Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್​ ತೋರಿಸಿದ ಧನಂಜಯ್​

Ratnan Prapancha Trailer: ‘ಇದು ಸ್ಯಾಂಪಲ್​ ಅಷ್ಟೇ, ಇನ್ನೂ ಏನೇನೋ ಇದೆ. ಈ ಬೊಂಬಾಟಾಗಿರೋ ಪ್ರಪಂಚನ ನೀವು ನೋಡಬೇಕು’ ಎಂದು ಹೇಳುವ ಮೂಲಕ ಧನಂಜಯ್​ ಸಿನಿಮಾದಲ್ಲಿ ಮನರಂಜನೆ ಸ್ವಲ್ಪ ಹೆಚ್ಚೇ ಇರಲಿದೆ ಎನ್ನುವ ಸೂಚನೆ ನೀಡಿದ್ದಾರೆ.

Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್​ ತೋರಿಸಿದ ಧನಂಜಯ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Aug 20, 2021 | 3:02 PM

‘ಟಗರು’ ಸಿನಿಮಾ ನೋಡಿದ ನಂತರದಲ್ಲಿ ಧನಂಜಯ್​ ಎಂದಾಗ ನೆನಪಿಗೆ ಬರೋದು ಡಾಲಿಯ ಕ್ರೂರ ಮುಖ. ಈ ಸಿನಿಮಾ ತೆರೆಗೆ ಬಂದು ಹಲವು ವರ್ಷ ಕಳೆದರೂ ಡಾಲಿ ಕ್ಯಾರೆಕ್ಟರ್​ ಇನ್ನೂ ಜೀವಂತವಾಗಿದೆ. ಆ ಪಾತ್ರವನ್ನೂ ಇನ್ನೂ ಅನೇಕರು ಇಷ್ಟಪಡುವವರಿದ್ದಾರೆ. ಧನಂಜಯ್​ ಅವರನ್ನು ಮತ್ತೆ ಹಾಗೆಯೇ ನೋಡಬೇಕು ಎಂದು ಅನೇಕರ ಬಯಕೆ. ಆದರೆ, ಧನಂಜಯ್ ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾಗಿಲ್ಲ. ಅವರು​ ಓರ್ವ ಕಲಾವಿದನಾಗಿ ಜೀವಿಸುತ್ತಿದ್ದಾರೆ. ಈ ಕಾರಣಕ್ಕೆ ಭಿನ್ನ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರು ರತ್ನಾಕರನಾಗಿ ವೀಕ್ಷಕರ ಮುಂದೆ ಬರೋಕೆ ರೆಡಿ ಆಗಿದ್ದಾರೆ. ಇದು ಹೊಸ ಪ್ರಪಂಚ. ಇಂದು ರಿಲೀಸ್​ ಆದ ಟ್ರೇಲರ್​ ‘ರತ್ನನ್​ ಪ್ರಪಂಚದ’ ಒಂದು ಸ್ಯಾಂಪಲ್​.

ರತ್ನಾಕರ (ಧನಂಜಯ್​) ಪಕ್ಕಾ ಮಧ್ಯಮ ವರ್ಗದ ವ್ಯಕ್ತಿ. ಆತನ ತಾಯಿ ಸರೋಜಾ (ಉಮಾಶ್ರೀ) ಸ್ವಲ್ಪ ರಫ್​ ಆ್ಯಂಡ್​ ಟಫ್​. ಅವರು ಬಳಕೆ ಮಾಡುವ ಶಬ್ದ ಕೇಳಿದರೆ ಸಾಮಾನ್ಯರು ಕಿವಿ ಮುಚ್ಚಿಕೊಳ್ಳೋದೆ. ರತ್ನಾಕರನಿಗೆ ಮದುವೆ ಮಾಡಬೇಕು ಎನ್ನುವ ಪ್ರಯತ್ನ ಕೂಡ ನಡೆಯುತ್ತಿರುತ್ತದೆ. ಈ ವೇಳೆ ಆತನ ಬಾಳಲ್ಲಿ ಒಂದು ಹುಡುಗಿ (ರೆಬಾ ಜಾನ್​) ಬರುತ್ತಾಳೆ. ನಂತರ ಸಿನಿಮಾ ಹೊಸ ತಿರುವು ಪಡೆದುಕೊಳ್ಳುತ್ತದೆ ಎಂದು ಟ್ರೇಲರ್​ನಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತದೆ.

ಟ್ರೇಲರ್​ನಲ್ಲಿ ನಗುವಿಗೆ ಬರವಿಲ್ಲ. ಹೀಗಾಗಿ, ಸಿನಿಮಾದಲ್ಲೂ ಇದೇ ಮುಂದುವರಿಯಬಹುದು ಎನ್ನುವ ನಿರೀಕ್ಷೆ ವೀಕ್ಷಕರದ್ದು. ‘ಇದು ಸ್ಯಾಂಪಲ್​ ಅಷ್ಟೇ, ಇನ್ನೂ ಏನೇನೋ ಇದೆ. ಈ ಬೊಂಬಾಟಾಗಿರೋ ಪ್ರಪಂಚನ ನೀವು ನೋಡಬೇಕು’ ಎಂದು ಹೇಳುವ ಮೂಲಕ ಧನಂಜಯ್​ ಸಿನಿಮಾದಲ್ಲಿ ಮನರಂಜನೆ ಸ್ವಲ್ಪ ಹೆಚ್ಚೇ ಇರಲಿದೆ ಎನ್ನುವ ಸೂಚನೆ ನೀಡಿದ್ದಾರೆ.

ಈ ಸಿನಿಮಾದಲ್ಲಿ ತಾರಾಗಣ ಸ್ವಲ್ಪ ದೊಡ್ಡದಾಗಿಯೇ ಇದೆ. ರೆಬಾ ಜಾನ್, ಅನು ಪ್ರಭಾಕರ್​, ಹಿರಿಯ ನಟಿ ಶ್ರುತಿ, ರವಿ ಶಂಕರ್ ಗೌಡ​, ಅಚ್ಯುತ್​ ಕುಮಾರ್​ ಮೊದಲಾದವರು ನಟಿಸಿದ್ದಾರೆ. ರೋಹಿತ್​ ಪದಕಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಇದೆ. ಕೆಆರ್​ಜಿ ಸ್ಟುಡಿಯೋಸ್​ ಅಡಿಯಲ್ಲಿ ಕಾರ್ತಿಕ್​ ಮತ್ತು ಯೋಗಿ ರಾಜ್​ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಖ್ಯಾತ ನಿರ್ಮಾಪಕ ವಿಜಯ್​ ಕಿರಗಂದೂರು ಸಿನಿಮಾವನ್ನು ಅರ್ಪಿಸುತ್ತಿದ್ದಾರೆ.

ಇದನ್ನೂ ಓದಿ: ಡಾಲಿ ಧನಂಜಯ್​ ಹೊಸ ಗರ್ಲ್​ಫ್ರೆಂಡ್​ ಪಾಯಲ್​ ರಜಪೂತ್​

ದಳಪತಿ ವಿಜಯ್​ ಮತ್ತು ಮಹೇಶ್​ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್​

Published On - 2:56 pm, Fri, 20 August 21

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು