AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ; ಬಿಗ್​ ಬಾಸ್​ಗೆ ಮಂಜು ಎಚ್ಚರಿಕೆ

ಬಿಗ್​ ಬಾಸ್​ ಮನೆಯಲ್ಲಿ ಗುರುವಾರ (ಮಾ.18) ಮನೆ ಮಂದಿಯೆಲ್ಲ ಕೂತು ಮಾತನಾಡುತ್ತಿದ್ದರು. ಈ ವೇಳೆ ರಾಜೀವ್​ ತಮ್ಮ ಉದ್ದ ಕೂದಲನ್ನು ಬಿಚ್ಚಿದ್ದಾರೆ. ಅವರ ನೀಳ ಕೂದಲನ್ನು ಕಂಡು ಮನೆ ಮಂದಿಯೆಲ್ಲ ಅಚ್ಚರಿಗೊಂಡಿದ್ದಾರೆ.

ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ; ಬಿಗ್​ ಬಾಸ್​ಗೆ ಮಂಜು ಎಚ್ಚರಿಕೆ
ಮಂಜು ಪಾವಗಡ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Mar 19, 2021 | 8:22 AM

Share

ಕಳೆದ ಬಾರಿಯ ಸೀಸನ್​ನಲ್ಲಿ ಶೈನ್​ ಶೆಟ್ಟಿ ಕೂದಲು-ಗಡ್ಡ ಬಿಟ್ಟಿದ್ದರು. ಇದರ ಮೇಲೆ ಬಿಗ್​ ಬಾಸ್​ ಕಣ್ಣು ಬಿದ್ದಿತ್ತು. ಅಷ್ಟೇ ಅಲ್ಲ, ಒಂದು ಸೀಕ್ರೆಟ್​ ಟಾಸ್ಕ್​ ನೀಡಿ ಅದನ್ನು ಕತ್ತರಿಸಿಬಿಟ್ಟಿದ್ದರು. ಈ ಬಾರಿ ಬಿಗ್​​ ಬಾಸ್​ ಮನೆ ಒಳಗೆ ಉದ್ದ ಕೂದಲ ಬಿಟ್ಟೋರು ರಾಜೀವ್​. ಇವರ ಕೂದಲ ಮೇಲೆ ಮನೆಯವರ ಕಣ್ಣು ಬಿದ್ದಿದೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ಮಂಜು ಪಾವಗಡ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಬಿಗ್​ ಬಾಸ್​ಮನೆಯಲ್ಲಿ ಗುರುವಾರ (ಮಾ.18) ಮನೆ ಮಂದಿಯೆಲ್ಲ ಕೂತು ಮಾತನಾಡುತ್ತಿದ್ದರು. ಈ ವೇಳೆ ರಾಜೀವ್​ ತಮ್ಮ ಉದ್ದ ಕೂದಲನ್ನು ಬಿಚ್ಚಿದ್ದಾರೆ. ಅವರ ನೀಳ ಕೂದಲನ್ನು ನೋಡಿ ಮನೆ ಮಂದಿಯೆಲ್ಲ ಅಚ್ಚರಿಗೊಂಡಿದ್ದಾರೆ.

ಈ ವೇಳೆ ಮಾತನಾಡಿದ್ದ ಮಂಜು, ರಾಜೀವ್​ ಬೇಸಿಗೆಯಲ್ಲಿ ಇಷ್ಟೊಂದು ಉದ್ದ ಕೂದಲ ಬಿಡಬಾರದು. ಬಿಗ್​ ಬಾಸ್​ ಮನೆಯಲ್ಲಿ ನಮಗೆ ಬೇಕಷ್ಟು ಆಹಾರ ಸಿಗಲ್ಲ. ಹೀಗಾಗಿ, ಈ ಆಹಾರವನ್ನೆಲ್ಲ ನಿಮ್ಮ ಕೂದಲೇ ತಿಂದು ಬಿಡುತ್ತದೆ. ಹೀಗಾಗಿ ಕೂದಲನ್ನು ಕತ್ತರಿಸಿ ಬಿಡಿ ಎಂದರು.

ಆಗ ರಾಜೀವ್​, ನನ್ನ ಕೂದಲ ಮೇಲೇಕೆ ಕಣ್ಣು ಎಂದು ಪ್ರಶ್ನೆ ಮಾಡಿದರು. ಆಗ ಮಂಜು, ನಾನು ಕೂದಲ ಮೇಲೆ ಕಣ್ಣನ್ನು ಹಾಕಿಲ್ಲ. ದಯವಿಟ್ಟು ಹಾಗೆ ತಿಳಿಬೇಡಿ ಎಂದು ಕೇಳಿದರು. ಈ ವೇಳೆ ಮಂಜು, ಅಯ್ಯೋ ಆಯ್ತಣ್ಣ ಇನ್ನು ಹಾಗೆ ಹೇಳುವುದಿಲ್ಲ ಎಂದರು. ಅಷ್ಟೇ ಅಲ್ಲ ಬಿಗ್​ ಬಾಸ್​ಗೆ ಒಂದು ಎಚ್ಚರಿಕೆಯನ್ನೂ ನೀಡಿದರು. ‘ರಾಜೀವ್​ ಅವರ ಕೂದಲಿಗೆ ಏನೂ ಆಗಬಾರದು. ಬಿಗ್​ ಬಾಸ್​… ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ’ ಎಂದು ಹೇಳಿದರು. ಇದನ್ನು ಕೇಳಿದ ರಾಜೀವ್​, ನೀವೆಲ್ಲರೂ ಸೇರಿ ನನ್ನ ಕೂದಲಿಗೆ ಒಂದು ಗತಿ ಕಾಣಿಸೋದು ಖಚಿತ ಎಂದು ನಕ್ಕರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ-ಮಂಜು ರೊಮ್ಯಾನ್ಸ್​ ಕಂಡು ನಾಚಿ ನೀರಾದ ಪುಟಾಣಿ ವಿಶ್ವ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