
ರಾಜ್ಕುಮಾರ್ ಹಾಗೂ ಅಂಬರೀಷ್ (Ambareesh) ಅವರ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದವರು. ಇಬ್ಬರ ಮಧ್ಯೆ ಒಳ್ಳೆಯ ಒಡನಾಟ ಇತ್ತು. ರಾಜ್ಕುಮಾರ್ ಎಂದರೆ ಅಂಬಿಗೆ ಎಲ್ಲಿಲ್ಲದ ಗೌರವ. ರಾಜ್ಕುಮಾರ್ ಅವರಿಂದ ಅಂಬರೀಷ್ ಸಾಕಷ್ಟು ಪ್ರಭಾವಿತರಾಗಿದ್ದರು. ಇವರು ಅನೇಕ ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದು ಇದೆ. ‘ಒಡಹುಟ್ಟಿದವರು’ ಸಿನಿಮಾ ಶೂಟಿಂಗ್ ಸಂದರ್ಭದ ಒಂದು ಅಪರೂಪದ ಘಟನೆ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ ಕೇಳಿ.
ರಾಜ್ಕುಮಾರ್ ಹಾಗೂ ಅಂಬರೀಷನ್ ಅವರು ‘ಒಡಹುಟ್ಟಿದವರು’ ಸಿನಿಮಾ ಮಾಡಿದರು. ದೊರೈ-ಭಗವಾನ್ ಇದನ್ನು ನಿರ್ದೇಶನ ಮಾಡಿದ್ದರು. ಚಿ ಉದಯ್ ಶಂಕರ್ ಹಾಗೂ ಭಗವಾನ್ ಇದಕ್ಕೆ ಕಥೆ ಬರೆದಿದ್ದರು. ವರದರಾಜ್ ಅವರು ಇದನ್ನು ನಿರ್ಮಾಣ ಮಾಡಿದ್ದರು. 1994ರಲ್ಲಿ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದ ಕಥೆ ಕೇಳಲು ಬರುವಂತೆ ಅಂಬರೀಷ್ ಅವರಿಗೆ ಬುಲಾವ್ ಬಂತು. ಆದರೆ, ಅವರು ಕಥೆ ಕೇಳದೆ ಸಿನಿಮಾ ಒಪ್ಪಿಕೊಂಡರು. ಅಲ್ಲದೆ, ಎರಡು ಕಂಡೀಷನ್ ಕೂಡ ಹಾಕಿದರು ಅವರು. ಅದೇನು ಎಂಬುದನ್ನು ಅಂಬರೀಷ್ ಅವರು ಈ ಮೊದಲು ವಿವರಿಸಿದ್ದರು.
‘ಒಡ ಹುಟ್ಟಿದವರು ಕಥೆ ಕೇಳಿ ಎಂಬ ಒತ್ತಾಯ ಬಂತು. ಹೀಗಾಗಿ ರಾಜ್ಕುಮಾರ್ ಮನೆಗೆ ಹೋಗಿದ್ದೆ. ವರದಪ್ಪ, ಪಾರ್ವತಮ್ಮ, ದೊರೆ ಭಗವಾನ್, ಉದಯ್ ಶಂಕರ್ ಕೂತಿದ್ದರು. ಹೋದವನೆ ಬನ್ನಿ ಎಂದು ಸ್ವಾಗತ ಮಾಡಿದರು. ನಾನು ಕಥೆ ಕೇಳೋಕೆ ಬಂದಿಲ್ಲ ಎಂದು ಹೇಳಿದೆ. ನಂದು ಎರಡು ಕಂಡೀಷನ್ ಇದೆ ಒಪ್ಪಿಕೊಳ್ಳಿ ಎಂದು ಹೇಳಿದೆ’ ಎಂದಿದ್ದರು ಅಂಬರೀಷ್.
ರಾಜ್ಕುಮಾರ್ಗೆ ಅವರು ಎರಡು ಕಂಡೀಷನ್ ಹಾಕಿದರು. ‘ನನಗೆ ನೀವು ಬಯ್ಯಬಾರದು, ನಿಮಗೆ ನಾನು ಬಯ್ಯೋದಿಲ್ಲ. ನಾನು ನಿಮಗೆ ಹೊಡೆಯಲ್ಲ, ನೀವು ನನಗೆ ಹೊಡೆಯಬಾರದು. ಕಸ ಗುಡಿಸೋ ಪಾರ್ಟ್ ಕೊಡಿ ಮಾಡಿ ಬಿಡ್ತೀನಿ ಎಂದು ಹೇಳಿದ್ದೆ’ ಎಂಬುದಾಗಿ ಅಂಬಿ ವಿವರಿಸಿದ್ದರು.
ಇದನ್ನೂ ಓದಿ: ಶಿವರಾಜ್ಕುಮಾರ್ ಜೊತೆ ನಟಿಸಿದ ಈ ನಟಿ ಈಗ ಐಟಿ ಉದ್ಯೋಗಿ
ನಾಳೆ ನಿಂದು ಮೊದಲ ಶಾಟ್ ಎಂದರು. ‘ರಾಜ್ಕುಮಾರ್ ಅವರ ಕಥೆ. ಅವರೇ ಹೀರೋ. ಅವರದ್ದು ಮೊದಲು ತೆಗೆಯಿರಿ. ಬಾಸ್ ವಾಟ್ ಟೈಮ್ ಶೂಟಿಂಗ್ ಎಂದು ಕೇಳಿದೆ. ಎನಿಟೈಮ್ ಎಂದು ರಾಜ್ಕುಮಾರ್ ಹೇಳಿದರು. ಹೀಗಾಗಿ, ಅವರದ್ದೇ ಮೊದಲು ಶೂಟ್ ಮಾಡುವಂತೆ ನಾನು ಹೇಳಿದೆ. ಆ ಬಳಿಕ ಹಾಗೆ ಮಾಡಿದರು’ ಎಂದು ಅಂಬಿ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:58 am, Wed, 30 April 25