AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವನಿರಬೇಕಿತ್ತು’ ಹೊಸಬರ ಪ್ರಯತ್ನ, ಹೊಸ ಹಾಡು ಬಿಡುಗಡೆ

Sandalwood news: ಮತ್ತೊಂದು ಹೊಸ ತಂಡ ಚಂದನವನದ ಅಂಗಳಕ್ಕೆ ಹೊಸ ಸಿನಿಮಾ ಹೊತ್ತು ತಂದಿದೆ. ಮೊದಲ ಬಾರಿ ಸಿನಿಮಾ ನಿರ್ದೇಶಿಸುತ್ತಿರುವ ಅಶೋಕ್ ಸಾಮ್ರಾಟ್ ನಿರ್ದೇಶನ ಮಾಡಿರುವ ‘ಅವನಿರಬೇಕಿತ್ತು’ ಸಿನಿಮಾದ ಹೊಸ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಹಾಡು ಗಮನ ಸೆಳೆಯುತ್ತಿದೆ. ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ...

‘ಅವನಿರಬೇಕಿತ್ತು’ ಹೊಸಬರ ಪ್ರಯತ್ನ, ಹೊಸ ಹಾಡು ಬಿಡುಗಡೆ
Avanirabekithu
ಮಂಜುನಾಥ ಸಿ.
|

Updated on:Mar 18, 2025 | 10:04 PM

Share

ಬಹುತೇಕ ಅನುಭವಿ ನಿರ್ದೇಶಕರು ಸಿದ್ಧ ಸೂತ್ರಗಳ ಬೆನ್ನು ಹತ್ತಿರುವಾಗ, ಕನ್ನಡದಲ್ಲಿ ಕತೆಯನ್ನು ನಂಬಿಕೊಂಡು, ಭಿನ್ನವಾದ ಸಿನಿಮಾ ನೀಡುವ ತುಡಿತ ಇರುವುದು ಹೊಸ ತಂಡಗಳಿಗೆ ಮಾತ್ರ. ಕೆಲವಾರು ಹೊಸ ತಂಡಗಳು ಕೆಲವು ಒಳ್ಳೆಯ ಸಿನಿಮಾಗಳನ್ನು ಇತ್ತೀಚೆಗಿನ ವರ್ಷಗಳಲ್ಲಿ ನೀಡಿವೆ. ಕೆಲವು ಹಿಟ್ ಆಗಿವೆ, ಕೆಲವು ಆಗಿಲ್ಲ. ಇದೀಗ ಮತ್ತೊಂದು ಹೊಸ ತಂಡವೊಂದು ಹೊಸ ಸಿನಿಮಾದೊಟ್ಟಿಗೆ ಚಂದನವನದ ಅಂಗಳಕ್ಕೆ ಬಂದಿದೆ. ಇದು ಹೊಸಬರ-ಅನುಭವಿಗಳ ಸಮತೋಲಿತ ತಂಡ. ಇವರು ತಂದಿರುವ ಸಿನಿಮಾದ ಹೆಸರು ‘ಅವನಿರಬೇಕಿತ್ತು’.

ಸಿನಿಮಾ ಅನ್ನು ಅಶೋಕ್ ಸಾಮ್ರಾಟ್ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಪ್ರಯತ್ನ. ಅವರ ಈ ಪ್ರಯತ್ನಕ್ಕೆ ಬಾಲ್ಯದ ಗೆಳೆಯ ಮುರಳಿ ಬಂಡವಾಳ ತೊಡಗಿಸಿದ್ದಾರೆ. ಇದೀಗ ಸಿನಿಮಾದ ‘ಓಹೋ ಹೃದಯ’ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ‘ಅಂದಕಾಲತ್ತಿಲೇ, ಇಂದ ಕಾಲತ್ತಿಲೇ’ ಎಂಬ ಹಾಡು ಬಿಡುಗಡೆ ಮಾಡಿದ್ದರು. ಇದೀಗ ‘ಓಹೋ ಹೃದಯ’ ಎಂಬ ಮಧುರ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಅರ್ಪಾಜ್ ಉಳ್ಳಾಳ್ ಮತ್ತು ಅನುರಾಧ ಭಟ್ ಹಾಡಿದ್ದಾರೆ. ಸಂಗೀತ ಲೋಕಿ ತಪಸ್ಯ ಅವರದ್ದು.

