AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾವು ಬಂದು ನಿಂತ್ರೆ ಸಮಸ್ಯೆ ಪರಿಹಾರ ಆಗುತ್ತಾ? ನಿಮ್ಮ ತರಹ ನಾವು ಮನುಷ್ಯರೇ’: ಶಿವರಾಜ್​ಕುಮಾರ್

ಚಿತ್ರರಂಗ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಚಿತ್ರರಂಗದ ಹಲವು ಕಲಾವಿದರು ಈ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಾರೆ. ಉಪೇಂದ್ರ, ಶಿವರಾಜ್​ಕುಮಾರ್, ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ಉಮಾಶ್ರೀ ಮೊದಲಾದವರು ಭಾಗಿ ಆಗಿದರು. ಈ ವೇಳೆ ಶಿವಣ್ಣ ಮಾತನಾಡಿದ್ದಾರೆ.

‘ನಾವು ಬಂದು ನಿಂತ್ರೆ ಸಮಸ್ಯೆ ಪರಿಹಾರ ಆಗುತ್ತಾ? ನಿಮ್ಮ ತರಹ ನಾವು ಮನುಷ್ಯರೇ’: ಶಿವರಾಜ್​ಕುಮಾರ್
ಪ್ರತಿಭಟನೆಯಲ್ಲಿ ವಸಿಷ್ಠ ಸಿಂಹ, ದರ್ಶನ್, ಶಿವಣ್ಣ, ಧ್ರುವ
ರಾಜೇಶ್ ದುಗ್ಗುಮನೆ
|

Updated on: Sep 29, 2023 | 1:08 PM

Share

ಕರ್ನಾಟಕ ಬಂದ್​ಗೆ ಸ್ಯಾಂಡಲ್​ವುಡ್ (Sandalwood)​ ಬೆಂಬಲ ನೀಡಿದೆ. ಇಂದು (ಸೆಪ್ಟೆಂಬರ್ 29) ಸಿನಿಮಾ ಕೆಲಸಗಳನ್ನು ಬಂದ್ ಮಾಡಲಾಗಿದೆ. ಸಿನಿಮಾ ಪ್ರದರ್ಶನ, ಶೂಟಿಂಗ್ ನಡೆಯುತ್ತಿಲ್ಲ. ಬೆಂಗಳೂರಿನ ಕರ್ನಾಟಕದ ಫಿಲ್ಮ್​ ಚೇಂಬರ್ ಸಮೀಪ ಇರುವ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಚಿತ್ರರಂಗ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಚಿತ್ರರಂಗದ ಹಲವು ಕಲಾವಿದರು ಈ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಾರೆ. ಉಪೇಂದ್ರ, ಶಿವರಾಜ್​ಕುಮಾರ್, ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ಉಮಾಶ್ರೀ (Umashree) ಮೊದಲಾದವರು ಭಾಗಿ ಆಗಿದರು. ಈ ವೇಳೆ ಶಿವಣ್ಣ ಮಾತನಾಡಿದ್ದಾರೆ.

‘ಕಾವೇರಿ ಸಮಸ್ಯೆ ಮೊದಲಿನಿಂದಲೂ ಇದೆ. ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕಾವೇರಿ ಎಷ್ಟು ನೋವು ಅನುಭವಿಸಿರಬಹುದು. ತಾಯಿ ಪವರ್ ಅಂಥದ್ದು. ಎಲ್ಲಾ ನೋವನ್ನು ತೆಗೆದುಕೊಳ್ಳುತ್ತಾಳೆ. ಕಲಾವಿದರು ಬರಲ್ಲ ಎನ್ನುವ ಆರೋಪ ಮಾಡುತ್ತೀರಿ. ಕಲಾವಿದರು ಬಂದು ಏನು ಮಾಡಬೇಕು ಹೇಳಿ. ನಾವು ಬಂದು ನಿಂತ್ರೆ ಸಮಸ್ಯೆ ಪರಿಹಾರ ಆಗುತ್ತದಾ? ನಿಮ್ಮ ತರಹ ನಾವು ಮನುಷ್ಯರೇ. ಸ್ಟಾರ್​ ಗಿರಿ ಕೊಟ್ಟಿದ್ದು ನೀವೆ. ಅದನ್ನು ಕಿತ್ಕೋಳಿ, ನಮಗೆ ಬೇಡ. ನಾವು ಬಂದು ಮಾತನಾಡಿದ್ರೆ ಸಮಸ್ಯೆ ಪರಿಹಾರ ಆಗಲ್ಲ’ ಎಂದಿದ್ದಾರೆ ಶಿವಣ್ಣ.

