‘ಕಾಟೇರ’ ಸಿನಿಮಾದ ಹಲವು ಗುಟ್ಟುಗಳ ಬಿಚ್ಚಿಟ್ಟ ದರ್ಶನ್

Darshan: ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ದರ್ಶನ್, ತಮ್ಮ ಸಿನಿಮಾದ ಕೆಲವು ಗುಟ್ಟುಗಳನ್ನು ಬಿಟ್ಟುಕೊಟ್ಟರು.

‘ಕಾಟೇರ’ ಸಿನಿಮಾದ ಹಲವು ಗುಟ್ಟುಗಳ ಬಿಚ್ಚಿಟ್ಟ ದರ್ಶನ್
ದರ್ಶನ್
Follow us
|

Updated on:Dec 14, 2023 | 9:29 PM

ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿ ಇಂದು (ಡಿಸೆಂಬರ್ 14) ರಂದು ನಡೆಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ದರ್ಶನ್, ಸಿನಿಮಾದ ಬಗ್ಗೆ ಹಲವು ಗುಟ್ಟುಗಳನ್ನು ಬಿಟ್ಟುಕೊಟ್ಟರು. ಸಿನಿಮಾದಲ್ಲಿನ ತಮ್ಮ ಪಾತ್ರ, ಸಿನಿಮಾದಲ್ಲಿರುವ ಫೈಟ್​, ಹಾಡು, ಶ್ರುತಿ, ಕುಮಾರ್ ಗೋವಿಂದ್ ಅವರ ಪಾತ್ರಗಳು, ಸಿನಿಮಾದ ಥೀಮ್ ಇನ್ನೂ ಹಲವು ವಿಷಗಳ ಬಗ್ಗೆ ದರ್ಶನ್ ಮಾತನಾಡಿದರು.

‘‘ಎಲ್ಲರೂ ತಮ್ಮ ಸಿನಿಮಾ ವಿಶೇಷ ಎನ್ನುತ್ತಾರೆ. ಆದರೆ ನಮ್ಮ ‘ಕಾಟೇರ’ ಸಿನಿಮಾ ನಿಜವಾಗಿಯೂ ಭಿನ್ನ. ಕಮರ್ಶಿಯಲ್ ಅಂಶಗಳಿಗಿಂತಲೂ ಕಂಟೆಂಟ್​ಗೆ ಹೆಚ್ಚು ಆದ್ಯತೆ ನೀಡಿದ್ದೇವೆ, ದರ್ಶನ್ ಸಿನಿಮಾ ಎಂದರೆ ಓಪನಿಂಗ್ ಸಾಂಗ್ ಅಥವಾ ಫೈಟ್​ನಲ್ಲಿ ಎಂಟ್ರಿ ತಗೋತಾನೆ ಅಂದುಕೊಂಡಿರುತ್ತಾರೆ. ಆದರೆ ಈ ಸಿನಿಮಾದಲ್ಲಿ ಮೊದಲ ಹಾಡು ಬರುವುದು 20 ನಿಮಿಷ ಆದಮೇಲೆ, ಮೊದಲ ಫೈಟ್ ನೋಡಲು ಬರೋಬ್ಬರಿ 40 ನಿಮಿಷ ಕಾಯಬೇಕು. ಈ ಹಿಂದಿನ ನನ್ನ ಕಮರ್ಶಿಯಲ್ ಸಿನಿಮಾಗಳ ಮಾದರಿಯಲ್ಲಿ ಈ ಸಿನಿಮಾ ಮಾಡಿಲ್ಲ ಅನ್ನುವುದಕ್ಕೆ ಇದೇ ಉದಾಹರಣೆ’’ ಎಂದರು ದರ್ಶನ್.

ಸಿನಿಮಾದ ಫೈಟ್​ಗಳಲ್ಲಿಯೂ ಭಿನ್ನತೆ ಇರುವ ಬಗ್ಗೆ ಒಗಟಿನ ರೀತಿಯಲ್ಲಿಯೇ ಮಾತನಾಡಿದ ದರ್ಶನ್, ‘‘ರಾಮ್-ಲಕ್ಷ್ಮಣ್ ಅವರು ಈ ಸಿನಿಮಾಕ್ಕೆ ಫೈಟ್ ಕೊರಿಯಾಗ್ರಫಿ ಮಾಡಿದ್ದಾರೆ. ಸಿನಿಮಾದಲ್ಲಿ ನಾವು ಇಟ್ಟಿರುವುದು ಮೂರೇ ಫೈಟ್ ಸೀನ್. ಮೊದಲ ಫೈಟ್​ನಲ್ಲಿ ಎರಡೂ ಕೈ ಇರುತ್ತೆ, ಎರಡನೇ ಫೈಟ್​ನಲ್ಲಿ ಒಂದು ಕೈ ಇರುತ್ತೆ, ಮೂರನೇ ಫೈಟ್​ನಲ್ಲಿ ಎರಡೂ ಕೈ ಇರೊಲ್ಲ. ಯೋಚನೆ ಮಾಡಿ ಅವನು ಹೇಗೆ ಫೈಟ್ ಮಾಡಿರಬಹುದೆಂದು’’ ಎಂದು ತಲೆಗೆ ಹುಳ ಬಿಟ್ಟರು.

