ಒಂದೇ ಒಂದು ಹಾಡು ನೋಡಿ ಅಲ್ಲು ಅರ್ಜುನ್​ ಪ್ರತಿಭೆಗೆ ಸಲಾಂ ಎಂದ ಸಲ್ಮಾನ್​ ಖಾನ್​

‘ಸೀಟಿಮಾರ್​’ ಹಾಡನ್ನು ಕಾಪಿ ಮಾಡಿದ್ದು ಸರಿಯಲ್ಲ ಎಂದು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ ಆಗುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸಲ್ಮಾನ್​ ಖಾನ್​ ಅವರು ಅಲ್ಲು ಅರ್ಜುನ್​ಗೆ ಮೆಚ್ಚುಗೆ ಸೂಚಿಸುವ ಮೂಲಕ ಇಡೀ ಚರ್ಚೆ ಬೇರೆ ಕಡೆಗೆ ತಿರುಗುವಂತೆ ಮಾಡಿದ್ದಾರೆ.

ಒಂದೇ ಒಂದು ಹಾಡು ನೋಡಿ ಅಲ್ಲು ಅರ್ಜುನ್​ ಪ್ರತಿಭೆಗೆ ಸಲಾಂ ಎಂದ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​ - ಅಲ್ಲು ಅರ್ಜುನ್​
Follow us
| Updated By: ರಾಜೇಶ್ ದುಗ್ಗುಮನೆ

Updated on: Apr 26, 2021 | 4:07 PM

ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತದ ಹಿಟ್​ ಸಿನಿಮಾಗಳನ್ನು ರಿಮೇಕ್​ ಮಾಡಿದ ಬಳಿಕ ಮತ್ತೆ ಹಳೇ ಚಾರ್ಮ್​ ಪಡೆದುಕೊಂಡವರು ನಟ ಸಲ್ಮಾನ್ ಖಾನ್. ಇನ್ನು, ದಕ್ಷಿಣ ಭಾರತದ ಕೆಲವು ಸೂಪರ್​ ಹಿಟ್​ ಗೀತೆಗಳ ಮೇಲೂ ಬಾಲಿವುಡ್​ ಮಂದಿ ಕಣ್ಣಿಟ್ಟಿರುತ್ತಾರೆ. ಈಗ ಸಲ್ಮಾನ್​ ಖಾನ್​ ನಟಿಸಿರುವ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್’​ ಸಿನಿಮಾದಲ್ಲಿ ಕೂಡ ಅಂಥ ಒಂದು ಹಾಡು ಬಳಕೆ ಆಗಿದೆ. ಅದರ ಬಗ್ಗೆ ಈಗಾಗಲೇ ಹಲವು ಬಗೆಯ ಚರ್ಚೆ ಶುರುವಾಗಿದೆ.

2017ರಲ್ಲಿ ಅಲ್ಲು ಅರ್ಜುನ್​ ನಟಿಸಿದ್ದ ದುವ್ವಡ ಜಗನ್ನಾಥಂ ಸಿನಿಮಾದಲ್ಲಿ ‘ಸೀಟಿಮಾರ್​ ಸೀಟಿಮಾರ್​..’ ಹಾಡು ತುಂಬ ಜನಪ್ರಿಯವಾಗಿತ್ತು. ಅದರಲ್ಲಿ ಅಲ್ಲು ಅರ್ಜುನ್​ ಮತ್ತು ನಟಿ ಪೂಜಾ ಹೆಗ್ಡೆ ಭರ್ಜರಿಯಾಗಿ ಸ್ಟೆಪ್​ ಹಾಕಿದ್ದರು. ಅದೇ ಹಾಡನ್ನು ಯಥಾವತ್ತಾಗಿ ಈಗ ‘ರಾಧೆ’ ಸಿನಿಮಾದಲ್ಲಿ ಬಳಕೆ ಮಾಡಲಾಗಿದೆ. ಅದರ ಬಗ್ಗೆ ಸಾಕಷ್ಟು ಟೀಕೆ ಕೇಳಿಬಂದಿದೆ. ಸಲ್ಲು ಹೀಗೆ ಕಾಪಿ ಮಾಡಿದ್ದು ಸರಿಯಲ್ಲ ಎಂದು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಲ್ಮಾನ್​ ಖಾನ್​ ಅವರು ಅಲ್ಲು ಅರ್ಜುನ್​ಗೆ ಮೆಚ್ಚುಗೆ ಸೂಚಿಸುವ ಮೂಲಕ ಇಡೀ ಚರ್ಚೆ ಬೇರೆ ಕಡೆಗೆ ತಿರುಗುವಂತೆ ಮಾಡಿದ್ದಾರೆ.

