AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈದ್​ಗೆ ಬಾಲಿವುಡ್​ನಲ್ಲಿ ಬಿಗ್​ ಕ್ಲ್ಯಾಶ್​; ಜಾನ್​-ಸಲ್ಲು ಚಿತ್ರಗಳು ಮುಖಾಮುಖಿ

ಸಲ್ಮಾನ್​ ಖಾನ್​ ನಟನೆಯ 'ರಾಧೆ' ಈದ್​ ಪ್ರಯುಕ್ತ ಮೇ 13ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಕಾಂಪಿಟೇಷನ್​ ಕೊಡೋಕೆ ಜಾನ್​ ಅಬ್ರಹಾಂ ರೆಡಿ ಆಗಿದ್ದಾರೆ.

ಈದ್​ಗೆ ಬಾಲಿವುಡ್​ನಲ್ಲಿ ಬಿಗ್​ ಕ್ಲ್ಯಾಶ್​; ಜಾನ್​-ಸಲ್ಲು ಚಿತ್ರಗಳು ಮುಖಾಮುಖಿ
ಸಲ್ಮಾನ್​ ಖಾನ್​-ಜಾನ್​ ಅಬ್ರಹಾಂ
Follow us
ರಾಜೇಶ್ ದುಗ್ಗುಮನೆ
|

Updated on: Mar 18, 2021 | 7:09 PM

ಬಾಲಿವುಡ್​ನಲ್ಲಿ ಸಿನಿಮಾಗಳು ಕ್ಲ್ಯಾಶ್​ ಆಗೋದು ಹೊಸ ವಿಚಾರ ಅಲ್ಲವೇ ಅಲ್ಲ. ಹಬ್ಬದ ಸಮಯದಲ್ಲಿ ಅಥವಾ ವಿಶೇಷ ದಿನಗಳಲ್ಲಿ ಸ್ಟಾರ್​ ನಟರ ಚಿತ್ರಗಳು ರಿಲೀಸ್​ ಆಗುತ್ತವೆ. ಕೊರೊನಾದಿಂದ ತಣ್ಣಗಾಗಿದ್ದ ಬಾಲಿವುಡ್​ ಪುಟಿದೆದ್ದಿದ್ದು, ಸಾಲು ಸಾಲು ಚಿತ್ರಗಳು ರಿಲೀಸ್​ಗೆ ರೆಡಿ ಆಗಿವೆ. ಈಗ ಈದ್​ ಹಬ್ಬಕ್ಕೆ ಬಾಲಿವುಡ್​ನಲ್ಲಿ ದೊಡ್ಡ ಕ್ಲ್ಯಾಶ್​ ಏರ್ಪಡುತ್ತಿದೆ. ಸಲ್ಮಾನ್​ ಖಾನ್​ ನಟನೆಯ ‘ರಾಧೆ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಈದ್​ ಪ್ರಯುಕ್ತ ಮೇ 13ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಕಾಂಪಿಟೇಷನ್​ ಕೊಡೋಕೆ ಜಾನ್​ ಅಬ್ರಹಾಂ ರೆಡಿ ಆಗಿದ್ದಾರೆ. ಅವರ ನಟನೆಯ ‘ಸತ್ಯಮೇವ ಜಯತೆ 2’ ಚಿತ್ರ ಕೂಡ ಈದ್​ಗೆ ಬಿಡುಗಡೆ ಆಗುತ್ತಿದೆ.

ಸತ್ಯಮೇವ ಜಯತೆ ಸಿನಿಮಾದಲ್ಲಿ ಜಾನ್​ ಅಬ್ರಹಾಂ ಮೂರು ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೊಸ ಲುಕ್​ಗಳನ್ನು ಚಿತ್ರತಂಡ ಶೀಘ್ರವೇ ರಿಲೀಸ್​ ಮಾಡಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ಸತ್ಯಮೇವ ಜಯತೆ-2 ಸಿನಿಮಾದಲ್ಲಿ ಜಾನ್​ ಅಬ್ರಹಾಂ ಲುಕ್​ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆದರೆ, ಇದನ್ನು ಚಿತ್ರತಂಡ ತಳ್ಳಿ ಹಾಕಿತ್ತು.

2009ರ ನಂತರ ಸಲ್ಮಾನ್​ ಖಾನ್​ ನಟನೆಯ ಚಿತ್ರಗಳು ಬಹುತೇಕವಾಗಿ ಈದ್​ ಅಂದೇ ತೆರೆಗೆ ಬರುತ್ತಿದೆ. ಈ ವರ್ಷವೂ ಸಲ್ಮಾನ್​ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ಆಲೋಚನೆಯಲ್ಲಿದ್ದಾರೆ. ಈಗ ಜಾನ್​ ಅಬ್ರಹಾಂ ಸಿನಿಮಾ ಕೂಡ ಇದೇ ದಿನ ಬರುತ್ತಿರುವುದು ಸಿನಿಮಾ ಪ್ರೇಕ್ಷಕರ ಖುಷಿ ಹೆಚ್ಚಿಸಿದೆ.

ಅಂದಹಾಗೆ, ಈ ಎರಡೂ ಸಿನಿಮಾಗಳು ಸಾಕಷ್ಟು ಆ್ಯಕ್ಷನ್​ನಿಂದ ಕೂಡಿರಲಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಧೆ ಚಿತ್ರಕ್ಕೆ ಪ್ರಭುದೇವ ಅವರ ನಿರ್ದೇಶನ ಇದೆ. ನಾಯಕಿಯಾಗಿ ದಿಶಾ ಪಟಾಣಿ ನಟಿಸಿದ್ದಾರೆ. ಜಾಕಿ ಶ್ರಾಫ್​, ರಣದೀಪ್​ ಹೂಡ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 2019ರ ಅಕ್ಟೋಬರ್​ 18ರಂದು ಚಿತ್ರ ಅಧಿಕೃತವಾಗಿ ಘೋಷಣೆ ಆಗಿತ್ತು. ಎಲ್ಲ ಅಂದುಕೊಂಡಿದ್ದರೆ ಕಳೆದ ಮೇ ತಿಂಗಳಲ್ಲೇ ಚಿತ್ರ ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು.

ಇನ್ನು ಸತ್ಯಮೇವ ಜಯತೆ 2ಗೆ ಮಿಲಪ್​ ಜಾವೇರಿ ನಿರ್ದೇಶನವಿದೆ. ಜಾನ್​ ಅಬ್ರಹಾಂಗೆ ಜತೆಯಾಗಿ ದಿವ್ಯಾ ಖೋಸ್ಲಾ ಕುಮಾರ್ ನಟಿಸಿದ್ದಾರೆ. 2018ರಲ್ಲಿ ತೆರೆಕಂಡ ಸತ್ಯಮೇವ ಜಯತೆ ಚಿತ್ರದ ಮುಂದಿನ ಭಾಗ ಇದಾಗಿದೆ.

ಇದನ್ನೂ ಓದಿ: ಈದ್​ ವೇಳೆಗೆ ತೆರೆಕಾಣಲಿದೆ ಸಲ್ಮಾನ್​ ಖಾನ್ ಅಭಿನಯದ​ ರಾಧೆ; ಪ್ರಭುದೇವ ನಿರ್ದೇಶನದ ಮೇಲೆ ಭಾರೀ ನಿರೀಕ್ಷೆ

ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