‘ಸರ್ಕಾರಗಳು ಕುಂತು ಮಾತನಾಡಬೇಕು. ಒಂದು ಹೊಂದಾಣಿಕೆ​ಗೆ ಬರಬೇಕು. ರೈತರು ಎಲ್ಲ ಕಡೆಗಳಲ್ಲೂ ಒಂದೇ. ಎಲ್ಲರೂ ಕುಂತು ಮಾತನಾಡಿದ್ರೆ ಪರಿಹಾರ ಸಿಗುತ್ತದೆ. ದಾರಿ ಮೇಲೆ ಹೋಗುವ ಬಸ್​ಗೆ ಕಲ್ಲು ಹೊಡೆದರೆ ಅದು ಪ್ರತಿಭಟನೆ ಆಗುತ್ತದೆಯೇ? ಪರಭಾಷೆಯ ಹೀರೋನ ಸುದ್ದಿಗೋಷ್ಠಿ ನಿಲ್ಲಿಸಲಾಯಿತು. ಅದು ತಪ್ಪಲ್ವಾ? ಸುಮ್ಮನೆ ಕೂತು ಹೋರಾಟ ಮಾಡಿದ್ರೆ ಪರಿಹಾರ ಸಿಗಲ್ಲ. ಪರಿಸ್ಥಿತಿ ನೋಡಿ ಅಡ್ವಾಂಟೇಜ್ ತೆಗೆದುಕೊಳ್ಳಬಾರದು. ಇದು ಹೋರಾಟಕ್ಕೆ ಮರ್ಯಾದೆ ಅಲ್ಲ. ಬೇರೆಯವರಿಗೆ ನೋವು ಕೊಡುವ ಕೆಲಸ ಮಾಡಬಹುದು’ ಎಂದು ಕೋರಿದ್ದಾರೆ ಶಿವರಾಜ್​ಕುಮಾರ್.

ಇದನ್ನೂ ಓದಿ: ಅಭಿಮಾನಿಗಳ ಪ್ರಶ್ನೆಗೆ ತಮ್ಮದೇ ಸ್ಟೈಲ್​ನಲ್ಲಿ ಉತ್ತರಿಸಿದ ಶಿವರಾಜ್​ಕುಮಾರ್

‘ಸಿದ್ದಾರ್ಥ್ ಅವರೇ ನಿಮಗೆ ನಾನು ಕ್ಷಮೆ ಕೇಳುತ್ತೇನೆ. ಎಲ್ಲೇ ಹೋದರೂ ಕರ್ನಾಟಕದವರಿಗೆ ದೊಡ್ಡ ಮರ್ಯಾದೆ ಇದೆ. ಅದನ್ನು ಕಾಪಾಡಿಕೊಂಡು ಹೋಗಬೇಕಿದೆ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ನಾನು ಯಾವಾಗಲೂ ಹೃದಯದಿಂದ ಮಾತಾಡ್ತೀನಿ. ಎಲ್ಲರ ಜೊತೆಗೂ ಚೆನ್ನಾಗಿರಬೇಕು. ಅವರು ಬಂದಿಲ್ಲ, ಇವರು ಬಂದಿಲ್ಲ ಎನ್ನಬೇಡಿ’ ಎಂದಿದ್ದಾರೆ ಶಿವರಾಜ್​ಕುಮಾರ್.

ಧ್ರುವ ಕೂಡ ಮಾತನಾಡಿದ್ದು, ‘ಕನ್ನಡ ಚಿತ್ರರಂಗ ಒಂದಾಗಿಯೇ ಇದೆ. ಕೆಟ್ಟ ಸಂಚಿಂದ ಒಡೆಯಬೇಡಿ. ನಾವು ಯಾವಾಗಲೂ ರೈತರ ಪರ. ಎರಡೂ ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ. ರೈತರಿಗೆ ಒಳ್ಳೆಯದಾಗಲಿ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?