AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ತಂದೆ-ಮಗಳ ಪ್ರೀತಿ ಮೇಲೆಯೇ ಶಂಕರ್​ ಅಶ್ವತ್ಥ್​ಗೆ ಅನುಮಾನ! ಮಾನವೀಯತೆಗೆ ಬೆಲೆ ಇಲ್ವಾ?

Bigg Boss Kannada : ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಹೊಸ ಹೊಸ ಟ್ವಿಸ್ಟ್​ಗಳು ಸಿಗುತ್ತಿವೆ. ಎಲ್ಲರ ಮುಖವಾಡ ನಿಧಾನಕ್ಕೆ ಬಯಲಾಗುತ್ತಿದೆ. ಈ ಮಾತಿಗೆ ಶಂಕರ್​ ಅಶ್ವತ್ಥ್​ ಕೂಡ ಹೊರತಲ್ಲ.

BBK8: ತಂದೆ-ಮಗಳ ಪ್ರೀತಿ ಮೇಲೆಯೇ ಶಂಕರ್​ ಅಶ್ವತ್ಥ್​ಗೆ ಅನುಮಾನ! ಮಾನವೀಯತೆಗೆ ಬೆಲೆ ಇಲ್ವಾ?
ಬಿಗ್​ ಬಾಸ್​ನಲ್ಲಿ ಶಂಕರ್​ ಅಶ್ವತ್ಥ್​
ಮದನ್​ ಕುಮಾರ್​
| Edited By: |

Updated on: Mar 21, 2021 | 12:44 PM

Share

ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಮೂರು ವಾರಗಳು ಕಳೆದಿವೆ. ನಾಲ್ಕನೇ ವಾರದ ಆಟಕ್ಕೆ ಎಲ್ಲ ಸ್ಪರ್ಧಿಗಳು ಸಜ್ಜಾಗುತ್ತಿದ್ದಾರೆ. ಈ ನಡುವೆ ಎಲ್ಲರೂ ತಮ್ಮ ಆಟದ ವೈಖರಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ನಟ ಶಂಕರ್​ ಅಶ್ವತ್ಥ್​ ಕೂಡ ನೇರ ನಡೆನುಡಿಯಿಂದ ಸದ್ದು ಮಾಡುತ್ತಿದ್ದಾರೆ. ಆದರೆ ಅವರು ತಂದೆ-ಮಗಳ ಪ್ರೀತಿ ಮೇಲೆ ಅನುಮಾನ ಪಟ್ಟಿರುವುದು ಈಗ ಚರ್ಚೆಗೆ ಕಾರಣ ಆಗಿದೆ!

ಹೌದು, ಡೊಡ್ಮನೆಯಲ್ಲಿ ಇರುವ ಇರುವ ಅತಿ ಹಿರಿಯ ಸ್ಪರ್ಧಿ ಎಂದರೆ ಅದು ಶಂಕರ್​ ಅಶ್ವತ್ಥ್​. ಎಲ್ಲರೂ ಅವರನ್ನು ತಂದೆಯ ರೀತಿ ನೋಡುತ್ತಿದ್ದಾರೆ. ಸಾಧ್ಯವಾದಾಗಲೆಲ್ಲ ಅವರಿಗೆ ಎಲ್ಲರೂ ಸಹಾಯ ಮಾಡುತ್ತಾರೆ. ನೀವು ನಮ್ಮ ತಂದೆ ಸಮಾನರು ಎಂದು ರಾಜೀವ್​, ಶಮಂತ್​, ಗೀತಾ ಭಾರತಿ​ ಭಟ್​ ಕೂಡ ಬಾಯಿ ಬಿಟ್ಟು ಹೇಳಿದ್ದಾರೆ. ಆದರೆ ಇದೇ ವಿಚಾರ ಶಂಕರ್​ಗೆ ಮುಳುವಾಗಿದೆ! ಅಚ್ಚರಿ ಎನಿಸಿದರೂ ಇದು ನಿಜ.

ಮೂರನೇ ವಾರದಲ್ಲಿ ಶಂಕರ್​ ಅವರ ಪರ್ಫಾಮೆನ್ಸ್​ ಚೆನ್ನಾಗಿಲ್ಲ ಎಂದು ಹೇಳಿ ಅವರಿಗೆ ಕಳಪೆ ಹಣೆಪಟ್ಟಿ ಕಟ್ಟಲಾಯಿತು. ಹಾಗಾಗಿ ಅವರನ್ನು ಜೈಲಿಗೆ ಕೂಡ ಕಳಿಸಲಾಯಿತು. ಯಾಕೆ ಇಂಥ ಪರಿಸ್ಥಿತಿ ಬಂತು ಎಂದು ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್​ನಲ್ಲಿ ಶಂಕರ್​ಗೆ ಸುದೀಪ್​ ಪ್ರಶ್ನೆ ಮಾಡಿದರು. ಅದಕ್ಕೆ ಶಂಕರ್​ ನೀಡಿದ ಉತ್ತರ ಕೇಳಿ ಎಲ್ಲರಿಗೂ ಒಂದು ಕ್ಷಣ ಅಚ್ಚರಿ ಆಯಿತು. ತಂದೆ ಸಮಾನರು ಎಂದು ಗೀತಾ ಭಾರತಿ ಭಟ್​ ಅವರು ಕಾಫಿ ಮಾಡಿಕೊಟ್ಟಿದ್ದರ ಹಿಂದೆಯೂ ಸ್ಟ್ರ್ಯಾಟಜಿ ಇತ್ತು ಎಂದು ಶಂಕರ್​ ಅನುಮಾನ ವ್ಯಕ್ತಪಡಿಸಿದ್ದಾರೆ!

