AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವೆಲ್ಲರೂ ಮಾಲಾಶ್ರೀಗೆ ಬೆಂಬಲವಾಗಿ ನಿಂತುಕೊಳ್ತೀವಿ; ದೇವರಾಜ್​ ಭಾವುಕ ನುಡಿ

ರಾಜ್ಯದ ಎಲ್ಲಾ ಜನರನ್ನೂ, ಚಿತ್ರಪ್ರೇಮಿಗಳನ್ನೂ ಕೈಮುಗಿದು ಕೇಳಿಕೊಳ್ತೀನಿ. ದಯವಿಟ್ಟು ಕೊರೊನಾ ಸೋಂಕಿನ ವಿಚಾರ ನಿರ್ಲಕ್ಷಿಸಬೇಡಿ. ಮಾಸ್ಕ್ ಹಾಕಿಕೊಳ್ಳಿ, ಲಸಿಕೆ ಹಾಕಿಸಿಕೊಳ್ಳಿ ಎಂದು ದೇವರಾಜ್​ ಮನವಿ ಮಾಡಿದರು.

ನಾವೆಲ್ಲರೂ ಮಾಲಾಶ್ರೀಗೆ ಬೆಂಬಲವಾಗಿ ನಿಂತುಕೊಳ್ತೀವಿ; ದೇವರಾಜ್​ ಭಾವುಕ ನುಡಿ
ದೇವರಾಜ್​-ಕೋಟಿ ರಾಮು
Follow us
ರಾಜೇಶ್ ದುಗ್ಗುಮನೆ
|

Updated on: Apr 26, 2021 | 9:58 PM

ಸ್ಯಾಂಡಲ್​ವುಡ್​ ನಟಿ ಮಾಲಾಶ್ರೀ ಅವರ ಗಂಡ, ಖ್ಯಾತ ನಿರ್ಮಾಪಕ ಕೋಟಿ ರಾಮು (52) ಕೊರೊನಾದಿಂದ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದೆ. ಅಷ್ಟೇ ಅಲ್ಲ, ಸಾವಿನ ಬಗ್ಗೆ ಹಿರಿಯ ನಟ ದೇವರಾಜ್​ ಭಾವುಕರಾಗಿ ಮಾತನಾಡಿದ್ದಾರೆ.

ರಾಮು ಸಾವಿನ ಬಗ್ಗೆ ಟಿವಿ9 ಜತೆಗೆ ಮಾತಾಡಿರುವ ದೇವರಾಜ್​, ರಾಮು ಅವರು ಆಸ್ಪತ್ರೆ ಸೇರಿದ್ದೂ ಗೊತ್ತಿರಲಿಲ್ಲ. ನನಗೂ ಅವರಿಗೂ 30 ವರ್ಷಗಳ ಗೆಳೆತನ. ರಾಮು ಒಳ್ಳೆಯ ವ್ಯಕ್ತಿ, ನಿರ್ಮಾಪಕ. ಮಾಲಾಶ್ರೀಯೂ ನನಗೆ ಉತ್ತಮ ಗೆಳತಿ. ರಾಮು ನಿಧನ ಕನ್ನಡ ಸಿನಿಮಾ ಉದ್ಯಮಕ್ಕೆ ಇದು ದೊಡ್ಡ ನಷ್ಟ. 2 ತಿಂಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ. ಅದೇ ನನ್ನ ಕೊನೆಯ ಭೇಟಿ ಎಂದು ದೇವರಾಜ್​ ಹೇಳಿದ್ದಾರೆ.

ರಾಮು-ಮಾಲಾಶ್ರೀ ದಂಪತಿಗಳು ಚಿತ್ರರಂಗದಲ್ಲಿ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಅವರು ಅದ್ದೂರಿ ನಿರ್ಮಾಪಕ ಎಂದು ಹೆಸರುವಾಸಿಯಾಗಿದ್ದರು. ರಾಮು ಎಂದಿಗೂ ಕೇರ್​ಲೆಸ್ ಆಗಿ ಇರುತ್ತಾ ಇರಲಿಲ್ಲ. ಬೇರೆ ಭಾಷೆಗಳಿಗಿಂತಲೂ ಕನ್ನಡದ ಸಿನಿಮಾಗಳು ಕಡಿಮೆ ಆಗಬಾರದು ಎಂಬ ತುಡಿತ ಅವರದ್ದಾಗಿತ್ತು. ಅವರ ಗೆಳೆಯರಿಗೆ ಭರಿಸಲಾಗದ ನಷ್ಟವಿದು. ನಾವೆಲ್ಲರೂ ಮಾಲಾಶ್ರೀ ಜೊತೆಗೆ ಬೆಂಬಲವಾಗಿ ನಿಂತುಕೊಳ್ತೀವಿ ಎಂದು ದೇವರಾಜ್​ ಭರವಸೆ ನೀಡಿದರು.

ರಾಜ್ಯದ ಎಲ್ಲಾ ಜನರನ್ನೂ, ಚಿತ್ರಪ್ರೇಮಿಗಳನ್ನೂ ಕೈಮುಗಿದು ಕೇಳಿಕೊಳ್ತೀನಿ. ದಯವಿಟ್ಟು ಕೊರೊನಾ ಸೋಂಕಿನ ವಿಚಾರ ನಿರ್ಲಕ್ಷಿಸಬೇಡಿ. ಮಾಸ್ಕ್ ಹಾಕಿಕೊಳ್ಳಿ, ಲಸಿಕೆ ಹಾಕಿಸಿಕೊಳ್ಳಿ ಎಂದು ದೇವರಾಜ್​ ಮನವಿ ಮಾಡಿದರು.

ಇದನ್ನೂ ಓದಿ:  Producer Ramu Death: ಕೊರೊನಾ ಸೋಂಕಿನಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ನಿಧನ

ನನಗಾಗಿ ರಾಜಕುಮಾರ ಸಿನಿಮಾ ಟೈಟಲ್ ಬಿಟ್ಟುಕೊಟ್ಟಿದ್ರು; ನಿರ್ಮಾಪಕ ರಾಮು ನಿಧನ ಸುದ್ದಿ ಕೇಳಿ ಭಾವುಕರಾದ ಪುನೀತ್​  

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