Roberrt: ರಾಬರ್ಟ್​ ಎತ್ತಂಗಡಿ ಮಾಡಿಸಲು ಬಂದ ಪವನ್​ ಕಲ್ಯಾಣ್​ ಸಿನಿಮಾಗೆ ದರ್ಶನ್​ ಫ್ಯಾನ್ಸ್​ ಕೊಟ್ರು ಸಖತ್​ ಡಿಚ್ಚಿ!

Pawan Kalyan Vakeel Saab: ಸಂತೋಷ್​ ಚಿತ್ರಮಂದಿರದಲ್ಲಿ ರಾಬರ್ಟ್​ ಬದಲಿಗೆ ಪವನ್​ ಕಲ್ಯಾಣ್​ ನಟನೆಯ ವಕೀಲ್​ ಸಾಬ್​ ಸಿನಿಮಾವನ್ನು ಪ್ರದರ್ಶಿಸಲು ಪ್ಲ್ಯಾನ್​ ಸಿದ್ಧವಾಗಿತ್ತು. ಆದರೆ ಅದಕ್ಕೆ ದರ್ಶನ್​ ಅಭಿಮಾನಿಗಳು ಅವಕಾಶ ನೀಡಿಲ್ಲ.

Roberrt: ರಾಬರ್ಟ್​ ಎತ್ತಂಗಡಿ ಮಾಡಿಸಲು ಬಂದ ಪವನ್​ ಕಲ್ಯಾಣ್​ ಸಿನಿಮಾಗೆ ದರ್ಶನ್​ ಫ್ಯಾನ್ಸ್​ ಕೊಟ್ರು ಸಖತ್​ ಡಿಚ್ಚಿ!
ದರ್ಶನ್​ - ಪವನ್​ ಕಲ್ಯಾಣ್​
Follow us
| Updated By: Digi Tech Desk

Updated on: Apr 06, 2021 | 3:08 PM

ಲಾಕ್​ಡೌನ್​ ನಂತರದ ಕಡು ಕಷ್ಟದ ದಿನಗಳಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದ ರಾಬರ್ಟ್​ ಸಿನಿಮಾ, ಈಗಲೂ ಹಲವು ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. 100 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಒಲವಿದೆ. ಆದರೆ ಟಾಲಿವುಡ್​ನ ಸ್ಟಾರ್​ ನಟ ಪವನ್​ ಕಲ್ಯಾಣ್​ ಅಭಿನಯದ ಹೊಸ ಸಿನಿಮಾದಿಂದಾಗಿ ಬೆಂಗಳೂರಿನಲ್ಲಿ ರಾಬರ್ಟ್​ ಚಿತ್ರಕ್ಕೆ ತೊಂದರೆ ಎದುರಾಗುವ ಸಾಧ್ಯತೆ ಇತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ‘ಚಾಲೆಂಜಿಂಗ್​ ಸ್ಟಾರ್​’ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಗಾಂಧಿನಗರದಲ್ಲಿರುವ ಸಂತೋಷ್​ ಚಿತ್ರಮಂದಿರದಲ್ಲಿ ರಾಬರ್ಟ್​ ಯಶಸ್ವಿ ಪ್ರದರ್ಶನ ಕಾಣುತ್ತಿತ್ತು. ಏ.11ರಂದು ಬಿಡುಗಡೆಯಾಗ ಈ ಸಿನಿಮಾವನ್ನು ಈಗ ಸಂತೋಷ್​ ಥಿಯೇಟರ್​ನಿಂದ ಎತ್ತಂಗಡಿ ಮಾಡಿಸುವ ಪ್ರಯತ್ನ ನಡೆಯಿತು. ಅಂದರೆ, ಈ ಚಿತ್ರಮಂದಿರದಲ್ಲಿ ರಾಬರ್ಟ್​ ಬದಲಿಗೆ ಪವನ್​ ಕಲ್ಯಾಣ್​ ನಟನೆಯ ವಕೀಲ್​ ಸಾಬ್​ ಸಿನಿಮಾವನ್ನು ಪ್ರದರ್ಶಿಸಲು ಪ್ಲ್ಯಾನ್​ ಸಿದ್ಧವಾಗಿತ್ತು. ಆದರೆ ಅದಕ್ಕೆ ದರ್ಶನ್​ ಅಭಿಮಾನಿಗಳು ಅವಕಾಶ ನೀಡಿಲ್ಲ.

