AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರ್​ ನಾಗ್ ಕನಸಿನ ಕೂಸು ‘ಮಾಲ್ಗುಡಿ ಡೇಸ್’ ಸರಣಿಗೆ 40 ವರ್ಷ

ಆರ್‌ಕೆ ನಾರಾಯಣ್ ಅವರ ಕಾಲ್ಪನಿಕ ಲೋಕ, ಶಂಕರ್ ನಾಗ್ ಅವರ ದೃಶ್ಯ ವೈಭವ ಹಾಗೂ ಮಾಸ್ಟರ್ ಮಂಜುನಾಥ್ ಅಭಿನಯದ 'ಮಾಲ್ಗುಡಿ ಡೇಸ್' ಸರಣಿ ಪ್ರಸಾರವಾಗಿ ಈಗ ಭರ್ತಿ 40 ವರ್ಷಗಳು ಸಂದಿವೆ. 1986ರಲ್ಲಿ ದೂರದರ್ಶನದಲ್ಲಿ ಪ್ರಸಾರ ಆರಂಭಿಸಿ ಭಾರತೀಯರ ಬಾಲ್ಯದ ಅವಿಭಾಜ್ಯ ಅಂಗವಾದ ಈ ಸರಣಿ, ಇಂದಿಗೂ ಆಗುಂಬೆಯ ಮಣ್ಣಿನ ಸೊಗಡು ಹಾಗೂ ಎಲ್.ವೈದ್ಯನಾಥನ್ ಅವರ 'ತಾನಾ ನಾನಾ' ಹಿನ್ನೆಲೆ ಸಂಗೀತದ ಮೂಲಕ ನಮ್ಮನ್ನು ಬಾಲ್ಯದ ನೆನಪುಗಳಿಗೆ ಕೊಂಡೊಯ್ಯುತ್ತದೆ.

ಶಂಕರ್​ ನಾಗ್ ಕನಸಿನ ಕೂಸು ‘ಮಾಲ್ಗುಡಿ ಡೇಸ್’ ಸರಣಿಗೆ 40 ವರ್ಷ
ಮಾಲ್ಗುಡಿ ಡೇಸ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 16, 2026 | 8:04 AM

Share

ಮುಖ್ಯಾಂಶಗಳು

  • ಭರ್ತಿ 40 ವರ್ಷಗಳನ್ನು ಪೂರೈಸಿದ ಮಾಲ್ಗುಡಿ ಮ್ಯಾಜಿಕ್
  • 'ತಾನಾ ನಾನಾ' ಸಾರ್ವಕಾಲಿಕ ರಾಗ ಹಾಗೂ ಸ್ವಾಮಿಯ ಬಾಲ್ಯದ ಕಥೆ
  • ಆಗುಂಬೆಯಲ್ಲೇ ಸೃಷ್ಟಿಯಾಗಿದ್ದು ಹೇಗೆ 'ಮಾಲ್ಗುಡಿ' ಕಾಲ್ಪನಿಕ ಲೋಕ

ಆರ್‌ಕೆ ನಾರಾಯಣ್ ಅವರ ಕಲ್ಪನೆಯ ಕಥಾಲೋಕ, ಶಂಕರ್ ನಾಗ್ ಅವರ ಅದ್ಭುತ ದೃಶ್ಯಾವಳಿ ಹಾಗೂ ಎಲ್.ವೈದ್ಯನಾಥನ್ ಅವರ ಹಿನ್ನೆಲೆ ಸಂಗೀತದ ಮೂಲಕ ‘ಮಾಲ್ಗುಡಿ ಡೇಸ್’ ಸರಣಿ ಮೂಡಿ ಬಂದಿತ್ತು. ಕಥಾಸರಣಿ ಬಿಡುಗಡೆಯಾಗಿ ಈಗ ಭರ್ತಿ 40 ವರ್ಷಗಳು ತುಂಬುತ್ತಾ ಬಂದಿವೆ. 1986ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾಗಿದ್ದ ಈ ಸರಣಿ, ಇಂದಿಗೂ ಕೋಟ್ಯಂತರ ಭಾರತೀಯರ ಬಾಲ್ಯದ ಮಧುರ ನೆನಪಾಗಿದೆ.

ಶಂಕರ್ ನಾಗ್ ಅವರ ದೃಶ್ಯ ಮ್ಯಾಜಿಕ್

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ನಿರ್ದೇಶಕ ಶಂಕರ್ ನಾಗ್ ಅವರು ಅತ್ಯಂತ ಕಾಳಜಿ ಮತ್ತು ಶ್ರದ್ಧೆಯಿಂದ ಈ ಸರಣಿಯನ್ನು ನಿರ್ದೇಶಿಸಿದ್ದರು. ಆರ್.ಕೆ. ನಾರಾಯಣ್ ಅವರ ಸಣ್ಣ ಕಥೆಗಳನ್ನು ದೃಶ್ಯ ರೂಪಕ್ಕೆ ತರುವಾಗ ಅವರು ಅಳವಡಿಸಿಕೊಂಡ ತಂತ್ರಜ್ಞಾನ ಹಾಗೂ ಮೇಕಿಂಗ್ ಶೈಲಿ ಇಂದಿಗೂ ಮಾದರಿಯಾಗಿದೆ. ಶಂಕರ್ ನಾಗ್ ಅವರ ವಿಷನ್ ಎಷ್ಟು ಅದ್ಭುತವಾಗಿತ್ತೆಂದರೆ, ಇಡೀ ಭಾರತವೇ ಈ ಸರಣಿಗೆ ಮನಸೋತಿತ್ತು.

