ದರ್ಶನ್
ಭಾರಿ ನಿರೀಕ್ಷೆ ಮೂಡಿಸಿದ್ದ ‘ಕಾಟೇರ’ ಸಿನಿಮಾ (Kaatera Movie) ಇಂದು (ಡಿಸೆಂಬರ್ 29) ಬಿಡುಗಡೆ ಆಗಿದೆ. ಡಿ.28ರ ಮಧ್ಯ ರಾತ್ರಿಯಿಂದಲೇ ಶೋ ಆರಂಭ ಆಗಿವೆ. ಹಲವು ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿವೆ. ದರ್ಶನ್ (Darshan) ಅಭಿಮಾನಿಗಳು ‘ಕಾಟೇರ’ ಸಿನಿಮಾದ ಬಿಡುಗಡೆಯನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ದರ್ಶನ್ಗೆ ಜೋಡಿಯಾಗಿ ಆರಾಧನಾ ರಾಮ್ ನಟಿಸಿದ್ದಾರೆ. ಶ್ರುತಿ, ಅವಿನಾಶ್, ಜಗಪತಿ ಬಾಬು ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ‘ಕಾಟೇರ’ ಸಿನಿಮಾದ ಮೊದಲಾರ್ಧದಲ್ಲಿ (Kaatera First Half Review) ಏನೆಲ್ಲ ಇದೆ ಎಂಬುದನ್ನು ತಿಳಿಯಲು ಈ ರಿಪೋರ್ಟ್ ನೋಡಿ..
- ಸಾಲು ಸಾಲು ಅಸ್ಥಿಪಂಜರಗಳು ಪತ್ತೆಯ ಆಗುವ ದೃಶ್ಯದಿಂದ ‘ಕಾಟೇರ’ ಸಿನಿಮಾ ಆರಂಭ. ಆ ಅಸ್ಥಿ ಪಂಜರಗಳ ಹಿಂದಿನ ಸಸ್ಪೆನ್ಸ್ ಏನೆಂಬುದೇ ಈ ಸಿನಿಮಾದ ಕಥೆ.
- ರೆಟ್ರೋ ಕಾಲದ ಕಥೆ ಈ ಸಿನಿಮಾದಲ್ಲಿದೆ. ಅದಕ್ಕೆ ತಕ್ಕಂತೆ ಸೆಟ್ಗಳ ಮೂಲಕ ದೃಶ್ಯಗಳನ್ನು ಕಟ್ಟಿಕೊಟ್ಟಿದೆ ‘ಕಾಟೇರ’ ಸಿನಿಮಾ.
- ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ದರ್ಶನ್ ಎಂಟ್ರಿ. ಮೊದಲ ಡೈಲಾಗ್ ಹೊಡೆಯುವ ಮುನ್ನವೇ ಮಾಸ್ ಲುಕ್ ನೀಡಿದ ಚಾಲೆಂಜಿಂಗ್ ಸ್ಟಾರ್.
- ಫ್ಲ್ಯಾಶ್ಬ್ಯಾಕ್ ಕಥೆ ತೆರೆದುಕೊಂಡಾಗ ದರ್ಶನ್ ಅವರ ಇನ್ನೊಂದು ಗೆಟಪ್ ಬಹಿರಂಗ. ಕುಲುಮೆಯಲ್ಲಿ ಕೆಲಸ ಮಾಡುವ ಯುವಕನ ಪಾತ್ರದಲ್ಲಿ ಮಾಸ್ ಇಂಟ್ರಡಕ್ಷನ್.
- ರೈತರ ಪ್ರಾಣ ಹಿಂಡುವ ಜಮೀನ್ದಾರನ ಪಾತ್ರ ಮಾಡಿದ ಜಗಪತಿ ಬಾಬು. ಮೊದಲಾರ್ಧದ ಒಂದಷ್ಟು ದೃಶ್ಯಗಳಲ್ಲಿ ಕಾಣಿಸಿಕೊಂಡು ಅವರು ಅಬ್ಬರಿಸಿದ್ದಾರೆ.
- ಹೊಸ ನಟಿ ಆರಾಧನಾ ರಾಮ್ಗೆ ಶಾನಭೋಗನ ಮಗಳ ಪಾತ್ರ. ಮಚ್ಚು ಹಿಡಿದು ದರ್ಶನ್ಗೆ ಆವಾಜ್ ಹಾಕುವ ದೃಶ್ಯದ ಬಳಿಕ ‘ಪಸಂದಾಗವ್ನೆ..’ ಹಾಡಿನಲ್ಲಿ ಹೆಜ್ಜೆ ಹಾಕಿ ರಂಜಿಸಿದ ಆರಾಧನಾ.
- ಸಿನಿಮಾ ಆರಂಭ ಆಗಿ ಮುಕ್ಕಾಲು ಗಂಟೆ ಕಳೆದರೂ ಯಾವುದೇ ಫೈಟ್ ಇಲ್ಲ. ಹೊಡಿಬಡಿ ದೃಶ್ಯಕ್ಕಾಗಿ ಕಾತರದಿಂದ ಕಾಯಬೇಕು ಫ್ಯಾನ್ಸ್.
- ನಾಯಕ-ನಾಯಕಿ ನಡುವಿನ ಪ್ರೀತಿ-ಪ್ರೇಮದ ಜೊತೆ ಜಾತಿ ತಾರತಮ್ಯದ ಕಹಾನಿಯೂ ‘ಕಾಟೇರ’ ಸಿನಿಮಾದ ಫಸ್ಟ್ ಹಾಫ್ನಲ್ಲಿ ಹೈಲೈಟ್ ಆಗಿದೆ.
- ಒಂದೇ ಕೈಯಲ್ಲಿ ನೂರಾರು ಜನರನ್ನು ಹೊಡೆದು ಹಾಕುವ ಫೈಟ್ ಮೂಲಕ ಮಾಸ್ ಪ್ರೇಕ್ಷಕರಿಗೆ ದರ್ಶನ್ ಮಸ್ತ್ ಮನರಂಜನೆ ನೀಡಿದ್ದಾರೆ.
- ಕಥಾನಾಯಕನ ಸಹೋದರಿ ಪಾತ್ರದಲ್ಲಿ ಶ್ರುತಿ ಗಮನಾರ್ಹ ಅಭಿನಯ ನೀಡಿದ್ದಾರೆ. ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಅವಿನಾಶ್ ಮುಂತಾದವರು ಸಾಥ್ ನೀಡಿದ್ದಾರೆ.
- ಬಡ ರೈತರ ಹೋರಾಟದ ಕಥೆಯನ್ನು ತರುಣ್ ಸುಧೀರ್ ಮಾಸ್ ಆಗಿ ಚಿತ್ರಿಸಿದ್ದಾರೆ. ಮಧ್ಯಂತರದ ವೇಳೆಗೆ ಕಥೆಯ ರೋಚಕತೆ ಹೆಚ್ಚುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.