ವಕೀಲ್​ ಸಾಬ್​ ಸಿನಿಮಾ ಏ.9ರಂದು ಬಿಡುಗಡೆ ಆಗುತ್ತಿದೆ. ಆ ಚಿತ್ರವನ್ನು ಕರ್ನಾಟಕದಲ್ಲಿ ಕೆಆರ್​ಜಿ ಸಂಸ್ಥೆ ವಿತರಿಸುತ್ತಿದೆ. ರಾಬರ್ಟ್​ ಪ್ರದರ್ಶನ ಆಗುತ್ತಿರುವ ಸಂತೋಷ್​ ಚಿತ್ರಮಂದಿರದಲ್ಲಿ ಏ,9ರಿಂದ ವಕೀಲ್​ ಸಾಬ್​ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಡಿ ಬಾಸ್​ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಕೆಆರ್​ಜಿ ಸಂಸ್ಥೆಯ ಕಾರ್ತಿಕ್​ ಗೌಡ ಅವರು ತೀರ್ಮಾನ ಬದಲಾಯಿಸಿದ್ದಾರೆ.

ಸಂತೋಷ್​ ಚಿತ್ರಮಂದಿರದಲ್ಲಿ ರಾಬರ್ಟ್​ ಪ್ರದರ್ಶನವನ್ನೇ ಮುಂದುವರಿಸುವುದಾಗಿ ಕಾರ್ತಿಕ್​ ಗೌಡ ಸ್ಪಷ್ಟಪಡಿಸಿದ್ದಾರೆ. ಸಂತೋಷ್​ ಚಿತ್ರಮಂದಿರದ ಬದಲಿಗೆ ಗಾಂಧಿನಗರದ ಭೂಮಿಕಾ ಥಿಯೇಟರ್​ನಲ್ಲಿ ವಕೀಲ್​ ಸಾಬ್​ ಸಿನಿಮಾ ಪ್ರದರ್ಶಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಈ ವಿಚಾರವನ್ನು ಇಟ್ಟುಕೊಂಡು ಯಾವುದೇ ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬವನ್ನು ಟಾರ್ಗೆಟ್​ ಮಾಡುವುದು ಸರಿಯಲ್ಲ ಎಂದು ಕಾರ್ತಿಕ್​ ಗೌಡ ಟ್ವೀಟ್​ ಮಾಡಿದ್ದಾರೆ.

ಇನ್ನು, ರಾಬರ್ಟ್​ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇನ್ನೂ ಒಂದಷ್ಟು ದಿನಗಳ ಕಾಲ ಸಂತೋಷ್​ ಚಿತ್ರಮಂದಿರದಲ್ಲೇ ರಾಬರ್ಟ್​ ಪ್ರದರ್ಶನ ಕಾಣಲಿದೆ. ದರ್ಶನ್​ ಅವರ ಅಭಿಮಾನಿಗಳು ಸಹಕರಿಸಬೇಕು’ ಎಂದು ಉಮಾಪತಿ ಟ್ವೀಟ್​ ಮಾಡಿದ್ದಾರೆ. ರಾಬರ್ಟ್​ ತೆರೆಕಂಡು 28 ದಿನ ಪೂರೈಸಿದೆ. ನಟ ದರ್ಶನ್​, ನಾಯಕಿ ಆಶಾ ಭಟ್​, ನಿರ್ದೇಶಕ ತರುಣ್​ ಸುಧೀರ್​ ಅವರಿಗೆ ಈ ಚಿತ್ರದಿಂದ ಭರ್ಜರಿ ಗೆಲುವು ಸಿಕ್ಕಿದೆ.

ಇದನ್ನೂ ಓದಿ: 100 ಕೋಟಿ ರೂ. ಬಾಚಿಕೊಂಡ ರಾಬರ್ಟ್​! ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಹೊಸ ದಾಖಲೆ

ಹೋಳಿ ಹಬ್ಬಕ್ಕೆ ಅಭಿಮಾನಿಗಳಿಗೆ ರಾಬರ್ಟ್​ ಕಡೆಯಿಂದ ಸಿಕ್ತು ಕಲರ್​ಫುಲ್​ ಗಿಫ್ಟ್​!

(Roberrt vs Vakeel Saab: Darshan fans urge KRG to continue Roberrt in Santhosh Theater)

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!