟ ಕುತೂಹಲಕಾರಿ ಮಾಹಿತಿ ಇಲ್ಲಿದೆ.

RRR: ಆಲಿಯಾ ಮುಂದೆ ರಾಮ್​ ಚರಣ್ ಹಾಗೂ ಜ್ಯೂ ಎನ್​ಟಿಆರ್ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದರು? ಅಚ್ಚರಿಯ ವಿಚಾರ ಇಲ್ಲಿದೆ
ಆಲಿಯಾ ಭಟ್, ರಾಮ್ ಚರಣ್, ಜೂ.ಎನ್​ಟಿಆರ್
Follow us
TV9 Web
| Updated By: shivaprasad.hs

Updated on: Dec 23, 2021 | 7:00 AM

ರಾಮ್ ಚರಣ್ ಹಾಗೂ ಜ್ಯೂ.ಎನ್​ಟಿಆರ್ ಕಾಣಿಸಿಕೊಂಡಿರುವ ‘ಆರ್​ಆರ್​ಆರ್​’ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗೀಗ ಚಿತ್ರದ ಕುರಿತು ಒಂದೊಂದೇ ಕುತೂಹಲಕರ ವಿಚಾರಗಳು ಹೊರಬರುತ್ತಿವೆ. ಬಹಳಷ್ಟು ಜನರಿಗೆ ‘ಆರ್​ಆರ್​ಆರ್​’ ಬಹುಭಾಷೆಯ ತಾರಾಗಣವನ್ನು ಹೊಂದಿದೆ. ಆದ್ದರಿಂದ ಕಲಾವಿದರು ಸೆಟ್​ನಲ್ಲಿ ಯಾವ ಭಾಷೆಯಲ್ಲಿ ಸಂವಹನ ಮಾಡುತ್ತಿದ್ದರು ಎಂಬ ಕುತೂಹಲವಿರಬಹುದು. ಈ ಕುರಿತು ಮಾತನಾಡಿರುವ ಆಲಿಯಾ ಭಟ್ ಅಚ್ಚರಿಯ ಮಾಹಿತಿಯ ಸಂದರ್ನ್ನುಶನವೊಂದರಲ್ಲಿ ಹೊರಹಾಕಿದ್ದಾರೆ. ಅಲ್ಲದೇ ರಾಮ್ ಚರಣ್ ಹಾಗೂ ಜ್ಯೂ.ಎನ್​ಟಿಆರ್ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅದರಿಂದ ತಮಗೆ ಏನನ್ನಿಸುತ್ತಿತ್ತು ಎಂಬುದನ್ನು ಆಲಿಯಾ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಫ್ರೀ ಪ್ರೆಸ್ ಜರ್ನಲ್​ನೊಂದಿಗೆ ಮಾತನಾಡಿರುವ ಅವರು, ರಾಮ್ ಚರಣ್ (Ram Charan) ಹಾಗೂ ಜ್ಯೂ ಎನ್​ಟಿಆರ್ (Jr NTR) ತಮ್ಮ ಮುಂದೆ ತೆಲುಗಿನಲ್ಲೇ ಮಾತನಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೇ ಆ ಸಂದರ್ಭಗಳಲ್ಲಿ ತಾನು ಗೊಂದಲಕ್ಕೊಳಗಾಗುತ್ತಿದ್ದೆ. ಯಾರಾದರೂ ಭಾಷಾಂತರಿಸಲು ಕಾಯುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಎಸ್‌ಎಸ್ ರಾಜಮೌಳಿ (SS Rajamouli) ನಿರ್ದೇಶಿಸಿರುವ ‘ಆರ್‌ಆರ್‌ಆರ್‌’ನಲ್ಲಿ ಆಲಿಯಾ ಭಟ್ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕತೆಯನ್ನು ಕಟ್ಟಿಕೊಡಲಿದ್ದು, ನಟ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಹಾಗೂ ಜೂನಿಯರ್ ಎನ್‌ಟಿಆರ್ ಕೊಮರಂ ಭೀಮ್ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ನಟ ಅಜಯ್ ದೇವಗನ್ (Ajay Devgan) ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಆಲಿಯಾ, ‘‘ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಯಾವಾಗಲೂ ನನ್ನ ಮುಂದೆ ಪರಸ್ಪರ ತೆಲುಗಿನಲ್ಲಿ ಮಾತನಾಡುತ್ತಿದ್ದರು. ನಾನು ಟೆನಿಸ್ ಆಟದ ಚೆಂಡನ್ನು ನೋಡುವಂತೆ ಅವರೀವರ್ವರ ಮುಖವನ್ನು ಅತ್ತಿಂದಿತ್ತ- ಇತ್ತಿಂದತ್ತ ನೋಡುತ್ತಿದ್ದೆ. ಅಲ್ಲದೇ ಯಾರಾದರೂ ಅನುವಾದಿಸಲಿ ಎಂದು ಕಾಯುತ್ತಿದ್ದೆ’’ ಎಂದು ನಗುತ್ತಾ ನುಡಿದಿದ್ದಾರೆ.

