Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಪ್ಪು’ ಜೀವನ ಚರಿತ್ರೆ, ಇದು ಅಶ್ವಿನಿ ಕನಸು, ಇರಲಿವೆ ಹಲವು ವಿಶೇಷತೆ

Appu Biography: ಅಪ್ಪು ಕುರಿತು ಹಲವಾರು ಮಂದಿ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಎಷ್ಟೇ ಹೇಳಿದರು, ಎಷ್ಟೇ ಕೇಳಿದರು ಆ ವ್ಯಕ್ತಿಯ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಹೇಳುವುದು ಬಾಕಿ ಉಳಿದಿದೆ. ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಅಪ್ಪು ಬಗೆಗಿನ ಜೀವನ ಚರಿತ್ರೆ ಪುಸ್ತಕ ಹೊರತರುತ್ತಿದ್ದಾರೆ.

‘ಅಪ್ಪು’ ಜೀವನ ಚರಿತ್ರೆ, ಇದು ಅಶ್ವಿನಿ ಕನಸು, ಇರಲಿವೆ ಹಲವು ವಿಶೇಷತೆ
Appu Biography
Follow us
ಮಂಜುನಾಥ ಸಿ.
|

Updated on: Mar 18, 2025 | 9:41 PM

‘ಅಪ್ಪು’ ತಮ್ಮ ಸಿನಿಮಾಗಳು, ಮಾಡಿದ ಸಾಮಾಜಿ ಕಾರ್ಯ, ತೋರಿದ ಸರಳ, ಸ್ನೇಹಮಯಿ ವ್ಯಕ್ತಿತ್ವದಿಂದ ಈಗಾಗಲೇ ಅಮರರಾಗಿದ್ದಾರೆ. ಅಪ್ಪು ಕುರಿತು ಹಲವಾರು ಮಂದಿ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಎಷ್ಟೇ ಹೇಳಿದರು, ಎಷ್ಟೇ ಕೇಳಿದರು ಆ ವ್ಯಕ್ತಿಯ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಹೇಳುವುದು ಬಾಕಿ ಉಳಿದಿದೆ. ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಅಪ್ಪು ಅವರ ಜೀವನ ಚರಿತ್ರೆ (ಬಯೋಗ್ರಫಿ) ಹೊರಗೆ ತರುತ್ತಿದ್ದಾರೆ. ಈ ಜೀವನ ಚರಿತ್ರೆ ಹಲವು ವಿಶೇಷತೆಗಳನ್ನು ಒಳಗೊಂಡಿರಲಿದೆ. ಇಲ್ಲಿದೆ ಅದರ ಮಾಹಿತಿ…

ರಾಜ್​ಕುಮಾರ್ ಅವರ ಬಗ್ಗೆ ಪುನೀತ್ ರಾಜ್​ಕುಮಾರ್ ಅವರು ಬರೆದಿರುವ ಅಪರೂಪದ ಪುಸ್ತಕದ ಬಗ್ಗೆ ಹಲವರಿಗೆ ಗೊತ್ತೇ ಇದೆ. ಆ ಪುಸ್ತಕವನ್ನು ಪುನೀತ್ ರಾಜ್​ಕುಮಾರ್ ಮತ್ತು ಪ್ರಕೃತಿ ಬನವಾಸಿ ಅವರು ಒಟ್ಟಿಗೆ ಸಂಪಾದಿಸಿದ್ದರು. ಇದೀಗ ಅಪ್ಪು ಅವರ ಬಯೋಗ್ರಫಿ ಅನ್ನು ಅದೇ ಪ್ರಕೃತಿ ಬನವಾಸಿ ಅವರು ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರೊಟ್ಟಿಗೆ ಸೇರಿ ಬರೆಯುತ್ತಿದ್ದಾರೆ. ಅಪ್ಪು ಅವರ ಬಯೋಗ್ರಫಿಯನ್ನು ಅಶ್ವಿನಿ ಮತ್ತು ಬನವಾಸಿ ಅವರು ಜಂಟಿಯಾಗಿ ಸಂಪಾದಿಸಿದ್ದಾರೆ.

ಇದನ್ನೂ ಓದಿ:ಅಜಾತಶತ್ರು ಪುನೀತ್ ರಾಜ್​ಕುಮಾರ್ 

ಈ ಬಯೋಗ್ರಫಿಯಲ್ಲಿ ಸುಮಾರು 225 ಮಂದಿ ನಟರು, ತಂತ್ರಜ್ಞರು ಅಪ್ಪುಗೆ ಸಂಬಂಧಸಿದವರು ಮಾತನಾಡಿದ್ದಾರೆ ಅಥವಾ ಲೇಖನಗಳನ್ನು ಬರೆದಿದ್ದಾರೆ. ಈ ಎಲ್ಲ ಲೇಖನಗಳನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಮತ್ತು ಪ್ರಕೃತಿ ಬನವಾಸಿ ಅವರು ಸಂಪಾದಿಸಿದ್ದಾರೆ. ಅಪ್ಪು ಅವರ ಬಾಲ್ಯದಿಂದ ಆರಂಭಿಸಿ ಕೊನೆಯ ಕ್ಷಣದ ವರೆಗಿನ ಮಾಹಿತಿ ಈ ಪುಸ್ತಕದಲ್ಲಿ ಇರಲಿದೆ. ಈ ಪುಸ್ತಕದ ಮೇಲೆ ಕಳೆದ ಎರಡು ವರ್ಷದಿಂದಲೂ ಕೆಲಸ ಮಾಡುತ್ತಿರುವುದಾಗಿ ಪ್ರಕೃತಿ ಬನವಾಸಿ ಹೇಳಿಕೊಂಡಿದ್ದಾರೆ.

ಈ ಪುಸ್ತಕಕ್ಕಾಗಿ ಅಶ್ವಿನಿ ಅವರು ಮಾತ್ರವೇ ಅಲ್ಲದೆ ಅವರ ಮಕ್ಕಳಿಬ್ಬರೂ ಸಹ ಕೆಲಸ ಮಾಡಿದ್ದಾರೆ. ಡಿಸೈನ್, ಚಿತ್ರಗಳು ಇನ್ನಿತರೆ ಜವಾಬ್ದಾರಿಗಳನ್ನು ಅಪ್ಪು ಅವರ ಇಬ್ಬರು ಪುತ್ರಿಯರು ನೋಡಿಕೊಂಡಿದ್ದಾರೆ. ಅಪ್ಪು ಅವರ ಬಗ್ಗೆ ಎಲ್ಲೂ ಮಾತನಾಡದ ಹಲವರು ಈ ಪುಸ್ತಕಕ್ಕಾಗಿ ಲೇಖನಗಳನ್ನು ನೀಡಿದ್ದಾರೆ. ಅಪ್ಪು ಅವರ ಜೀವನದಲ್ಲಿ ನಡೆದ ಹಲವಾರು ಘಟನೆಗಳು, ಅವರು ಆಡಿದ ಮಾತುಗಳು, ನಂಬಿದ ಆದರ್ಶ ಇನ್ನೂ ಹಲವು ವಿಷಯಗಳನ್ನು ಪುಸ್ತಕ ಒಳಗೊಂಡಿರಲಿದೆ.

ರಶ್ಮಿಕಾ ಮಂದಣ್ಣ ಸೇರಿದಂತೆ ಹಲವಾರು ಕಲಾವಿದರು ಈ ಪುಸ್ತಕಕ್ಕಾಗಿ ಲೇಖನ ಒದಗಿಸಿದ್ದಾರೆ. ಮಾತನಾಡಿದ್ದಾರೆ. ಹಲವಾರು ಮಂದಿ ತಮ್ಮ ಬಳಿ ಇರುವ ಅಪರೂಪದ ಚಿತ್ರಗಳನ್ನು ಪುಸ್ತಕಕ್ಕಾಗಿ ನೀಡಿದ್ದಾರೆ. ‘ಅಂಜನೀಪುತ್ರ’ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ ತೆಗೆದ ಅಪರೂಪದ ಚಿತ್ರವನ್ನು ಈ ಪುಸ್ತಕದ ಮುಖಪುಟಕ್ಕೆ ಬಳಸಲಾಗಿದೆ. ಇನ್ನೂ ಹಲವು ವಿಶೇಷತೆಗಳನ್ನು ಈ ಪುಸ್ತಕ ಒಳಗೊಂಡಿದ್ದು, ಆದಷ್ಟು ಬೇಗ ಪುಸ್ತಕ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!