ಮಾಜಿ ಪತಿಯಿಂದ ತಪ್ಪಿದ್ದ ಆಫರ್​ ಸಮಂತಾಗೆ ಮತ್ತೆ ಸಿಕ್ತು; ಮದುವೆ ತಯಾರಿಯೇ ಇದಕ್ಕೆ ಕಾರಣ

ಬ್ಯಾಕ್​ ಟು ಬ್ಯಾಕ್​ ಹಿಟ್​ ಕೊಟ್ಟ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಬಾಲಿವುಡ್​ ನಟ ಶಾರುಖ್​ ಖಾನ್​ ಜತೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ನಯನತಾರಾ ನಾಯಕಿ. ಆದರೆ ಅವರಿಗಿಂತಲೂ ಮುಂಚೆ ಸಮಂತಾಗೆ ಆಫರ್ ನೀಡಲಾಗಿತ್ತು.

ಮಾಜಿ ಪತಿಯಿಂದ ತಪ್ಪಿದ್ದ ಆಫರ್​ ಸಮಂತಾಗೆ ಮತ್ತೆ ಸಿಕ್ತು; ಮದುವೆ ತಯಾರಿಯೇ ಇದಕ್ಕೆ ಕಾರಣ
ಸಮಂತಾ
Follow us
| Updated By: ಮದನ್​ ಕುಮಾರ್​

Updated on: Oct 28, 2021 | 7:32 AM

ಸಮಂತಾ ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದ ಹೊರತಾಗಿಯೂ ಅವರು ಸಿನಿಮಾ ಕೆಲಸಗಳನ್ನು ಬಿಟ್ಟಿಲ್ಲ. ಚಿತ್ರರಂಗದ ಬಗ್ಗೆ ಅವರು ಸಾಕಷ್ಟು ಗಮನ ಹರಿಸುತ್ತಿದ್ದಾರೆ. ಈ ಮಧ್ಯೆ, ಸಮಂತಾ ಅವರಿಗೆ ತಪ್ಪಿ ಹೋಗಿದ್ದ ಆಫರ್​ ಒಂದು ಮರಳಿ ಸಿಕ್ಕಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ.

ಬ್ಯಾಕ್​ ಟು ಬ್ಯಾಕ್​ ಹಿಟ್​ ಕೊಟ್ಟ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಬಾಲಿವುಡ್​ ನಟ ಶಾರುಖ್​ ಖಾನ್​ ಜತೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ನಯನತಾರಾ ನಾಯಕಿ. ಆದರೆ ಅವರಿಗಿಂತಲೂ ಮುಂಚೆ ಸಮಂತಾಗೆ ಆಫರ್ ನೀಡಲಾಗಿತ್ತು. ನಟನೆಗೆ ಕೊಂಚ ಬ್ರೇಕ್​ ನೀಡಿ ನಾಗ ಚೈತನ್ಯ ಜೊತೆ ಮಗು ಪಡೆಯಬೇಕು ಎಂದು ಸಮಂತಾ ಪ್ಲ್ಯಾನ್​ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಅವರು ಶಾರುಖ್​ ಸಿನಿಮಾ ಆಫರ್​ ರಿಜೆಕ್ಟ್​ ಮಾಡಿದ್ದರು. ಆದರೆ, ಆ ಸಂದರ್ಭದಲ್ಲೇ ಅವರ ಕುಟುಂಬದಲ್ಲಿ ಬಿರುಗಾಳಿ ಬೀಸಿತ್ತು. ಸಮಂತಾ ಮತ್ತು ನಾಗ ಚೈತನ್ಯ ಬೇರಾದರು. ಸಮಂತಾಗೆ ಈ ಆಫರ್​ ತಪ್ಪೋಕೆ ನಾಗ ಚೈತನ್ಯ ಅವರೇ ನೇರ ಕಾರಣ ಎಂದು ಅನೇಕರು ದೂರಿದ್ದರು. ಅಚ್ಚರಿ ಎಂಬಂತೆ ಈಗ ಈ ಆಫರ್ ಮರಳಿ ಸಮಂತಾ ಬಳಿ ಬಂದಿದೆ.

ಎಲ್ಲರಿಗೂ ಗೊತ್ತಿರುವಂತೆ ನಯನತಾರಾಗೆ ಶೀಘ್ರವೇ ಮದುವೆ ಆಗುತ್ತಿದೆ. ಬಹುಕಾಲದ ಗೆಳೆಯ, ನಿರ್ದೇಶಕ ವಿಘ್ನೇಶ್​ ಶಿವನ್​ ಜತೆ ಅವರು ಹಸೆಮಣೆ ಏರುತ್ತಿದ್ದಾರೆ. ಇದಕ್ಕೆ ಅವರು ತಯಾರಿ ಆಂಭಿಸಿದ್ದಾರೆ. ಎಲ್ಲವೂ ಪ್ಲ್ಯಾನ್​ ಪ್ರಕಾರ ನಡೆದಿದ್ದರೆ ಶೂಟಿಂಗ್​ ಮುಗಿದ ನಂತರ ನಯನತಾರಾ ಹಸೆಮಣೆ ಏರಬೇಕಿತ್ತು. ಆದರೆ, ಶಾರುಖ್​ ಖಾನ್​ ಮಗ ಆರ್ಯನ್ ಖಾನ್​ ಅವರನ್ನು ಜೈಲಿನಿಂದ ಹೊರ ತರುವ ಪ್ರಯತ್ನದಲ್ಲಿದ್ದಾರೆ. ಈ ಕಾರಣದಿಂದ ಅವರು ಶೂಟಿಂಗ್​ ಸೆಟ್​ಗೆ ಬರುತ್ತಿಲ್ಲ. ಇದರಿಂದ ಶೂಟಿಂಗ್​ ವಿಳಂಬವಾಗಿದೆ. ಈ ಕಾರಣಕ್ಕೆ ನಯನತಾರಾ ಸಿನಿಮಾದಿಂದ ಹೊರ ನಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ, ನಿರ್ದೇಶಕರು ಮರಳಿ ಸಮಂತಾ ಬಳಿಯೇ ತೆರಳಿದ್ದಾರೆ. ಸಮಂತಾ ಮರುಮಾತಿಲ್ಲದೆ ಈ ಆಫರ್​ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಸಮಂತಾ ನನ್ನ ಮೊಮ್ಮಗಳಿದ್ದಂತೆ’; ನಟಿಗೆ ಸಾಕಷ್ಟು ಅಕ್ರಮ ಸಂಬಂಧ ಇದೆ ಎಂದಿದ್ದ ವೈದ್ಯನ ಹೊಸ ಹೇಳಿಕೆ

ಮಗಳ ಮದುವೆ ಬಗ್ಗೆ ಚಿಂತೆ ಮಾಡುವ ಪಾಲಕರಿಗೆ ಸಮಂತಾ ವಿಶೇಷ ಮನವಿ 

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