ಈಗ ಬಿಡುಗಡೆ ಆಗಿರುವ ‘ಓಹೋ ಹೃದಯ’ ಹಾಡನ್ನು ರಾಜಸ್ತಾನ, ಲಡಾಕ್ ನಲ್ಲಿ ಕೇರಳದಲ್ಲಿ ಬಿರು ಬಿಸಿಸಿಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಡಿನ ಚಿತ್ರೀಕರಣಕ್ಕೆ ತೆರಳುವ ಮೊದಲು ಒಂದೂವರೆ ತಿಂಗಳು ತರಬೇತಿಯನ್ನು ಸಹ ಮಾಡಲಾಗಿತ್ತಂತೆ. ಛಾಯಾಗ್ರಾಹಕ ಪೃಥ್ವಿ ಮಾಲೂರು ಹಾಡನ್ನು ಸುಂದರವಾಗಿ ಚಿತ್ರೀಕರಿಸಿದ್ದಾರೆ ಎಂದರು ನಿರ್ದೇಶಕ ಅಶೋಕ್.

ಇದನ್ನೂ ಓದಿ:ದರ್ಶನ್ ಸಿನಿಮಾ ಹಾಡು ಹೇಳಿ ನಾನು ಫೇಮಸ್​ ಆದೆ: ನೇಪಾಳದ ಹುಡುಗ ಪ್ರೇಮ್ ತಾಪ

ಸಿನಿಮಾದಲ್ಲಿ ಭರತ್ ಎಂಬುವವರು ನಾಯಕ. ಇದು ನಾಯಕನಾಗಿ ಅವರ ಮೊದಲ ಸಿನಿಮಾ. ಸೌಮ್ಯಾ ನಾಯಕಿ. ಅವರಿಗೂ ಸಹ ನಾಯಕಿಯಾಗಿ ಇದು ಮೊದಲ ಸಿನಿಮಾ. ಆಡಿಷನ್ ನೀಡಿ ಈ ಸಿನಿಮಾಕ್ಕೆ ಆಯ್ಕೆ ಆಗಿದ್ದಾರಂತೆ ಅವರು. ಸಿನಿಮಾದಲ್ಲಿ ಲಕ್ಷ್ಮಿ ದೇವಮ್ಮ, ಪ್ರಶಾಂಸ್ ಸಿದ್ದಿ, ಮಂಜುನಾಥ್, ಕಿರಣ್ ಹೆಗಡೆ ನಟಿಸಿದ್ದಾರೆ. ತುಸು ಅನುಭವಿ ನಟರೆಂದರೆ ಇವರೆ. ಇನ್ಜುಳಿದಂತೆ ಎಲ್ಲರೂ ಹೊಸಬರು.

ಈ ಹಿಂದೆ ಬಿಡುಗಡೆ ಮಾಡಿರುವ ‘ಅಂದಕಾಲತ್ತಿಲೆ’ ಹಾಡು ಯೂಟ್ಯೂಬ್​ನಲ್ಲಿ ಒಂದು ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಕಂಡಿದೆ. ಇದೀಗ ‘ಓಹೋ ಹೃದಯ’ ಹಾಡು ಸಹ ಮಧುರವಾಗಿದ್ದು ಜನರ ಗಮನ ಸೆಳೆಯುತ್ತಿದೆ ಎಂಬುದು ಚಿತ್ರತಂಡ ಮಾತು. ಬಹುತೇಕ ಹೊಸಬರೇ ಮಾಡಿರುವ ಈ ಸಿನಿಮಾವನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:03 pm, Tue, 18 March 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!