Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan: ಆರ್​ಸಿಬಿ ಮ್ಯಾಚ್​ಗೂ ಮುನ್ನ ದರ್ಶನ್​ ವಿಡಿಯೋ ವೈರಲ್​; ನೀವು ಇದನ್ನು ನೋಡಲೇಬೇಕು

ದರ್ಶನ್​ ಕ್ರಿಕೆಟ್​ ಪ್ರಿಯ. ಅವರು ಸಮಯ ಸಿಕ್ಕಾಗೆಲ್ಲ ಗೆಳೆಯರ ಜತೆ ಕ್ರಿಕೆಟ್​ ಆಡುತ್ತಾರೆ. ಇತ್ತೀಚೆಗೆ ಅವರು ಅಭಿಷೇಕ್​ ಅಂಬರೀಶ್​ ಜತೆ ಕ್ರಿಕೆಟ್​ ಆಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು.

Darshan: ಆರ್​ಸಿಬಿ ಮ್ಯಾಚ್​ಗೂ ಮುನ್ನ ದರ್ಶನ್​ ವಿಡಿಯೋ ವೈರಲ್​; ನೀವು ಇದನ್ನು ನೋಡಲೇಬೇಕು
ಆರ್​​ಸಿಬಿ ಟೀಂ-ದರ್ಶನ್​
Follow us
ರಾಜೇಶ್ ದುಗ್ಗುಮನೆ
|

Updated on:Apr 08, 2021 | 7:41 PM

ಶುಕ್ರವಾರ (ಏಪ್ರಿಲ್​ 8) ಐಪಿಎಲ್​ ಸೀಸನ್​ 14ರ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಚೆನ್ನೈನ ಚೆಪಾಕ್​ ಸ್ಟೇಡಿಯಂನಲ್ಲಿ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ಮುಖಾಮುಖಿ ಆಗಲಿವೆ. ಈ ಮ್ಯಾಚ್​ಗೂ ಮುನ್ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ದರ್ಶನ್​ ಕ್ರಿಕೆಟ್​ ಪ್ರಿಯ. ಅವರು ಸಮಯ ಸಿಕ್ಕಾಗೆಲ್ಲ ಗೆಳೆಯರ ಜತೆ ಕ್ರಿಕೆಟ್​ ಆಡುತ್ತಾರೆ. ಇತ್ತೀಚೆಗೆ ಅವರು ಅಭಿಷೇಕ್​ ಅಂಬರೀಶ್​ ಜತೆ ಕ್ರಿಕೆಟ್​ ಆಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಕ್ರಿಕೆಟ್​ಗೆ ಸಂಬಂಧಿಸಿದಂತೆ ಅವರ ಹಳೆಯ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅವರು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಐಪಿಎಲ್​ ಎಂದಾಕ್ಷಣ ತಲೆ ಎತ್ತೋದು ಬೆಟ್ಟಿಂಗ್​. ಅನೇಕರು ಬೆಟ್ಟಿಂಗ್​ ದಂಧೆಯಲ್ಲಿ ಸಿಲುಕಿ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ, ಮನೆ ಮಾರಾಟ ಮಾಡಿ ಬೀದಿಗೆ ಬಂದಿದ್ದಾರೆ. ಬೆಟ್ಟಿಂಗ್​ ಮಾಡದೆ, ನಿಜವಾದ ಕ್ರೀಡಾಭಿಮಾನಿಯಾಗಿ ಮ್ಯಾಚ್​ ನೋಡಬೇಕು ಎನ್ನುವುದು ದರ್ಶನ್​ ಆಶಯ. ಹೀಗಾಗಿ, ಬೆಟ್ಟಿಂಗ್​ಗೆ ಇಳಿಯಬೇಡಿ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಐಪಿಎಲ್​ ಸಮಯವಾದ್ದರಿಂದ ಈಗ ಈ ವಿಡಿಯೋ ಮತ್ತೆ ವೈರಲ್​ ಆಗಿದೆ.

ಐಪಿಎಲ್​ ಆರಂಭವಾದ ತಕ್ಷಣ ಐಪಿಎಲ್​ ಮ್ಯಾಚ್​ ನೋಡೋ ಬದಲು ಅನೇಕರು ಬೆಟ್ಟಿಂಗ್​ ಮಾಡುತ್ತಾ ಕೂತಿರುತ್ತಾರೆ. ಐಪಿಎಲ್​ ಮ್ಯಾಚ್​ನ ಕೇವಲ ಮ್ಯಾಚ್​ ರೀತಿಯಲ್ಲಿ ನೋಡಿ. ಮೈದಾನದಲ್ಲಿ ಆಟಗಾರರು ಕಷ್ಟಪಟ್ಟು ಆಡುತ್ತಿರುತ್ತಾರೆ. ಮ್ಯಾಚ್​ ಮೇಲೆ ಬೆಟ್ಟಿಂಗ್​ ಮಾಡಿ ನೀವು ನಿಮ್ಮ ಲೈಫ್​​ನ ಹಾಳು ಮಾಡಿಕೊಳ್ಳಬೇಡಿ ಎಂದು ದರ್ಶನ್​ ಹೇಳಿದ್ದಾರೆ.

ದರ್ಶನ್​ ಸದ್ಯ, ರಾಬರ್ಟ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ರಿಲೀಸ್​ ಆದ 20 ದಿನಕ್ಕೆ ರಾಬರ್ಟ್​ ಸಿನಿಮಾ ಬರೋಬ್ಬರಿ 100 ಕೋಟಿ ಗಳಿಕೆ ಮಾಡಿತ್ತು. ಈ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಹೀಗಾಗಿ, ದರ್ಶನ್​ ಮುಂದಿನ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಕೂಡ ಮೂಡಿದೆ.

ಇದನ್ನೂ ಓದಿ:100 ಕೋಟಿ ರೂ. ಬಾಚಿಕೊಂಡ ರಾಬರ್ಟ್​! ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಹೊಸ ದಾಖಲೆ 

Roberrt: ರಾಬರ್ಟ್​ ಎತ್ತಂಗಡಿ ಮಾಡಿಸಲು ಬಂದ ಪವನ್​ ಕಲ್ಯಾಣ್​ ಸಿನಿಮಾಗೆ ದರ್ಶನ್​ ಫ್ಯಾನ್ಸ್​ ಕೊಟ್ರು ಸಖತ್​ ಡಿಚ್ಚಿ!

Published On - 7:41 pm, Thu, 8 April 21

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್