AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಪ್ಪಂದ ಮುಗಿದು ವರ್ಷವಾಗಿದೆ’; ಕಾಲ್​ಶೀಟ್ ಕಿರಿಕ್ ಬಗ್ಗೆ ರಮೋಲಾ ಪ್ರತಿಕ್ರಿಯೆ

ಈ ಪ್ರಕರಣಕ್ಕೆ ಸಂಬಂಧಿಸಿ ನಟಿ ರಮೋಲಾ‌ ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಈ ಬಗ್ಗೆ ಯಾವುದೇ ರಿಯಾಕ್ಷನ್ ನೀಡುವುದಿಲ್ಲ. ಅಗ್ರಿಮೆಂಟ್ ಮುಗಿದು ಒಂದು ವರ್ಷವಾಗಿದೆ. ಕಳೆದ ಮೂರು ವರ್ಷದಿಂದ ಸಿನಿಮಾ ಚಿತ್ರೀಕರಣ ಮಾಡುತ್ತಲೇ ಇದ್ದಾರೆ’ ಎಂದಿದ್ದಾರೆ ಅವರು.

‘ಒಪ್ಪಂದ ಮುಗಿದು ವರ್ಷವಾಗಿದೆ’; ಕಾಲ್​ಶೀಟ್ ಕಿರಿಕ್ ಬಗ್ಗೆ ರಮೋಲಾ ಪ್ರತಿಕ್ರಿಯೆ
Malatesh Jaggin
| Updated By: ರಾಜೇಶ್ ದುಗ್ಗುಮನೆ|

Updated on: Oct 18, 2023 | 10:49 AM

Share

‘ಕನ್ನಡತಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿ ಫೇಮಸ್ ಆದವರು ರಮೋಲಾ (Ramola) . ಅವರು ಸಿನಿಮಾ ಒಪ್ಪಿಕೊಂಡ ಬಳಿಕ ಧಾರಾವಾಹಿಯಿಂದ ಹೊರ ಬಂದರು. ಅವರು ‘ರಿಚ್ಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕಾಲ್​ಶೀಟ್ ವಿಚಾರಕ್ಕೆ ಕಿತ್ತಾಟ ಆಗಿದೆ. ಅವರು ಕಾಲ್​ಶೀಟ್ ಕೊಡದೇ ಆಟ ಆಡಿಸುತ್ತಿದ್ದಾರೆ ಎಂದು ‘ರಿಚ್ಚಿ’ ಸಿನಿಮಾದ ನಟ, ನಿರ್ದೇಶಕ, ನಿರ್ಮಾಪಕ ರಿಚ್ಚಿ ಆರೋಪಿಸಿದ್ದಾರೆ. ಇದಕ್ಕೆ ನಟಿಯ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ರಿಚ್ಚಿ ಹೇಳೋದು ಏನು?

ಹಲ್ಲೆ ಮಾಡೋ ಹಂತಕ್ಕೆ ರಿಚ್ಚಿ ಹಾಗೂ ರಮೋಲಾ ಕಿತ್ತಾಟ ನಡೆದಿದೆ ಎನ್ನಲಾಗಿದೆ.  ‘2022ರಲ್ಲಿ ಒಪ್ಪಂದ ಆಗಿತ್ತು. ಪಿಜಿ ಬಿಸ್ನೆಸ್​​ಗೆ ಪಾರ್ಟ್ನರ್ ಆಗಿಲ್ಲ ಎಂದು ಅವರು ಕಾಲ್​ಶೀಟ್ ಕೊಡುತ್ತಿಲ್ಲ. 10 ರಿಂದ 12 ದಿನ ಶೂಟಿಂಗ್ ಕೂಡ ಮಾಡಲಾಗಿದೆ. ಇ‌ನ್ನೂ ಎರಡು ದಿನ ಕಾಲ್ ಶೀಟ್ ಬೇಕಿದೆ. ಸಂಭಾವನೆ ಕ್ಲಿಯರ್ ಮಾಡಿದರೂ ಅವರು ಶೂಟಿಂಗ್​ಗೆ ಬರುತ್ತಿಲ್ಲ’ ಎಂಬುದು ರಿಚ್ಚಿ ಮಾತು. ಗಾಂಧೀನಗರದ ಕಾನಿಷ್ಕ ಹೋಟೇಲ್ ಬಳಿ ಇರೋ ವಕೀಲರ ಕಚೇರಿಯಲ್ಲಿ ಇತ್ತೀಚೆಗೆ ಇಬ್ಬರ ಮಧ್ಯೆ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆಗ ರಿಚ್ಚಿ ಹಾಗೂ ರಮೋಲಾ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ಬೋಲ್ಡ್ ಫೋಟೋ ಮೂಲಕ ಗಮನ ಸೆಳೆದ ನಟಿ ರಮೋಲಾ

ರಮೋಲಾ ಪ್ರತಿಕ್ರಿಯೆ

ಈ ಪ್ರಕರಣಕ್ಕೆ ಸಂಬಂಧಿಸಿ ನಟಿ ರಮೋಲಾ‌ ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಈ ಬಗ್ಗೆ ಯಾವುದೇ ರಿಯಾಕ್ಷನ್ ನೀಡುವುದಿಲ್ಲ. ಅಗ್ರಿಮೆಂಟ್ ಮುಗಿದು ಒಂದು ವರ್ಷವಾಗಿದೆ. ಕಳೆದ ಮೂರು ವರ್ಷದಿಂದ ಸಿನಿಮಾ ಚಿತ್ರೀಕರಣ ಮಾಡುತ್ತಲೇ ಇದ್ದಾರೆ. 6 ತಿಂಗಳಿಗೆ ಒಂದು ದಿನ ಶೂಟ್ ಮಾಡುತ್ತಾರೆ. ಕನ್ನಡದ ಆರ್ಟಿಸ್ಟ್​​ಗಳಿಗೆ ಟಾಂಗ್ ಕೊಡುವಂತಹ ಡೈಲಾಗ್​​ಗಳನ್ನು ಇಟ್ಟಿದ್ದಾರೆ. ಅದು ನನಗೂ ನೆಗೆಟಿವ್ ಆಗುತ್ತದೆ. ಪಬ್ಲಿಸಿಟಿಗಾಗಿ ಇದೆಲ್ಲ ಮಾಡ್ತಿದ್ದಾರೆ’ ಎಂದು ರಮೋಲಾ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