ರಶ್ಮಿಕಾ To ಆಲಿಯಾ ಭಟ್; ಎಲ್ಲರಿಗೂ ಫೇವರಿಟ್ ನಟಿ ಇವರೇ ನೋಡಿ

ಸಮಂತಾ ಅವರ ಜನಪ್ರಿಯತೆಯ ಬಗ್ಗೆವಿಡಿಯೋ ಒಂದು ವೈರಲ್ ಆಗಿದೆ. ರಶ್ಮಿಕಾ, ಆಲಿಯಾ ಭಟ್, ರಾಮ್ ಚರಣ್ ಮುಂತಾದ ಹಲವು ಸೆಲೆಬ್ರಿಟಿಗಳು ಸಮಂತಾ ಅವರನ್ನು ಹೊಗಳಿ, ಅವರೊಂದಿಗೆ ಸಿನಿಮಾ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಅಭಿನಯ ಮತ್ತು ವ್ಯಕ್ತಿತ್ವದಿಂದಾಗಿ ಅವರು ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ.

ರಶ್ಮಿಕಾ To ಆಲಿಯಾ ಭಟ್; ಎಲ್ಲರಿಗೂ ಫೇವರಿಟ್ ನಟಿ ಇವರೇ ನೋಡಿ
ಆಲಿಯಾ-ರಶ್ಮಿಕಾ
Edited By:

Updated on: Jun 19, 2025 | 8:00 AM

ಕೆಲವು ಹೀರೋಯಿನ್​ಗಳು ಎಲ್ಲರ ಫೇವರಿಟ್ ಎನಸಿಕೊಂಡು ಬಿಡುತ್ತಾರೆ. ಕೇವಲ ಹೀರೋಗಳಿಗೆ ಮಾತ್ರವಲ್ಲ, ಹೀರೋಯಿನ್​ಗಳಿಗೂ ಆ ನಟಿಯರು ಇಷ್ಟ ಆಗುತ್ತಾರೆ. ಸೆಲೆಬ್ರಿಟಿಗಳಿಗೇ ಇಷ್ಟ ಆಗಿದ್ದಾರೆ ಎಂದಾದರೆ ಇನ್ನು ಅವರು ಜನ ಸಾಮಾನ್ಯರಿಗೆ ಇಷ್ಟ ಆಗದೆ ಇರಲು ಸಾಧ್ಯವೇ? ಅಷ್ಟಕ್ಕೂ ಯಾರು ಆ ನಟಿ? ಅವರೇ ಸಮಂತಾ. ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿ ಆಗಿರೋ ಸಮಂತಾ (Samantha) ಎಲ್ಲರ ಫೇವರಿಟ್. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಒಂದು ವೈರಲ್ ಆಗಿ ಗಮನ ಸೆಳೆದಿದೆ.

ಸಮಂತಾ ಅವರು ದಕ್ಷಿಣದ ಜೊತೆಗೆ ಹಿಂದಿಯಲ್ಲೂ ನಟಿಸಿದ್ದಾರೆ. ಅವರು ಅನೇಕರ ಫೇವರಿಟ್ ನಟಿ ಎನಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ, ಆಲಿಯಾ ಭಟ್, ರಾಮ್ ಚರಣ್ ಸೇರಿದಂತೆ ಅನೇಕರು ಸಮಂತಾ ಅವರನ್ನು ಹೊಗಳಿದ್ದಾರೆ ಮತ್ತು ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವ ಆಸೆಯನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ
ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಫುಡ್ ವ್ಲಾಗರ್ ಆಗಿದ್ದೇಕೆ?
ಪ್ರೆಗ್ನೆಂಟ್ ಕಿಯಾರಾಗೆ ವಿಶೇಷ ಸಹಾಯ ಮಾಡಿದ ಯಶ್; ಆಹಾ ಎಷ್ಟೊಳ್ಳೆ ಮನಸ್ಸು
ಭಾರತದ ಸಿನಿಮಾ ಇತಿಹಾಸದಲ್ಲೇ ದುಬಾರಿ ಸೆಟ್ ನಿರ್ಮಿಸಿದ ರಾಜಮೌಳಿ
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ

‘ಸಮಂತಾ ಎಂದರೆ ನಂಗೆ ಇಷ್ಟ’ ಎಂದು ಮೃಣಾಲ್ ಠಾಕೂರ್ ಹೇಳಿದ್ದರು. ಮೃಣಾಲ್ ದಕ್ಷಿಣದ ಬಹುಬೇಡಿಕೆಯ ನಟಿ. ನಂಗೆ ಯಾವ ನಟಿಯೂ ಇಷ್ಟ ಇಲ್ಲ ಎಂದು ಹೇಳಬಹುದಿತ್ತು. ಆದರೆ, ಅವರು ಸಮಂತಾ ಹೆಸರನ್ನು ತೆಗೆದುಕೊಂಡರು. ‘ನನಗೆ ಸಮಂತಾ ಜೊತೆ ಆ್ಯಕ್ಷನ್ ಸಿನಿಮಾ ಮಾಡಬೇಕು’ ಎಂದು ಆಲಿಯಾ ಭಟ್ ಅವರು ಈ ಮೊದಲು ಹೇಳಿದ್ದರು. ಆಲಿಯಾ ಭಟ್ ಅವರು ಆ್ಯಕ್ಷನ್ ಮಾಡೋದನ್ನು ಇಷ್ಟಪಡುತ್ತಾರೆ. ಸಮಂತಾ ಕೂಡ ಹಾಗೆಯೇ. ಇಬ್ಬರ ಕಾಂಬಿನೇಷನ್​ನಲ್ಲಿ ಸಿನಿಮಾ ಬರಲಿ ಎಂದು ಅನೇಕರು ಆಶಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕೂಡ ಸಮಂತಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಸಮಂತಾ ಅವರನ್ನು ಸ್ಯಾಮಿ ಎಂದು ಪ್ರಿತಿಯಿಂದ ಕರೆದರು ರಶ್ಮಿಕಾ. ‘ಸ್ಯಾಮಿ ಅದ್ಭುತ ನಟಿ’ ಎಂದು ಹೇಳಿದರು. ‘ಫೇವರಿಟ್ ನಟಿ ಎಂದರೆ ಅದು ಸಮಂತಾ’ ಎಂದು ರಾಮ್ ಚರಣ್ ಹೇಳಿದ್ದರು.

ಇದನ್ನೂ ಓದಿ: ಸಿನಿಮಾ ಮೇಲಿನ ಪ್ರೀತಿಗೆ ನಾಗ ಚೈತನ್ಯ ಜೊತೆ ಮತ್ತೆ ಒಂದಾಗ್ತಾರಾ ಸಮಂತಾ?

ಸಮಂತಾ ಅವರು ಇತ್ತೀಚೆಗೆ ಅನಾರೋಗ್ಯದ ಕಾರಣಕ್ಕೆ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡರು. ಅವರು ಹೆಚ್ಚಾಗಿ ಸಿನಿಮಾಮಾಡುತ್ತಿಲ್ಲ. 2023ರಲ್ಲಿ ಬಂದ ಅವರ ನಟನೆಯ ‘ಖುಷಿ’ ಅವರ ಅಭಿನಯದ ಕೊನೆಯ ಸಿನಿಮಾ. ಇದಾದ ಬಳಿಕ ಯಾವುದೇ ಚಿತ್ರಗಳು ರಿಲೀಸ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us