AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dr Rajkumar Birth Anniversary: ಡಾ.ರಾಜ್ ಸಂಭಾವನೆ 5 ರಿಂದ 10 ಸಾವಿರಕ್ಕೇರಲು ಎಷ್ಟು ಸಿನಿಮಾ ಮಾಡಬೇಕಾಯಿತು?

Dr Rajkumar Remuneration: ಆಗಿನ ಕಾಲದಲ್ಲಿ ಡಾ.ರಾಜ್ ತಮ್ಮ ಸಂಬಳ ಹೆಚ್ಚಾಗಲು ಎಷ್ಟು ದೀರ್ಘ ಕಾಲ ಕಾಯುತ್ತಿದ್ದರು ಎನ್ನುವುದು ಎಲ್ಲರಿಗೂ ಅಚ್ಚರಿ ತರುವಂಥದ್ದು. ಈ ಬಗ್ಗೆ ಟಿವಿ9 ಜತೆ ಮಾತನಾಡುತ್ತಾ, ಹಿರಿಯ ನಟ ಬೆಂಗಳೂರು ನಾಗೇಶ್ ಮಾಹಿತಿ ಹಂಚಿಕೊಂಡಿದ್ದರು.

Dr Rajkumar Birth Anniversary: ಡಾ.ರಾಜ್ ಸಂಭಾವನೆ 5 ರಿಂದ 10 ಸಾವಿರಕ್ಕೇರಲು ಎಷ್ಟು ಸಿನಿಮಾ ಮಾಡಬೇಕಾಯಿತು?
‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಡಾ.ರಾಜ್​ಕುಮಾರ್ (Credits: Raghavendra Rajkumar/ Twitter)
TV9 Web
| Updated By: shivaprasad.hs|

Updated on: Apr 24, 2022 | 7:00 AM

Share

ಇಂದು (ಏ.24) ಡಾ.ರಾಜ್​ಕುಮಾರ್ (Dr Rajkumar) ಅವರ 94ನೇ ಜನ್ಮದಿನ. ಹಲವು ಸಮಾಜಮುಖಿ ಕಾರ್ಯಗಳ ಮುಖಾಂತರ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ಇಂದಿನ ತಲೆಮಾರಿನ ನಟರಿಗೆ ಡಾ.ರಾಜ್ ಯಾವತ್ತಿಗೂ ಮಾದರಿ. ರಾಜ್​ ಅವರಿಗಿದ್ದ ವೃತ್ತಿ ಜೀವನದ ಬಗೆಗಿನ ಬದ್ಧತೆ, ಸಿನಿಮಾಗಳ ಮೇಲಿದ್ದ ಪ್ರೀತಿಗೆ ಸರಿಸಾಟಿಯಿಲ್ಲ. ಡಾ.ರಾಜ್ ಚಿತ್ರರಂಗದಲ್ಲಿ ಏಕಾಏಕಿ ಸ್ಟಾರ್ ಪಟ್ಟ ಅಲಂಕರಿಸಿದವರು ಎನ್ನುವದಕ್ಕಿಂತ, ಒಂದೊಂದೇ ಮೆಟ್ಟಿಲನ್ನು ಏರುತ್ತಾ, ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾದರು ಎನ್ನಬಹುದು. ಸ್ಟಾರ್ ಆಗಿದ್ದ ಅವರ ಸಂಭಾವನೆ ಎಷ್ಟಿತ್ತು? ಪ್ರತಿ ಚಿತ್ರ ಗೆದ್ದಾಗಲೂ ಸಂಭಾವನೆ ಏರಿಸಿಕೊಳ್ಳುತ್ತಿದ್ದರೇ? ಮೊದಲಾದ ಕುತೂಹಲಕರ ಪ್ರಶ್ನೆಗಳು ಈಗಿನ ಕಾಲದವರಿಗೆ ಬರುವುದು ಸಹಜ. ಕಾರಣ, ಈಗ ನಾಯಕ ನಟರು ಒಂದು ಚಿತ್ರ ಗೆದ್ದರೆ ಮುಂದಿನ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಡುತ್ತಾರೆ. ಈಗಿನ ಮಾರುಕಟ್ಟೆಯ ವ್ಯಾಪ್ತಿ ಬೇರೆ ಇದೆ ಎನ್ನುವುದನ್ನು ಒಪ್ಪಿಕೊಳ್ಳಬಹುದಾದರೂ, ಆಗ ಡಾ.ರಾಜ್ ತಮ್ಮ ಸಂಬಳ ಹೆಚ್ಚಾಗಲು ಎಷ್ಟು ದೀರ್ಘ ಕಾಲ ಕಾಯುತ್ತಿದ್ದರು ಎನ್ನುವುದು ಎಲ್ಲರಿಗೂ ಅಚ್ಚರಿ ತರುವಂಥದ್ದು. ಈ ಬಗ್ಗೆ ಟಿವಿ9 ಜತೆ ಮಾತನಾಡುತ್ತಾ, ಹಿರಿಯ ನಟ ಬೆಂಗಳೂರು ನಾಗೇಶ್ ಮಾಹಿತಿ ಹಂಚಿಕೊಂಡಿದ್ದರು.

