AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಶಂಕರ್​ ಅಶ್ವತ್ಥ್​ಗೆ ಜೈಲು ಶಿಕ್ಷೆ! ಹಿರಿಯ ಜೀವಕ್ಕೂ ಕರುಣೆ ತೋರಿಸಲಿಲ್ಲ ಮನೆಯ ಸದಸ್ಯರು

ಬಿಗ್​ ಬಾಸ್​ನಲ್ಲಿ ಅತಿ ಹಿರಿಯ ಸ್ಪರ್ಧಿ ಶಂಕರ್​ ಅಶ್ವತ್ಥ್. ಆದರೆ ಟಾಸ್ಕ್​ ವಿಚಾರ ಬಂದಾಗ ಇಲ್ಲಿ ವಯಸ್ಸಿನ ನೆಪ ಹೇಳುವಂತಿಲ್ಲ. ಆದರೂ ಶಂಕರ್​ಗೆ ಕೆಲವೊಂದು ಎಕ್ಸ್​ಕ್ಯೂಸ್​ಗಳು ಸಿಕ್ಕಿದ್ದವು.

ನಟ ಶಂಕರ್​ ಅಶ್ವತ್ಥ್​ಗೆ ಜೈಲು ಶಿಕ್ಷೆ! ಹಿರಿಯ ಜೀವಕ್ಕೂ ಕರುಣೆ ತೋರಿಸಲಿಲ್ಲ ಮನೆಯ ಸದಸ್ಯರು
ಬಿಗ್​ ಬಾಸ್​ನಲ್ಲಿ ಶಂಕರ್​ ಅಶ್ವತ್ಥ್
ಮದನ್​ ಕುಮಾರ್​
|

Updated on: Mar 19, 2021 | 10:29 AM

Share

ತಮ್ಮ ವಿಶೇಷ ವ್ಯಕ್ತಿತ್ವದ ಕಾರಣಕ್ಕಾಗಿ ನಟ ಶಂಕರ್​ ಅಶ್ವತ್ಥ್​ ಅವರು ಬಿಗ್​ ಬಾಸ್​ ಕನ್ನಡ ಸೀಸನ್ 8ರಲ್ಲಿ ಗಮನ ಸೆಳೆಯುತ್ತಿದ್ದಾರೆ. ತಮ್ಮ ಜೀವನದ ಹಲವು ಅನುಭವಗಳನ್ನು ಇತರೆ ಸ್ಪರ್ಧಿಗಳ ಜೊತೆ ಹಂಚಿಕೊಳ್ಳುತ್ತ ಕಾಲ ಕಳೆಯುತ್ತಿದ್ದಾರೆ. ಆದರೆ ಮೂರನೇ ವಾರದಲ್ಲಿ ಅವರಿಗೆ ಜೈಲು ಶಿಕ್ಷೆ ನೀಡಲಾಗಿದೆ. ಖೈದಿಯ ಬಟ್ಟೆ ಧರಿಸಿ ಅವರು ಜೈಲುಪಾಲಾಗಿದ್ದಾರೆ!

ಪ್ರತಿ ವಾರದಲ್ಲಿ ಅತಿ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಯನ್ನು ಬಿಗ್​ ಬಾಸ್​ ಮನೆಯ ಜೈಲಿಗೆ ಕಳಿಸಲಾಗುತ್ತದೆ. ಅತಿ ಕಳಪೆ ಯಾರು ಎಂಬುದನ್ನು ಮನೆಯ ಎಲ್ಲ ಸದಸ್ಯರು ಒಟ್ಟಾಗಿ ಸೇರಿ ನಿರ್ಧರಿಸಬೇಕು. ಈ ವಾರ ಎಲ್ಲರೂ ಸೇರಿ ಶಂಕರ್​ ಅಶ್ವತ್ಥ್​ ಅವರ ಹೆಸರನ್ನು ಸೂಚಿಸಿದ್ದಾರೆ. ಅದರ ಅನುಸಾರ ಅವರಿಗೆ ಬಿಗ್​ ಬಾಸ್​ ಜೈಲು ಶಿಕ್ಷೆ ನೀಡಿದ್ದಾರೆ. ಜೈಲಿಗೆ ಹೋಗುವ ಸ್ಪರ್ಧಿಯು ಮನೆಯ ಯಾವುದೇ ಸೌಲಭ್ಯಗಳನ್ನು ಬಳಸುವಂತಿಲ್ಲ. ಅಡುಗೆಗೆ ಬೇಕಾಗುವ ತರಕಾರಿಯನ್ನು ಅವರೇ ಹೆಚ್ಚಿಕೊಡಬೇಕು. ಮೊದಲ ವಾರ ಧನುಶ್ರೀ, ಎರಡನೇ ವಾರ ಶಮಂತ್​ಗೆ ಈ ಶಿಕ್ಷೆ ನೀಡಲಾಗಿತ್ತು. ಈಗ ಶಂಕರ್​ ಅಶ್ವತ್ಥ್​ ಅನುಭವಿಸಬೇಕಾಗಿದೆ.

ಬಿಗ್​ ಬಾಸ್​ನಲ್ಲಿ ಎಲ್ಲ ವಯೋಮಾನದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅತಿ ಕಿರಿಯ ಸ್ಪರ್ಧಿ ವಿಶ್ವನಾಥ್​. ಅತಿ ಹಿರಿಯ ಸ್ಪರ್ಧಿ ಶಂಕರ್​ ಅಶ್ವತ್ಥ್. ಆದರೆ ಟಾಸ್ಕ್​ ವಿಚಾರ ಬಂದಾಗ ಇಲ್ಲಿ ವಯಸ್ಸಿನ ನೆಪ ಹೇಳುವಂತಿಲ್ಲ. ಇಷ್ಟು ದಿನಗಳ ಕಾಲ ಶಂಕರ್​ ಅಶ್ವತ್ಥ್​ ಅವರಿಗೆ ವಯಸ್ಸಿನ ಕಾರಣದಿಂದ ಕೆಲವೊಂದು ಎಕ್ಸ್​ಕ್ಯೂಸ್​ಗಳು ಸಿಕ್ಕಿವೆ. ಆದರೆ ಕಳಪೆ ಯಾರು ಎಂಬುದನ್ನು ತಿಳಿಸುವ ಸಂದರ್ಭದಲ್ಲಿ ಅವರ ವಯಸ್ಸನ್ನೂ ಲೆಕ್ಕಿಸದೇ ಎಲ್ಲರೂ ಗಟ್ಟಿ ನಿರ್ಧಾರ ತಿಳಿಸಿದ್ದಾರೆ.

ಶಂಕರ್​ ಜೈಲುಪಾಲಾಗುವ ಎಪಿಸೋಡ್ ಶುಕ್ರವಾರ (ಮಾ.19) ಪ್ರಸಾರ ಆಗಲಿದೆ. ಅದಕ್ಕೂ ಮುನ್ನ, ಅಂದರೆ ಮಾ.18ರ ಎಪಿಸೋಡ್​ನಲ್ಲಿ ತಮ್ಮ ಬದುಕಿನ ಕಷ್ಟಗಳ ಬಗ್ಗೆ ಶಂಕರ್​ ಮಾತನಾಡಿದ್ದರು. ‘ನನ್ನ ಮೊದಲ ಸೀರಿಯಲ್​ಗೆ ನನ್ನ ತಂದೆ ಇರಬೇಕು ಎಂದುಕೊಂಡಿದ್ದೆ. ಆದರೆ, ನನ್ನ ದುರಾದೃಷ್ಟ. ನನ್ನ ಧಾರಾವಾಹಿಯ ಮೊದಲ ದಿನ ಫಸ್ಟ್​​ ಶಾಟ್ ತೆಗೆಯೋಕೆ ಅವರನ್ನು​ ಕರಿಯಬೇಕು ಎಂದು ಹೋದೆ. ಆದರೆ, ಅವರು ಎಡಗೈ, ಎಡಗಾಲಿಗೆ ಪ್ಯಾರಾಲಿಸಿಸ್​ ಆಗಿತ್ತು. ಆದರೂ ಅವರನ್ನು ದನವನ್ನು ಎಳೆದುಕೊಂಡು ಹೋದಂತೆ ಎಳೆದುಕೊಂಡು ಬಂದಿದ್ದೆ. ನನ್ನ ತಂದೆ ವಾಂತಿ ಮಾಡಿಕೊಂಡರು. ಆದರೂ ಫಸ್ಟ್​ ಶಾಟ್​ ಅವರದ್ದೇ ತೆಗೆಸಿದ್ದೆವು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರನ್ನು ಐಸಿಯುಗೆ ಅಡ್ಮಿಟ್​ ಮಾಡಿದ್ದರು’ ಎಂದು ಆ ನೋವಿನ ಘಟನೆಯನ್ನು ಶಂಕರ್​ ನೆನಪು ಮಾಡಿಕೊಂಡರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..

ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ; ಬಿಗ್​ ಬಾಸ್​ಗೆ ಮಂಜು ಎಚ್ಚರಿಕೆ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More