ಚಿತ್ರದಲ್ಲಿ ತೆಲುಗು ಮಾತನಾಡಲು ಅಭ್ಯಾಸ ಮಾಡಿದ ಬಗ್ಗೆ ಮಾತನಾಡಿದ ಆಲಿಯಾ, ‘‘ತುಂಬಾ ಉತ್ಸುಕಳಾಗಿದ್ದೆ ಆದರೆ ಅಷ್ಟೇ ನರ್ವಸ್ ಕೂಡ ಆಗಿತ್ತು. ತರಬೇತುದಾರರೊಂದಿಗೆ ಕುಳಿತು ಸಾಲುಗಳನ್ನು ಕಂಠಪಾಟ ಮಾಡುತ್ತಿದ್ದೆ. ಪಾತ್ರಕ್ಕಾಗಿ ಒಂದಷ್ಟು ಹೋಮ್​ವರ್ಕ್ ಮಾಡಿಕೊಂಡಿದ್ದೆ’’ ಎಂದು ನುಡಿದಿದ್ದಾರೆ. ಚಿತ್ರ ಮುಗಿದಿದ್ದಕ್ಕೆ ತನಗೆ ಬೇಸರವಾಗಿತ್ತು ಎಂದು ಈ ಹಿಂದೆ ಹೇಳಿಕೊಂಡಿದ್ದ ಆಲಿಯಾ, ರಾಜಮೌಳಿ ಅವರೊಂದಿಗೆ ಮತ್ತೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದರು.

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸಿರುವ ‘ಆರ್‌ಆರ್‌ಆರ್’ ಚಿತ್ರ 2022ರ ಜನವರಿ 7 ರಂದು ಬಿಡುಗಡೆಯಾಗಲಿದೆ. ಈ ಹಿಂದೆ ಕೊರೊನಾ ಕಾರಣದಿಂದಾಗಿ ಚಿತ್ರದ ಬಿಡುಗಡೆ ತಡವಾಗಿತ್ತು.

ಇದನ್ನೂ ಓದಿ:

ವಿಚ್ಛೇದನದಿಂದ ಸಮಂತಾ 50 ಕೋಟಿ ರೂ. ದರೋಡೆ ಮಾಡಿದ್ದಾರೆ ಎಂದ ನೆಟ್ಟಿಗ: ನಟಿಯ ಖಡಕ್​ ಉತ್ತರವೇನು?

83 Movie: ‘83’ ಚಿತ್ರಕ್ಕೆ ಬಂಪರ್ ಕೊಡುಗೆ ಘೋಷಿಸಿದ ದೆಹಲಿ ಸರ್ಕಾರ; ಹಿರಿಹಿರಿ ಹಿಗ್ಗಿದ ಚಿತ್ರತಂಡ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?