ಗಂಧದ ಗುಡಿ’, ‘ಮಯೂರ’ ಮೊದಲಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಬೆಂಗಳೂರು ನಾಗೇಶ್​ ಕೆಲಸ ಮಾಡಿದ್ದರು. ‘ಗುರು ಶಿಷ್ಯರು’, ‘ಬಂಗಾರದ ಮನುಷ್ಯ’, ‘ಶರಪಂಜರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದರು. ಡಾ.ರಾಜ್​ರನ್ನು ಹತ್ತಿರದಿಂದ ಬಲ್ಲ ಅವರು, ತಮ್ಮ ಮಾತಿನಲ್ಲಿ ಆಗಿನ ಕಾಲವನ್ನು, ಡಾ.ರಾಜ್ ಕುರಿತ ಕುತೂಹಲಕರ ವಿಚಾರಗಳನ್ನು ಮೆಲುಕು ಹಾಕಿದ್ದರು.

ಡಾ.ರಾಜ್ ಸಂಭಾವನೆಯ ಬಗ್ಗೆ ಮಾತನಾಡಿದ್ದ ನಾಗೇಶ್, ಆಗ ರಾಜ್ ಅವರು ಒಂದು ಚಿತ್ರಕ್ಕೆ 5,000 ರೂ ಪಡೆಯುತ್ತಿದ್ದರು. 10,000ಕ್ಕೆ ಸಂಭಾವನೆ ಏರಿಕೆಯಾಗಲು ಅವರು 10 ಚಿತ್ರಗಳನ್ನು ಮಾಡಬೇಕಾಯಿತು. ಈಗ ಒಬ್ಬ ಹೀರೋ ಒಂದು ಚಿತ್ರದ ನಂತರ ಕೋಟಿ ರೂ ಪಡೆಯುತ್ತಾರೆ. ಆಗ ಹಾಗಿರಲಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದರು.

ಆಗ ಡಾ.ರಾಜ್ 5,000 ಪಡೆಯುತ್ತಿದ್ದುದು ಸಂಪೂರ್ಣ ಚಿತ್ರಕ್ಕೆ. ಈಗಿನ ಕಲಾವಿದರು ಪ್ರತಿ ದಿನ ಇಷ್ಟು ಮೊತ್ತ ಪಡೆಯುತ್ತಾರೆ. ಆಗ ಸುಮಾರು 9 ತಿಂಗಳು ಚಿತ್ರದ ಕೆಲಸಗಳು ನಡೆದರೆ ಅಷ್ಟಕ್ಕೂ ಸೇರಿಸಿ ಡಾ.ರಾಜ್ 5,000 ಪಡೆಯುತ್ತಿದ್ದರು. ಆದರೆ ಡಾ.ರಾಜ್ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ಕಾರಣ, ಅವರಿಗೆ ಅಷ್ಟು ಬೇಡಿಕೆ ಇತ್ತು ಎಂದು ಬೆಂಗಳೂರು ನಾಗೇಶ್ ವಿವರಿಸಿದ್ದರು.

ಇದನ್ನೂ ಓದಿ: Ashwini Puneeth Rajkumar: ಡಾ.ರಾಜ್​ ಜನ್ಮದಿನ ಹಿನ್ನೆಲೆ; ಬಡಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ ಅಶ್ವಿನಿ ಪುನೀತ್

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