ಆಗುಂಬೆಯಲ್ಲೇ ಸೃಷ್ಟಿಯಾಗಿತ್ತು ‘ಮಾಲ್ಗುಡಿ’ ಲೋಕ

ಕಥೆಯಲ್ಲಿ ಬರುವ ಕಾಲ್ಪನಿಕ ತಾಣ ‘ಮಾಲ್ಗುಡಿ’ಯನ್ನು ಕಣ್ಣಿಗೆ ಕಟ್ಟುವಂತೆ ಮಾಡಲು ಶಂಕರ್ ನಾಗ್ ಆರಿಸಿಕೊಂಡಿದ್ದು ಶಿವಮೊಗ್ಗ ಜಿಲ್ಲೆಯ ಆಗುಂಬೆಯನ್ನು. ಅಲ್ಲಿನ ಹಳೆಯ ಮನೆಗಳು, ಮಲೆನಾಡಿನ ಹಸಿರು, ಮಳೆ ಹಾಗೂ ಪ್ರಕೃತಿ ಸೌಂದರ್ಯ ಇಡೀ ಸರಣಿಗೆ ಜೀವ ತುಂಬಿದ್ದವು. ಇಂದಿಗೂ ಆಗುಂಬೆಗೆ ಹೋದರೆ ‘ಮಾಲ್ಗುಡಿ ಡೇಸ್’ ಶೂಟಿಂಗ್ ನಡೆದ ಮನೆಗಳನ್ನು ಪ್ರವಾಸಿಗರು ಆಸಕ್ತಿಯಿಂದ ನೋಡುತ್ತಾರೆ.ಈ ಜಾಗವನ್ನು ಸೂಚಿಸಿದ್ದರು ಅವರೇ ಅನ್ನೋದು ವಿಶೇಷ.

ಸ್ವಾಮಿ ಮತ್ತು ಆತನ ಗೆಳೆಯರ ಬಳಗ

ಮಾಲ್ಗುಡಿ ಡೇಸ್ ಎಂದ ತಕ್ಷಣ ನೆನಪಿಗೆ ಬರುವುದು ಕಲಾವಿದರ ಬಳಗ. ಮಾಸ್ಟರ್ ಮಂಜುನಾಥ್, ಅನಂತ್ ನಾಗ್, ಗಿರೀಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ ಸೇರಿದಂತೆ ಶ್ರೇಷ್ಠ ಕಲಾವಿದರ ದಂಡೇ ಈ ಸರಣಿಯಲ್ಲಿ ನಟಿಸಿತ್ತು.

‘ತಾನಾ ನಾನಾ ತಾನಾನಾನಾ’ ಸಾರ್ವಕಾಲಿಕ ರಾಗ

ಎಲ್.ವೈದ್ಯನಾಥನ್ ಸಂಯೋಜಿಸಿದ ಮಾಲ್ಗುಡಿ ಡೇಸ್ ಶೀರ್ಷಿಕೆ ಗೀತೆ ಕೇಳದ ಭಾರತೀಯನೇ ಇಲ್ಲ ಎನ್ನಬಹುದು. ಕೇವಲ ಒಂದು ಸರಳ ರಾಗ ಇಡೀ ಸರಣಿಯ ಆತ್ಮವಾಗಿ ಮೂಡಿಬಂದಿತ್ತು. ಇಂದಿಗೂ ಆ ಟ್ಯೂನ್ ಕೇಳಿದರೆ ಸಾಕು, ನಾವೆಲ್ಲರೂ ನಮ್ಮ ಬಾಲ್ಯದ ದಿನಗಳಿಗೆ ಜಾರಿಬಿಡುತ್ತೇವೆ.

ಇದನ್ನೂ ಓದಿ: ನಿಧನ ಹೊಂದುವ ಹಿಂದಿನ ದಿನ ಸಾಯುವ ದೃಶ್ಯವನ್ನೇ ಶೂಟ್ ಮಾಡಿದ್ದ ಶಂಕರ್ ನಾಗ್

ಸ್ಮರಣೀಯ ಮೈಲಿಗಲ್ಲು

ದೂರದರ್ಶನದ ಸುವರ್ಣ ಯುಗಕ್ಕೆ ಸಾಕ್ಷಿಯಾಗಿದ್ದ ‘ಮಾಲ್ಗುಡಿ ಡೇಸ್’ ಕೇವಲ ಒಂದು ಸರಣಿಯಾಗಿ ಉಳಿಯದೆ ಭಾರತೀಯ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. 40 ವರ್ಷಗಳು ಕಳೆದರೂ ಇದರ ಜನಪ್ರಿಯತೆ ಹಾಗೂ ಪ್ರಸ್ತುತತೆ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುವುದೇ ಶಂಕರ್ ನಾಗ್ ಹಾಗೂ ಅವರ ಇಡೀ ತಂಡದ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಡಿಕೆ ಶಿವಕುಮಾರ್
‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಡಿಕೆ ಶಿವಕುಮಾರ್