ಮೂಲ ಸೀಟಿಮಾರ್​ ಸಾಂಗ್​ನಲ್ಲಿ ಅಲ್ಲು ಅರ್ಜುನ್​ ಡ್ಯಾನ್ಸ್​ ಮಾಡಿರುವುದನ್ನು ಕಂಡು ಸಲ್ಮಾನ್​ ಖಾನ್​ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿದ್ದಾರೆ. ‘ಸೀಟಿಮಾರ್​ ಹಾಡು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಅದರಲ್ಲಿ ನಿಮ್ಮ ಪರ್ಫಾಮೆನ್ಸ್​​ ನೋಡಿ ಇಷ್ಟಪಟ್ಟೆ. ನಿಮ್ಮ ಡ್ಯಾನ್ಸ್​, ನಿಮ್ಮ ಸ್ಟೈಲ್​ ಎಲ್ಲವೂ ಫೆಂಟಾಸ್ಟಿಕ್​. ಕಾಳಜಿ ವಹಿಸಿ. ಸುರಕ್ಷಿತವಾಗಿರಿ. ಲವ್​ ಯು ಬ್ರದರ್​’ ಎಂದು ಸಲ್ಮಾನ್​ ಮಾಡಿರುವ ಟ್ವೀಟ್​ ವೈರಲ್​ ಆಗಿದೆ.

ಸಲ್ಮಾನ್​ ಹೇಳಿರುವ ಈ ಪ್ರೀತಿ ಪೂರ್ವಕ ಮಾತುಗಳಿಂದ ಅಲ್ಲು ಅರ್ಜುನ್​ ಖುಷಿ ಆಗಿದ್ದಾರೆ. ‘ಧನ್ಯವಾದಗಳು ಸಲ್ಮಾನ್​ ಅವರೇ. ನಿಮ್ಮಿಂದ ಮೆಚ್ಚುಗೆ ಸ್ವೀಕರಿಸುವುದಕ್ಕೆ ಖುಷಿ ಎನಿಸುತ್ತದೆ. ಬೆಳ್ಳಿಪರದೆ ಮೇಲೆ ರಾಧೆ ಸಿನಿಮಾಗೆ ಅಭಿಮಾನಿಗಳು ಸೀಟಿಮಾರ್​ ಎನ್ನಲಿ. ನಿಮ್ಮ ಪ್ರೀತಿಗೆ ಧನ್ಯವಾದಗಳು’ ಎಂದು ಅಲ್ಲು ಅರ್ಜುನ್​ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ನಲ್ಲೂ ಮನೆಯಿಂದ ಹೊರಬಂದ ಸಲ್ಮಾನ್​ ಖಾನ್;​ ಆದ್ರೂ ಇದು ಮೆಚ್ಚುವ ಕೆಲಸ

Salman Khan: ಸಲ್ಮಾನ್​ ಖಾನ್​ ವಿರುದ್ಧ ತಿರುಗಿ ಬಿದ್ದ ಸುಶಾಂತ್ ಫ್ಯಾನ್ಸ್​; ‘ರಾಧೆ’ ಬಹಿಷ್ಕಾರ ಮಾಡಲು ಶಪಥ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!