ಖ್ಯಾತ ಬಾಲಿವುಡ್​ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಕನ್ನಡದ ‘ಡ್ಯಾಡ್​’ ಸಿನಿಮಾ ಟೀಸರ್​

‘ಡ್ಯಾಡ್’ ಸಿನಿಮಾಗೆ ಶಿವಹರಿ ವರ್ಮಾ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವರ ಕಾರ್ಯವನ್ನು ಬಾಲಿವುಡ್​ ನಿರ್ದೇಶಕ ಸುಭಾಷ್​ ಘಾಯ್​ ಶ್ಲಾಘಿಸಿದ್ದಾರೆ. ಅರ್ಜುನ್ ಕೃಷ್ಣ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ವಿಶಾಲ್ ರಾಘವ್, ನೃತ್ಯ ಬೋಪಣ್ಣ, ಮಾಹಿಕಾ ಮಹಿ ಅವರು ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಖ್ಯಾತ ಬಾಲಿವುಡ್​ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಕನ್ನಡದ ‘ಡ್ಯಾಡ್​’ ಸಿನಿಮಾ ಟೀಸರ್​
‘ಡ್ಯಾಡ್​’ ಸಿನಿಮಾ ಪೋಸ್ಟರ್​
Follow us
|

Updated on: Oct 25, 2023 | 3:56 PM

ಕನ್ನಡದ ‘ಡ್ಯಾಡ್’ ಸಿನಿಮಾ (DAD Movie) ಟೀಸರ್​ ಬಿಡುಗಡೆ ಆಗಿದೆ. ಆಯುಧ ಪೂಜೆ ಪ್ರಯುಕ್ತ ಈ ಟೀಸರ್​ ಲಾಂಚ್​ ಮಾಡಲಾಗಿದೆ. ಇದರ ಥೀಮ್​ ಕೂಡ ಅದೇ ರೀತಿ ಇದೆ. ಸಿನಿಪ್ರಿಯರು ಮಾತ್ರವಲ್ಲದೇ ಬಾಲಿವುಡ್​ನ ಹಿರಿಯ ನಿರ್ದೇಶಕ ಸುಭಾಷ್​ ಘಾಯ್​ ಅವರು ಕೂಡ ಈ ಟೀಸರ್​ (DAD Movie Teaser) ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ‘ಡ್ಯಾಡ್​’ ಸಿನಿಮಾದಲ್ಲಿ ಒಂದು ಖಡಕ್​ ಆದಂತಹ ಕಥೆ ಇದೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ರಾಜ್ಯ, ಭಾಷೆಯ ಗಡಿಯನ್ನೂ ಮೀರಿ ಈ ಸಿನಿಮಾದ ಟೀಸರ್​ ಗಮನ ಸೆಳೆಯುತ್ತಿದೆ. ಹಿಂದಿಯ ‘ಖಳನಾಯಕ್​’, ‘ತಾಲ್​’, ‘ಸೌದಾಗರ್​’, ‘ಸ್ವದೇಶ್​’ ಮಂತಾದ ಸಿನಿಮಾಗಳ ನಿರ್ದೇಶಕ ಸುಭಾಷ್​ ಭಾಯ್ (Subhash Ghai)​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಡ್ಯಾಡ್​’ ಟೀಸರ್​ ಶೇರ್​ ಮಾಡಿಕೊಂಡಿದ್ದಾರೆ. ಆ ಮೂಲಕ ಬಾಲಿವುಡ್​ ಮಂದಿ ಕೂಡ ಈ ಚಿತ್ರದ ಬಗ್ಗೆ ಗಮನ ಹರಿಸುವಂತೆ ಮಾಡಿದ್ದಾರೆ.

