AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಭೇಟಿ ಮಾಡಿದ ಖುಷಿಯಲ್ಲಿ ಶ್ರದ್ಧಾ; ಮೊದಲ ಭೇಟಿಯಲ್ಲೇ ‘ಅಯ್ಯೋ’ ಎಂದ ಪ್ರಧಾನಿ

Aiyyo Shraddha: ಶ್ರದ್ಧಾ ತಾಯಿ ಟೀಚರ್, ತಂದೆ ಅಕೌಂಟೆಂಟ್. ಆರಂಭದಲ್ಲಿ ಶ್ರದ್ಧಾ ಐಟಿ ಕ್ಷೇತ್ರದಲ್ಲಿ ಇದ್ದರು. ನಂತರ ಅವರು ಕೆಲಸಬಿಟ್ಟರು. ಶ್ರದ್ಧಾ ಅವರು ಆರ್​ಜೆ ಆಗಿ ಕೆಲಸ ಮಾಡಿದ್ದರು.

ಮೋದಿ ಭೇಟಿ ಮಾಡಿದ ಖುಷಿಯಲ್ಲಿ ಶ್ರದ್ಧಾ; ಮೊದಲ ಭೇಟಿಯಲ್ಲೇ ‘ಅಯ್ಯೋ’ ಎಂದ ಪ್ರಧಾನಿ
ಮೋದಿ ಜೊತೆ ಶ್ರದ್ಧಾ
Follow us
ರಾಜೇಶ್ ದುಗ್ಗುಮನೆ
|

Updated on:Feb 13, 2023 | 2:28 PM

ಸ್ಟ್ಯಾಂಡಪ್ ಕಾಮಿಡಿಯನ್ ಆಗಿ, ಕಲಾವಿದೆಯಾಗಿ ಫೇಮಸ್ ಆದವರು ಶ್ರದ್ಧಾ (Aiyyo Shraddha) . ಅವರು ಅಯ್ಯೋ ಶ್ರದ್ಧಾ ಎಂದೇ ಫೇಮಸ್. ಈಗ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಹಂಚಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ ದಿಗ್ಗಜರ ಜತೆ ಅವರಿಗೂ ಮೋದಿಯನ್ನು ಭೇಟಿ ಮಾಡೋ ಅವಕಾಶ ಸಿಕ್ಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಪ್ರದರ್ಶನ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ರಾತ್ರಿ (ಫೆಬ್ರವರಿ 12) ಅವರು ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದರು. ಈ ವೇಳೆ ನಟ ಯಶ್, ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ, ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ, ಹೊಂಬಾಳೆ ಫಿಲ್ಮ್ಸ್​​ನ ವಿಜಯ್​ ಕಿರಗಂದೂರು ಅವರನ್ನು ಭೇಟಿ ಆಗಿದ್ದಾರೆ. ಇವರ ಜತೆ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ ಕೂಡ ಇದ್ದರು.

ಶ್ರದ್ಧಾ ತಾಯಿ ಟೀಚರ್, ತಂದೆ ಅಕೌಂಟೆಂಟ್. ಶ್ರದ್ಧಾ ಆರಂಭದಲ್ಲಿ ಐಟಿ ಕ್ಷೇತ್ರದಲ್ಲಿ ಇದ್ದರು. ಈ ಕೆಲಸದ ಮೇಲೆ ಅವರಿಗೆ ಆಸಕ್ತಿ ಹೋಯಿತು.  ಹೀಗಾಗಿ  ಕೆಲಸಬಿಟ್ಟರು. ನಂತರ ಶ್ರದ್ಧಾ ಅವರು ಆರ್​ಜೆ ಆದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರಕಂಡ ‘ಪುಷ್ಪವಲ್ಲಿ’ ಸೀರಿಸ್​ನಲ್ಲಿ ಅವರು ನಟಿಸಿದ್ದರು. ಪಿಜಿ ವಾರ್ಡನ್ ಆಗಿ ಗಮನ ಸೆಳೆದಿದ್ದರು.  ಅವರು ಮಾಡಿದ ವಾಸು ಹೆಸರಿನ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಇತ್ತೀಚೆಗೆ ತೆರೆಗೆ ಬಂದ ಆಯುಷ್ಮಾನ್ ಖುರಾನಾ ನಟನೆಯ ಹಿಂದಿ ಚಿತ್ರ ‘ಡಾಕ್ಟರ್​ ಜಿ’ನಲ್ಲಿ ಶ್ರದ್ಧಾ ನಟಿಸಿದ್ದರು.

ಇದನ್ನೂ ಓದಿ: ಪಿಎಂ ಮೋದಿ ಭೇಟಿ ವೇಳೆ ವಿಶೇಷ ಮನವಿ ಇಟ್ಟ ರಾಕಿಂಗ್ ಸ್ಟಾರ್ ಯಶ್​; ಏನದು?

ಈಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ‘ಪ್ರಧಾನಿ ಅವರನ್ನು ಭೇಟಿ ಮಾಡಿದೆ’ ಎಂದು ಖುಷಿಯಿಂದ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಭೇಟಿ ವೇಳೆ ಪ್ರಧಾನಿ ಮೋದಿ ಅವರ ಆಡಿದ ಮೊದಲ ಮಾತು ‘ಅಯ್ಯೋ’ ಎಂದು! ಈ ವಿಚಾರವನ್ನು ಕೂಡ ಶ್ರದ್ಧಾ ರಿವೀಲ್ ಮಾಡಿದ್ದಾರೆ. ಜತೆಗೆ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ಶ್ರದ್ಧಾ ಹಂಚಿಕೊಂಡಿರುವ ಫೋಟೋಗೆ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನೀವು ಮೋದಿ ಭೇಟಿ ಮಾಡಲು ಹೇಗೆ ಸಿದ್ಧರಾದಿರಿ ಎಂಬುದನ್ನು ವಿಡಿಯೋ ಮಾಡಿ ಹಾಕಿ’ ಎಂದು ಅನೇಕರು ಕೋರಿದ್ದಾರೆ. ‘ಮಿತ್ರೋ ಹಾಗೂ ಅಯ್ಯೋ ಒಂದಾದಾಗ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಹಲವು ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. ಇದೇ ವಿಚಾರ ಇಟ್ಟುಕೊಂಡು ಶ್ರದ್ಧಾ ವಿಡಿಯೋ ಮಾಡಿದ್ದರು. ಈ ವಿಡಿಯೋ 23 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಐಟಿ ಉದ್ಯೋಗಿಗಳಿಗೆ ಈ ವಿಡಿಯೋ ಹೆಚ್ಚು ಇಷ್ಟ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:07 pm, Mon, 13 February 23

ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ?