‘ಭೀಮ’ನ ಎದುರು ತೊಡೆ ತಟ್ಟಲಿದ್ದಾನೆ ‘ಜೀನಿಯಸ್ ಮುತ್ತ’; ಈ ಸಿನಿಮಾಗಳ ವಿಶೇಷತೆಗಳೇನು?

‘ಭೀಮ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇದು ಪಕ್ಕಾ ಮಾಸ್ ಸಿನಿಮಾ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾಗಳ ಜೊತೆಗೆ ‘ಜೀನಿಯಸ್ ಮುತ್ತ’, ‘ಇದು ಎಂಥಾ ಲೋಕವಯ್ಯ’, ‘ಕಬಂಧ’ ಹೆಸರಿನ ಸಿನಿಮಾಗಳೂ ಬಿಡುಗಡೆ ಕಾಣುತ್ತಿವೆ.

‘ಭೀಮ’ನ ಎದುರು ತೊಡೆ ತಟ್ಟಲಿದ್ದಾನೆ ‘ಜೀನಿಯಸ್ ಮುತ್ತ’; ಈ ಸಿನಿಮಾಗಳ ವಿಶೇಷತೆಗಳೇನು?
ಭೀಮ-ಜೀನಿಯ್ ಮುತ್ತ
Follow us
|

Updated on: Aug 08, 2024 | 3:09 PM

ಕನ್ನಡದಲ್ಲಿ ಇತ್ತೀಚೆಗೆ ಸ್ಟಾರ್ ಹೀರೋಗಳ ಸಿನಿಮಾಗಳು ಕಡಿಮೆ ಆಗಿವೆ. ಅದಕ್ಕೆ ಕಾರಣ ಆಗಿದ್ದು ಎಲೆಕ್ಷನ್ ಅಬ್ಬರ. ಹೌದು, ಲೋಕಸಭೆ ಚುನಾವಣೆ ಕಾರಣಕ್ಕೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಈಗ ಚುನಾವಣಾ ಅಬ್ಬರ ಮುಗಿದಿದೆ. ಸರ್ಕಾರದ ರಚನೆಯೂ ಆಗಿದೆ. ಈ ಬೆನ್ನಲ್ಲೇ ಒಂದೊಂದೇ ಸಿನಿಮಾಗಳು ರಿಲೀಸ್ ಆಗುತ್ತಿವೆ. ಸಿನಿಮಾಗಳು ಇಲ್ಲದೆ ಸೊರಗುತ್ತಿರುವ ಥಿಯೇಟರ್​​ಗಳಿಗೆ ಜೀವಕಳೆ ಬರುತ್ತಿದೆ.

ಭೀಮ

ನಿರ್ದೇಶನ: ದುನಿಯಾ ವಿಜಯ್.

ಪಾತ್ರವರ್ಗ: ದುನಿಯಾ ವಿಜಯ್, ಅಶ್ವಿನಿ ಅಂಬರೀಷ್, ಕಾಕ್ರೋಚ್ ಸುಧಿ, ರಂಗಾಯಣ ರಘು, ಅಚ್ಯುತ್ ಕುಮಾರ್. ನಿರ್ಮಾಣ: ಕೃಷ್ಣ ಸಾರ್ಥಕ್, ಜಗದೀಶ್ ಗೌಡ

ಸಂಗೀತ: ಚರಣ್ ರಾಜ್

ಛಾಯಾಗ್ರಹಣ: ಧನು ಕುಮಾರ್

ಸಂಭಾಷಣೆ: ಮಾಸ್ತಿ

ಛಾಯಾಗ್ರಹಣ: ಶಿವಸೇನಾ

‘ಭೀಮ’ ಪಕ್ಕಾ ಮಾಸ್ ಸಿನಿಮಾ. ಈ ಚಿತ್ರ ಆಗಸ್ಟ್ 9ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಇದೆ. ಇದು ಕೂಡ ರೌಡಿಸಂ ಸಿನಿಮಾ. ಇದರಲ್ಲಿ ಅಗಾಧವಾಗಿ ರಕ್ತ, ಮಚ್ಚು-ಲಾಂಗ್, ಅವಾಚ್ಯ ಶಬ್ದಗಳ ಬಳಕೆ ಆಗಿದೆ. ಈ ಕಾರಣಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆ.

