AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧ್ರುವ ಹಿಂದೆ ಬಿದ್ದ ತೆಲುಗು ಸ್ಟಾರ್​ ನಿರ್ದೇಶಕ? ಇದು ಧೂಳ್​ ಧಮಾಕಾ ಕಾಂಬಿನೇಷನ್​!

ಧ್ರುವ ಸರ್ಜಾ ಅಭಿಮಾನಿಗಳು ಫುಲ್​ ಖುಷ್​ ಆಗುವಂತಹ ಸುದ್ದಿ ಕೇಳಿಬರುತ್ತಿದೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಜೊತೆ ಅವರು ಕೈ ಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.

ಧ್ರುವ ಹಿಂದೆ ಬಿದ್ದ ತೆಲುಗು ಸ್ಟಾರ್​ ನಿರ್ದೇಶಕ? ಇದು ಧೂಳ್​ ಧಮಾಕಾ ಕಾಂಬಿನೇಷನ್​!
ಪುರಿ ಜಗನ್ನಾಥ್​- ಧ್ರುವ ಸರ್ಜಾ
ಮದನ್​ ಕುಮಾರ್​
|

Updated on:Mar 19, 2021 | 7:59 AM

Share

ಕನ್ನಡ ಚಿತ್ರರಂಗದ ‘ಆ್ಯಕ್ಷನ್​ ಪ್ರಿನ್ಸ್​’ ಧ್ರುವ ಸರ್ಜಾ ಅವರು ಸದ್ಯ ‘ಪೊಗರು’ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಆ ಚಿತ್ರದ ಗೆಲುವಿನಿಂದಾಗಿ ಅವರ ಖ್ಯಾತಿ ಅಕ್ಕಪಕ್ಕದ ರಾಜ್ಯಗಳಿಗೂ ಹಬ್ಬಿದೆ. ಪರಭಾಷೆಯಲ್ಲೂ ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲಿನ ಸ್ಟಾರ್​ ನಿರ್ದೇಶಕರು ಕೂಡ ಧ್ರುವ ಜೊತೆ ಸಿನಿಮಾ ಮಾಡಲು ಇಂಟರೆಸ್ಟ್​ ತೋರಿಸುತ್ತಿದ್ದಾರೆ.

ಹೌದು, ಇಂಥದ್ದೊಂದು ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಜೊತೆ ಧ್ರುವ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಟಾಲಿವುಡ್​ನಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿರುವ ಪುರಿ ಜಗನ್ನಾಥ್​ ಅವರಿಗೆ 2019ರಲ್ಲಿ ‘ಇಸ್ಮಾರ್ಟ್​ ಶಂಕರ್​’ ಮೂಲಕ ಭರ್ಜರಿ ಗೆಲುವು ಸಿಕ್ಕಿತ್ತು. ಅದರ ನಂತರ ಅವರು ವಿಜಯ್​ ದೇವರಕೊಂಡ ಜೊತೆ ‘ಲೈಗರ್​’ ಸಿನಿಮಾ ಅನೌನ್ಸ್​ ಮಾಡಿದರು. ಈಗ ಅವರು ಧ್ರುವ ಜೊತೆ ಕೈ ಜೋಡಿಸಲಿರುವುದು ವಿಶೇಷ.

ತಮ್ಮ ಸಿನಿಮಾದ ಹೀರೋಗಳನ್ನು ಸಿಕ್ಕಾಪಟ್ಟೆ ರಗಡ್​ ಆಗಿ ತೋರಿಸುವಲ್ಲಿ ಪುರಿ ಜಗನ್ನಾಥ್​ ಫೇಮಸ್​. ಅದಕ್ಕೆ ‘ಇಸ್ಮಾರ್ಟ್​ ಶಂಕರ್’ ಚಿತ್ರವೇ​ ಲೇಟೆಸ್ಟ್​ ಉದಾಹರಣೆ. ಇನ್ನು, ಧ್ರುವ ಕೂಡ ಪೊಗರು ಸಿನಿಮಾದಲ್ಲಿ ಹಿಂದೆಂದಿಗಿಂತಲೂ ರಗಡ್​ ಆಗಿ ಕಾಣಿಸಿಕೊಂಡಿದ್ದರು. ಈಗ ಇವರಿಬ್ಬರ ಕಾಂಬಿನೇಷನ್​ನ ಸಿನಿಮಾ ಸೆಟ್ಟೇರಿದ್ದೇ ಹೌದಾದರೆ ಧೂಳ್ ಧಮಾಕಾ ಆಗುವುದರಲ್ಲಿ ಅನುಮಾನವೇ ಇಲ್ಲ. ಈ ಕುರಿತಂತೆ ಧ್ರುವ ಮತ್ತು ಪುರಿ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಧಿಕೃತವಾಗಿ ಸುದ್ದಿ ನೀಡುವುದೊಂದೇ ಬಾಕಿ ಇದೆ ಎಂಬುದು ಮೂಲಗಳ ಮಾಹಿತಿ.

ಧ್ರುವ ಸರ್ಜಾಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಪೊಗರು ಬಳಿಕ ಮತ್ತೆ ಅವರು ನಿರ್ದೇಶಕ ನಂದಕಿಶೋರ್​ ಜೊತೆ ಸಿನಿಮಾ ಮಾಡುತ್ತಿದ್ದು, ಆ ಚಿತ್ರಕ್ಕೆ ದುಬಾರಿ ಎಂದು ಶೀರ್ಷಿಕೆ ಇಡಲಾಗಿದೆ. ಅತ್ತ, ಪುರಿ ಕೂಡ ‘ಲೈಗರ್​’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದು ಮುಗಿದ ಬಳಿಕವೇ ಧ್ರುವ-ಪುರಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಇನ್ನು, ಕನ್ನಡ ಚಿತ್ರರಂಗದ ಜೊತೆ ಪುರಿ ಜಗನ್ನಾಥ್​ ಅವರಿಗೆ ಮೊದಲಿನಿಂದಲೂ ನಂಟು ಇದೆ. ಪುನೀತ್​ ರಾಜ್​ಕುಮಾರ್​ ಮೊದಲ ಬಾರಿಗೆ ಹೀರೋ ಆದ ‘ಅಪ್ಪು’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದು ಇದೇ ಪುರಿ ಜಗನ್ನಾಥ್​. ಶಿವರಾಜ್​ಕುಮಾರ್​ ನಟನೆಯ ‘ಯುವರಾಜ’ ಮತ್ತು ಇಶಾನ್​ ಅಭಿನಯದ ‘ರೋಗ್​’ ಚಿತ್ರಗಳು ಮೂಡಿಬಂದಿದ್ದು ಕೂಡ ಪುರಿ ನಿರ್ದೇಶನದಲ್ಲೇ.

ಇದನ್ನೂ ಓದಿ: ಧ್ರುವ ಸರ್ಜಾರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳಿಗೆ ಬಿತ್ತು ಪೊಲೀಸ್ ಲಾಠಿ ಏಟು

Pogaru First Day Collection: ಧ್ರುವ ಸರ್ಜಾ ನಟನೆಯ ಪೊಗರು ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?

Published On - 7:55 am, Fri, 19 March 21

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು