Allu Arjun: ಕನ್ನಡ ಮಾಧ್ಯಮಗಳ ಎದುರು ಬಹಿರಂಗ ಕ್ಷಮೆಯಾಚಿಸಿದ ಅಲ್ಲು ಅರ್ಜುನ್​

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್​, ನಾಯಕಿ ರಶ್ಮಿಕಾ ಮಂದಣ್ಣ, ‘ಪುಷ್ಪ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಧನಂಜಯ ಕೂಡ ಆಗಮಿಸಿದ್ದರು. ಈ ವೇಳೆ ಚಿತ್ರತಂಡದಿಂದ ತಪ್ಪೊಂದು ನಡೆದಿತ್ತು.

Allu Arjun: ಕನ್ನಡ ಮಾಧ್ಯಮಗಳ ಎದುರು ಬಹಿರಂಗ ಕ್ಷಮೆಯಾಚಿಸಿದ ಅಲ್ಲು ಅರ್ಜುನ್​
ಅಲ್ಲು ಅರ್ಜುನ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Dec 15, 2021 | 5:34 PM

ಅಲ್ಲು ಅರ್ಜುನ್ (Allu Arjun)​ ಟಾಲಿವುಡ್​ನ ಸ್ಟಾರ್​ ನಟ. ಅವರು ಸಾಕಷ್ಟು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅವರನ್ನು ಕಂಡರೆ ಇಷ್ಟಪಡುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇಂತಹ ಸ್ಟಾರ್​ಡಮ್​ ಇರುವ ನಟ ಇಂದು (ಡಿಸೆಂಬರ್​ 15) ಕನ್ನಡ ಮಾಧ್ಯಮಗಳ ಎದುರು ಕ್ಷಮೆ ಕೇಳಿದ್ದಾರೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಪ್ರದೇಶದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಆಗಿದ್ದೇನು? ಅಲ್ಲು ಅರ್ಜುನ್​ ಮಾಡಿದ ತಪ್ಪೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ರಾಷ್ಟ್ರದ ಪ್ರಮುಖ ರಾಜ್ಯಗಳಿಗೆ ಅವರು ಪ್ರಯಾಣ ಬೆಳೆಸುತ್ತಿದ್ದಾರೆ. ಹೈದರಾಬಾದ್​ನಲ್ಲಿ ಗ್ರ್ಯಾಂಡ್​ ಆಗಿ ಪ್ರೀ-ರಿಲೀಸ್​ ಕಾರ್ಯಕ್ರಮ ನಡೆದಿತ್ತು. ಚೆನ್ನೈನಲ್ಲೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಲಾಗಿತ್ತು. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್​, ನಾಯಕಿ ರಶ್ಮಿಕಾ ಮಂದಣ್ಣ, ‘ಪುಷ್ಪ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಧನಂಜಯ ಕೂಡ ಆಗಮಿಸಿದ್ದರು. ಈ ವೇಳೆ ಚಿತ್ರತಂಡದಿಂದ ತಪ್ಪೊಂದು ನಡೆದಿತ್ತು.

ಬೆಳಗ್ಗೆ 11.15ಕ್ಕೆ ‘ಪುಷ್ಪ’ ತಂಡ ಸುದ್ದಿಗೋಷ್ಠಿ ಕರೆದಿತ್ತು. ಆದರೆ, ಇಡೀ ಟೀಂ ಬಂದಿದ್ದು, 1.15ಕ್ಕೆ! ಎರಡು ಗಂಟೆ ತಡವಾಗಿ ಚಿತ್ರತಂಡ ಆಗಮಿಸಿತ್ತು. ಅಷ್ಟೇ ಅಲ್ಲ, ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೂಡ ಕೇಳಲಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದವು. ‘ಸುದ್ದಿಗೋಷ್ಠಿ ಕರೆದಿದ್ದು 11.15ಕ್ಕೆ. ಇಷ್ಟು ವಿಳಂಬವಾಗಿ ಬಂದಿದ್ದೇಕೆ? ನಿಮಗೆ ಸಾರಿ ಕೇಳಬೇಕು ಎಂದು ಅನಿಸಲಿಲ್ಲವೇ’ ಎಂದು ಕೇಳಲಾಯಿತು. ಕನ್ನಡದಲ್ಲಿ ಕೇಳಲಾದ ಪ್ರಶ್ನೆಯನ್ನು ರಶ್ಮಿಕಾ ಅವರು ಅಲ್ಲು ಅರ್ಜುನ್​ಗೆ ವಿವರಿಸಿದರು.

ಮೈಕ್​ ತೆಗೆದುಕೊಂಡ ಅಲ್ಲು ಅರ್ಜುನ್​ ಕ್ಷಮೆ ಯಾಚಿಸಿದರು. ‘ನಾನು ಪ್ರೈವೇಟ್​ ಜೆಟ್​ನಲ್ಲಿ ಬಂದೆ. ಫಾಗ್​ ಇದ್ದಿದ್ದರಿಂದ ಅದು ಟೇಕ್​ಆಫ್​ ಆಗೋಕೆ ವಿಳಂಬವಾಯಿತು. ಕಾರ್ಯಕ್ರಮ ರೀ ಶ್ಯೆಡ್ಯೂಲ್​ ಆಗಿದ್ದು ನನಗೆ ಗೊತ್ತಿರಲಿಲ್ಲ. ಅದನ್ನು ಈಗ ಹೇಳುತ್ತಿದ್ದಾರೆ. ತಡವಾಗಿ ಬಂದಿದ್ದಕ್ಕೆ ನಾನು ಎಲ್ಲರ ಬಳಿ ಕ್ಷಮೆ ಕೇಳುತ್ತಿದ್ದೇನೆ’ ಎಂದರು ಅವರು. ಈ ಮೂಲಕ ಎಲ್ಲ ಗೊಂದಲಕ್ಕೆ ತೆರೆ ಎಳೆದರು.

ಇದನ್ನೂ ಓದಿ: ಯಾರು ಹೇಳಿದ್ದು ರಶ್ಮಿಕಾ ಮಂದಣ್ಣಗೆ ಕನ್ನಡ ಮರೆತುಹೋಗಿದೆ ಅಂತ, ಅವರು ಕನ್ನಡದಲ್ಲಿ ಚೆನ್ನಾಗಿ ಮಾತಾಡುತ್ತಾರೆ!

‘ಈಗ ನಾನು ಪುನೀತ್​ ಮನೆಗೆ ಹೋಗುತ್ತಿಲ್ಲ’; ಕಾರಣ ಸಮೇತ ವಿವರಿಸಿದ ಅಲ್ಲು ಅರ್ಜುನ್

Published On - 5:25 pm, Wed, 15 December 21