ವಿಶೇಷತೆ: ಇದು ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾ. ಅವರ ನಿರ್ದೇಶನದ ಮೊದಲ ಸಿನಿಮಾ ‘ಸಲಗ’ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದಿಂದ ಅವರು ಭರ್ಜರಿ ಯಶಸ್ಸು ಕಂಡರು. ಈಗ ಅವರು ಮತ್ತೊಂದು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರೌಡಿಸಂ ಇಷ್ಟಪಡೋರಿಗೆ ಈ ಸಿನಿಮಾ ಇಷ್ಟ ಆಗಲಿದೆ. ಇದರ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಕಥೆಯೂ ಚಿತ್ರದಲ್ಲಿ ಇದೆ.

ಜೀನಿಯಸ್ ಮುತ್ತ

ನಿರ್ದೇಶನ: ನಾಗಿಣಿ ಭರಣ, ಟಿಎಸ್ ನಾಗಾ ಭರಣ

ಪಾತ್ರವರ್ಗ: ಶ್ರೇಯಸ್ ಜಯ್​ಪ್ರಕಾಶ್, ಪ್ರಿಯಾ ಅವಿನಾಶ್, ಸುಮನ್ ಜಾದೂಗಾರ್, ಗಿರಿಜಾ ಲೋಕೇಶ್, ಸುಂದರ್ ರಾಜ್

ನಿರ್ಮಾಣ: ಜಿಎಸ್ ಲತಾ ಜೈ ಪ್ರಕಾಶ್

ಸಂಗೀತ ಬಾಪು ಪದ್ಮನಾಭ

‘ಜೀನಿಯಸ್ ಮುತ್ತ’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಇದು ‘ಯು’ ಸರ್ಟಿಫಿಕೇಟ್ ಪಡೆದ ಚಿತ್ರ. ಈ ಸಿನಿಮಾ 1 ಗಂಟೆ 44 ನಿಮಿಷ ಇದೆ. ನಾಗಾಭರಣ ಅವರು ಈ ಮೊದಲು ‘ಚಿನ್ನಾರಿ ಮುತ್ತ’ ಸಿನಿಮಾ ಮಾಡಿದ್ದರು. ಈಗ ಅವರು ‘ಜೀನಿಯಸ್ ಮುತ್ತ’ ಸಿನಿಮಾ ಮಾಡಿದ್ದಾರೆ.

ಇದನ್ನೂ ಓದಿ: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್​ನಲ್ಲಿ ಬರಲಿದೆ ಸಿನಿಮಾ; ಇರಲಿದೆ ‘ಭೀಮ’ನ ನಿರ್ದೇಶನ

ವಿಶೇಷತೆ:

‘ಚಿನ್ನಾರಿ ಮುತ್ತ’ ಆಗಿನ ಕಾಲಕ್ಕೆ ಸಖತ್ ಹಿಟ್ ಸಿನಿಮಾ. ವಿಜಯ್ ರಾಘವೇಂದ್ರ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಜೀನಿಯಸ್ ಮುತ್ತ’ ಸಿನಿಮಾದಲ್ಲಿ ಬರೋ ಪ್ರಮುಖ ಪಾತ್ರದ ಹೆಸರು ಮುತ್ತ. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರು ಅತಿಥಿ ಪಾತ್ರ ಮಾಡಿದ್ದಾರೆ.

ಇತರೆ ಸಿನಿಮಾಗಳು

‘ಇದು ಎಂಥಾ ಲೋಕವಯ್ಯ’, ‘ಕಬಂಧ’ ಹೆಸರಿನ ಸಿನಿಮಾಗಳೂ ಕನ್ನಡದಲ್ಲಿ ರಿಲೀಸ್ ಆಗಲಿವೆ. ತೆಲುಗಿನಲ್ಲಿ ‘ಕಮಿಟಿ ಕುರ್ರೋಳು’, ಹಿಂದಿಯ ‘ಆಲಿಯಾ ಬಸು ಗಯಾಬ್ ಹೇ’ ಚಿತ್ರ ಬಿಡುಗಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್