AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗ್ಲಾದ್ರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ -ರಾಗಿಣಿ ಬಿಡುಗಡೆಯ ನಿರೀಕ್ಷೆಯಲ್ಲಿರುವ ತಂದೆ ರಾಕೇಶ್​ ಸಂತಸ

ಮಗಳು ರಾಗಿಣಿ ಬಿಡುಗಡೆ ಆಗ್ತಿರುವುದು ಸಂತಸ ತಂದಿದೆ. ನನ್ನ ಮಗಳು ರಾಗಿಣಿ ಜಾಮೀನಿನ ಮೇಲೆ ಈಗ ಮನೆಗೆ ಬರ್ತಿದ್ದಾಳೆ. ಈಗಲಾದರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ ಎಂದು ರಾಕೇಶ್​ ತಮ್ಮ ಸಂತಸ ಹಂಚಿಕೊಂಡರು.

ಈಗ್ಲಾದ್ರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ -ರಾಗಿಣಿ ಬಿಡುಗಡೆಯ ನಿರೀಕ್ಷೆಯಲ್ಲಿರುವ ತಂದೆ ರಾಕೇಶ್​ ಸಂತಸ
ರಾಕೇಶ್ ದ್ವಿವೇದಿ
KUSHAL V
|

Updated on:Jan 25, 2021 | 7:57 PM

Share

ಬೆಂಗಳೂರು: ಕೆಲ ಹೊತ್ತಿನಲ್ಲೇ ಜೈಲಿನಿಂದ ರಾಗಿಣಿ ದ್ವಿವೇದಿ ಬಿಡುಗಡೆಯಾಗಲಿರುವ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ಬಳಿ ನಟಿಯ ತಂದೆ ರಾಕೇಶ್ ದ್ವಿವೇದಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಮಗಳು ರಾಗಿಣಿ ಬಿಡುಗಡೆ ಆಗ್ತಿರುವುದು ಸಂತಸ ತಂದಿದೆ. ನನ್ನ ಮಗಳು ರಾಗಿಣಿ ಜಾಮೀನಿನ ಮೇಲೆ ಈಗ ಮನೆಗೆ ಬರ್ತಿದ್ದಾಳೆ. ಈಗಲಾದರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ ಎಂದು ರಾಕೇಶ್​ ತಮ್ಮ ಸಂತಸ ಹಂಚಿಕೊಂಡರು.

ಸಹಜವಾಗಿ ನಟಿ ರಾಗಿಣಿ ಆರೋಗ್ಯದಲ್ಲಿ ಏರುಪೇರಾಗಿದೆ.ಆರೋಗ್ಯ ಚಿಕಿತ್ಸಾ ಕೇಂದ್ರದಲ್ಲಿ ನನ್ನ ಮಗಳು ಇರಲಿಲ್ಲ. ಹೀಗಾಗಿ ಅವಳು ಹೊರಬಂದ ತಕ್ಷಣ ಮೆಡಿಕಲ್ ಟೆಸ್ಟ್ ಮಾಡಿಸುತ್ತೇವೆ. ನಂತರ, ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ರಾಕೇಶ್ ದ್ವಿವೇದಿ ಹೇಳಿದ್ದಾರೆ.

‘ಬಹಳ ದಿನಗಳ ಬಳಿಕ ಮಗಳನ್ನು ನೋಡ್ತಿದ್ದೇವೆ’ ಜೊತೆಗೆ, ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಸಹ ಮಾತನಾಡಿದ್ದು ಬಹಳ ದಿನಗಳ ಬಳಿಕ ಮಗಳನ್ನು ನೋಡ್ತಿದ್ದೇವೆ. ನಮಗೂ ಸಂತೋಷವಾಗಿದೆ. ಸುಮಾರು 144 ದಿನಗಳಾಗಿತ್ತು. ಮಗಳನ್ನು ರಿಸೀವ್ ಮಾಡಿಕೊಳ್ಳೋದಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಸಾಕಷ್ಟು ಕಷ್ಟದ ದಿನಗಳನ್ನು ಕಳೆಯಬೇಕಾಯ್ತು. ಆದರೆ, ಸತ್ಯಕ್ಕೆ ಕೊನೆಗೂ ಗೆಲುವಿದೆ ಎಂಬ ನಂಬಿಕೆ ಇದೆ. ಈ ಘಟನೆಯಿಂದ ಅವಳು ಹೊರಗೆ ಬರ್ತಾಳೆ ಅಂತಾ ನಂಬಿಕೆ ಇದೆ. ರಾಗಿಣಿ ಸ್ಟ್ರಾಂಗ್ ಇದ್ದಾಳೆ ಎಂದು ಹೇಳಿದರು.

ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಬೆನ್ನುಹುರಿ ಸಮಸ್ಯೆ, ಉಸಿರಾಟದ ಸಮಸ್ಯೆ ಇದೆ. ಡಾಕ್ಟರ್ ಬಳಿ ಈಗಾಗಲೇ ಮಾತಾಡಿದ್ದೇವೆ. ನಾಳೆ ವೈದ್ಯರ ಬಳಿ ಕರೆದುಕೊಂಡು ಹೋಗ್ತೇವೆ. ಮುಂದೇನು ಅಂತಾ ಇನ್ನೂ ಯೋಚನೆ ಮಾಡಿಲ್ಲ. ಬಹಳ ದಿನಗಳ ಬಳಿಕ ಮಗಳನ್ನು ನೋಡುತ್ತಿದ್ದೇವೆ. ಹೀಗಾಗಿ, ಅವಳೊಂದಿಗೆ ಸಮಯ ಕಳೆಯಬೇಕಿದೆ ಎಂದು ಹೇಳಿದರು.

ಸದ್ಯ, ಪರಪ್ಪನ ಅಗ್ರಹಾರ ಜೈಲಿಗೆ ಕೋರ್ಟ್ ಅಮೀನ್ ಆಗಮಿಸಿದ್ದಾರೆ. ನಟಿಯ ಬಿಡುಗಡೆ ಆದೇಶ ಪ್ರತಿ ತಂದಿರುವ ಕೋರ್ಟ್ ಅಮೀನ್ ಅಂತಿಮ ಹಂತದ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ. ಪ್ರಕ್ರಿಯೆ ಬಳಿಕ ನಟಿ ರಾಗಿಣಿ ಸೆಂಟ್ರಲ್‌ ಜೈಲಿನಿಂದ ರಿಲೀಸ್ ಆಗಲಿದ್ದಾರೆ.

ಪರೀಕ್ಷೆಗೂ ಮುನ್ನ FDA ಆನ್ಸರ್ ಕೀ ಸೋರಿಕೆ ಪ್ರಕರಣ: BE ಮುಗಿಸಿ ನೇರವಾಗಿ SDA ಹುದ್ದೆಗೆ ಸೇರಿದ್ದ ರಮೇಶ್​ ಹೆರಕಲ್​

Published On - 7:00 pm, Mon, 25 January 21

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್