‘ದೇವರಾಜ್ ಅಲಿಯಾಸ್ ಡೇವಿಡ್’ ಎಂಬುದು ‘ಡ್ಯಾಡ್’ ಶೀರ್ಷಿಕೆಯ ವಿಸ್ತೃತ ರೂಪ. ಸಿನಿಮಾದ ಕಥೆಗೆ ಈ ಡಿಫರೆಂಟ್​ ಟೈಟಲ್​ ಸೂಕ್ತವಾಗಿದೆ. ಅರ್ಜುನ್ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಸಾಮಾನ್ಯವಾಗಿ ಎಲ್ಲರಿಗೂ ಎರಡು ಮುಖ ಇರುತ್ತದೆ. ಸಮಾಜದ ಎದುರು ಒಂದು ಮುಖ ಮಾತ್ರ ಕಾಣುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಆಗಾಗ ಕಷ್ಟಗಳು ಮುತ್ತಿಕೊಂಡರೆ, ದುಷ್ಟರು ಕಾಟ ನೀಡಿದರೆ, ನ್ಯಾಯ ಸಿಗದೇ ಇದ್ದಾಗ ಆತನ 2ನೇ ಮುಖ ಅನಾವರಣಗೊಳ್ಳುತ್ತದೆ. ಇಂಥ ಒಂದು ಎಳೆಯನ್ನು ಡ್ಯಾಡ್ ಸಿನಿಮಾ ಹೊಂದಿದೆ’ ಎಂದು ಅವರು ಹೇಳಿದ್ದಾರೆ.

View this post on Instagram

A post shared by SG (@subhashghai1)

ಅರ್ಜುನ್ ಕೃಷ್ಣ ಅವರು ಎಂಬಿಎ ಪೂರ್ಣಗೊಳಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕುಂದಾಪುರದ ವಿಶಾಲ್ ರಾಘವ್ ಅವರು ‘ಡ್ಯಾಡ್​’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ನೃತ್ಯ ಬೋಪಣ್ಣ ಹಾಗೂ ಮಾಹಿಕಾ ಮಹಿ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾಗೆ ಶೂಟಿಂಗ್​ ಮುಕ್ತಾಯ ಆಗಿದೆ. ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಕೂಡ ಕೊನೇ ಹಂತದಲ್ಲಿವೆ.

ಇದನ್ನೂ ಓದಿ: ಜನಮನ ಗೆಲ್ಲುತ್ತಿದೆ ‘ಗರಡಿ’ ಸಿನಿಮಾದ ‘ಬಡವನ ಹೃದಯ..’ ಸಾಂಗ್​

ಈ ಚಿತ್ರದ ಮೂರು ಹಾಡುಗಳು ಬಿಡುಗಡೆ ಆಗಿವೆ. ನಟನಾ ಮುಂಜು ಅವರಿಗೂ ಈ ಸಿನಿಮಾದಲ್ಲೊಂದು ಪ್ರಮುಖ ಪಾತ್ರವಿದೆ. ಅನೇಕ ಹೊಸಬರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ಅವರ ಜೊತೆ ಹಿರಿಯ ಕಲಾವಿದರಾದ ಸುಚೇಂದ್ರ ಪ್ರಸಾದ್, ಅರುಣಾ ಬಾಲರಾಜ್, ಸಿದ್ಲಿಂಗು ಶ್ರೀಧರ್ ಕೂಡ ನಟಿಸಿದ್ದಾರೆ.

‘ಡ್ಯಾಡ್’ ಸಿನಿಮಾ ಟೀಸರ್​ :

‘ಡ್ಯಾಡ್​’ ಸಿನಿಮಾ ಮೂಲಕ ಹೊಸ ಖಳನಟರು ಪರಿಚಯಗೊಳ್ಳಲಿದ್ದಾರೆ. ಶಿವಹರಿ ವರ್ಮಾ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವರ ಕಾರ್ಯವನ್ನು ಸುಭಾಷ್​ ಘಾಯ್​ ಶ್ಲಾಘಿಸಿದ್ದಾರೆ. ಮುಂಬೈ ಮೂಲದ ಆಕಾಶ್ ಸೇಠ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಿಲ್ ಕುಮಾರ್ ಕೆ. ಅವರು ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಲ್ಲದೇ ವಿಎಫ್ಎಕ್ಸ್ ಹಾಗೂ ಪೋಸ್ಟರ್ ವಿನ್ಯಾಸದ ಕಾರ್ಯವನ್ನೂ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