ಇದನ್ನೂ ಓದಿ:ಯಶ್, ದರ್ಶನ್ ಕೆಸಿಸಿ ಆಡುತ್ತಿಲ್ಲವೇಕೆ: ಸುದೀಪ್ ಕೊಟ್ಟರು ಸೂಕ್ತ ಉತ್ತರ

‘‘ಭಿನ್ನವಾದ ಕತೆಗಳನ್ನು ನನಗೆ ಒಪ್ಪಿಸುವುದು ಬಹಳ ಕಷ್ಟ, ಆದರೆ ತರುಣ್ ನನ್ನನ್ನು ಒಪ್ಪಿಸಿದ. ಮಾತ್ರವಲ್ಲ ರಾಕ್​ಲೈನ್ ಅವರನ್ನೂ ಸಹ ಒಪ್ಪಿಸಿದ. ನನಗೆ ಒಂದೇ ಸಿಟಿಂಗ್​ನಲ್ಲಿ ಎರಡು ಗಂಟೆಯಲ್ಲಿ ಕತೆ ಹೇಳಿ ಓಕೆ ಮಾಡಿಸಿದ. ಸಿನಿಮಾ ಮಾಡುವಾಗಲೂ ಅಷ್ಟೆ ಜಾಗೃತೆಯಾಗಿ, ಶಿಸ್ತಾಗಿ ಸಿನಿಮಾ ಮಾಡಿದ. ರಾಕ್​ಲೈನ್ ಅವರು ಸಹ ಇಂಥಹಾ ಭಿನ್ನ ಸಬ್ಜೆಕ್ಟ್ ಅನ್ನು ಒಪ್ಪಿ ಅವರು ಮಾಡಿರುವ ಧೈರ್ಯಕ್ಕೆ ಮೆಚ್ಚುಗೆ ಸಲ್ಲಲೇ ಬೇಕು. ಇದು ನನ್ನ ಹಾಗೂ ಅವರ ಎರಡನೇ ಸಿನಿಮಾ. ಈ ಸಿನಿಮಾದ ರಷಸ್ ನೋಡಿ, ನನ್ನನ್ನು ಬಾಚಿ ತಬ್ಬಿಕೊಂಡರು’’ ಎಂದರು ದರ್ಶನ್.

‘‘ಸಿನಿಮಾದ ಚಿತ್ರೀಕರಣ ಮುಗಿಯುವುದು ತುಸು ತಡವಾಯ್ತು, ಅದಕ್ಕೆ ಕಲಾವಿದರ ಡೇಟ್ಸ್ ಇನ್ನಿತರೆ ಕಾರಣವಲ್ಲ ಬದಲಿಗೆ ಎರಡು ಹಳ್ಳಿಗಳ ಸೆಟ್ ನಿರ್ಮಾಣ ಮಾಡಬೇಕಿತ್ತು, ಒಂದು ಹಳ್ಳಿಯ ಸೆಟ್ ಅನ್ನೇ ಬದಲಾಯಿಸಿ ಚಿತ್ರೀಕರಣ ಮಾಡಿ ಎಂದು ಹೇಳಿದೆ ಆದರೆ ರಾಕ್​ಲೈನ್ ಒಪ್ಪಲಿಲ್ಲ, ಬದಲಿಗೆ ಸಮಯ ತೆಗೆದುಕೊಂಡು ಎರಡು ಹಳ್ಳಿಗಳ ಸೆಟ್ ನಿರ್ಮಿಸಿದರು. ಸೆಟ್ ನಿರ್ಮಾಣವಾಗುವವರೆಗೆ ನಾನು ಮನೆಯಲ್ಲಿ ಖಾಲಿ ಕೂರಬೇಕಾಯ್ತು, ಆಗ ಬೇಸರವಾಗಿತ್ತು, ಆದರೆ ಸೆಟ್​ಗೆ ಬಂದು ನಿರ್ಮಾಣ ಮಾಡಿರುವ ಸೆಟ್ ನೋಡಿದಾಗ ನಿಜಕ್ಕೂ ಖುಷಿಯಾಯ್ತು’’ ಎಂದರು.

ಸಿನಿಮಾದಲ್ಲಿ ನಟಿಸಿರುವ ಶ್ರುತಿ, ಕುಮಾರ್ ಗೋವಿಂದ್, ಅವಿನಾಶ್, ನಾಯಕಿ ರಾಧನಾ ಎಲ್ಲರ ಪ್ರತಿಭೆ, ಸಿನಿಮಾ ಪ್ರೀತಿಯನ್ನು ಕೊಂಡಾಡಿದ ನಟ ದರ್ಶನ್, ಸಿನಿಮಾಕ್ಕೆ ಕೆಲಸ ಮಾಡಿರುವ ತಂತ್ರಜ್ಞರ ಹೆಸರುಗಳನ್ನು ಹೇಳಿ ಧನ್ಯವಾದಗಳನ್ನು ತಿಳಿಸಿದರು. ಒಟ್ಟಾರೆಯಾಗಿ ‘ಕಾಟೇರ’ ಸಿನಿಮಾ ಒಂದು ‘ಟೀಂ ಎಫರ್ಟ್’ ಸಿನಿಮಾವನ್ನು ಡಿಸೆಂಬರ್ 29ರಂದು ಬಿಡುಗಡೆ ಮಾಡುತ್ತಿದ್ದೇವೆ, ಸಿನಿಮಾದ ಟ್ರೈಲರ್ ಅನ್ನು ಇದೇ ತಿಂಗಳು 16ರಂದು ಹುಬ್ಬಳ್ಳಿಯಲ್ಲಿ ತೆರೆಗೆ ತರಲಿದ್ದೇವೆ’’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:28 pm, Thu, 14 December 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