‘ಪ್ರಶಾಂತ್​ ಅವರು ಬಹಳಷ್ಟು ಸಲ ನನಗೆ ಕಾಫಿ, ಟೀ ಮಾಡಿಕೊಟ್ಟಿದ್ದಾರೆ. ಗೀತಾ ಕೂಡ ಡ್ಯಾಡಿ ನಿಮಗೆ ಊಟಕ್ಕೆ ಹಾಕ್ಲಾ ಎಂದು ಸಹಾಯ ಮಾಡಿದ್ದಾರೆ. ಅದರ ಬಗ್ಗೆ ಜೈಲಲ್ಲಿ ಕುಳಿತು ಯೋಚನೆ ಮಾಡಿದೆ. ಯಾವಾಗಲೂ ನಾನು ಸೋಫಾ ಮೇಲೆ ಕೂತಿರುತ್ತೇನೆ ಎಂದು ಪ್ರಶಾಂತ್​ ಆರೋಪ ಮಾಡಿದರು. ನಾನು ಕೆಲಸ ಮಾಡದೇ ಸೋಮಾರಿ ಆಗಿದ್ದೇನೆ ಎಂಬುದನ್ನು ಬಿಂಬಿಸುವ ಸಲುವಾಗಿಯೇ ಇವರೆಲ್ಲ ಹೀಗೆ ಸ್ಟ್ರ್ಯಾಟಜಿ ಮಾಡಿದ್ರೇನೋ ಅಂತ ಅನಿಸಿತು. ನಾನು ಮಾಡಬೇಕಾಗಿದ್ದ ಕೆಲಸವನ್ನು ಅವರೇ ತಡೆದು, ಬೇರೆಯವರ ಕಣ್ಣಲ್ಲಿ ಒಳ್ಳೆಯವರು ಅನಿಸಿಕೊಳ್ಳುತ್ತಿದ್ದಾರಾ ಎಂಬ ಯೋಚನೆ ನನಗೆ ಬಂತು’ ಎಂದು ಸುದೀಪ್​ ಬಳಿ ಶಂಕರ್​ ಹೇಳಿದ್ದಾರೆ.

‘ಆದರೆ ನಾವು ಯಾರೂ ಇಲ್ಲಿ ಸ್ಟ್ರ್ಯಾಟಜಿ ಮಾಡುತ್ತಿಲ್ಲ ಅನಿಸುತ್ತೆ ಸರ್. ಶಂಕರ್​ ಬಗ್ಗೆ ನಾವು ತೋರಿಸುತ್ತಿರುವ ಕಾಳಜಿ ನಿಜವಾದ್ದು. ಆದರೆ ಜೈಲಿನಿಂದ ಹೊರಬಂದಾಗ ಊಟ ಹಾಕಿಕೊಡ್ಲಾ ಎಂದು ಕೇಳಿದಾಗ ಯಾರ ಸಹವಾಸನೂ ಬೇಡ ಎಂದು ಅವರು ಹೇಳಿದ್ದು ನನಗೆ ಬೇಸರವಾಯಿತು’ ಎಂದು ಗೀತಾ ಭಾರತಿ ಭಟ್​ ಹೇಳಿದ್ದಾರೆ.

ಇದನ್ನೂ ಓದಿ: ನಿನ್ನೆ-ಮೊನ್ನೆ ಬಚ್ಚಾ ನನ್ನನ್ನು ಜಡ್ಜ್​ ಮಾಡ್ಬೇಕಾ? ಜೈಲಿನಿಂದ ಹೊರಬಂದು ಸಂಬರಗಿಗೆ ಎಚ್ಚರಿಕೆ ನೀಡಿದ ಶಂಕರ್​ ಅಶ್ವತ್ಥ್​

ಬಿಗ್​ ಬಾಸ್​ ಅಭ್ಯರ್ಥಿಗಳ ಕುತಂತ್ರ ಬುದ್ಧಿ ಬಗ್ಗೆ ಸುದೀಪ್​ ಬಳಿ ಅಳಲು ತೋಡಿಕೊಂಡ ಶಂಕರ್​ ಅಶ್ವತ್ಥ್​ ​

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