AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜರ್ನಿ ಆಫ್ ಬೆಳ್ಳಿ’: ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿ ಆಗಮನ

‘ಜರ್ನಿ ಆಫ್ ಬೆಳ್ಳಿ’ ಚಿತ್ರದಲ್ಲಿ ಓರ್ವ ಪುಟ್ಟ ಹುಡುಗಿಯ ಕಥೆ ಇರಲಿದೆ. ಆಕೆಯ ದೃಷ್ಟಿಕೋನದಲ್ಲಿ ಸೈನಿಕರ ಫ್ಯಾಮಿಲಿಯ ವಿಷಯ ತೆರೆದುಕೊಳ್ಳಲಿದೆ. ಈ ಚಿತ್ರದಲ್ಲಿ ಸಮನ್ವಿ ಪಾಟೀಲ್ ಮುಖ್ಯ ಪಾತ್ರ ಮಾಡುತ್ತಿದ್ದಾಳೆ. ಈ ಸಿನಿಮಾಗೆ ಗೌರಿ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಮಹೇಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

‘ಜರ್ನಿ ಆಫ್ ಬೆಳ್ಳಿ’: ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿ ಆಗಮನ
ನಿರ್ದೇಶಕಿ ಗೌರಿ ಶ್ರೀನಿವಾಸ್
ಮದನ್​ ಕುಮಾರ್​
|

Updated on: Jan 21, 2024 | 3:03 PM

Share

ಚಿತ್ರರಂಗದ ತಾಂತ್ರಿಕ ವಿಭಾಗ ಹೆಚ್ಚು ಪುರುಷ ಪ್ರಧಾನ ಆಗಿದೆ. ಅದರಲ್ಲೂ ನಿರ್ದೇಶಕರಿಗೆ ಹೋಲಿಸಿದರೆ ನಿರ್ದೇಶಕಿಯರ ಸಂಖ್ಯೆ ಕಡಿಮೆ. ಚಂದನವದಲ್ಲಿ (Sandalwood) ಕೆಲವು ಲೇಡಿ ಡೈರೆಕ್ಟರ್​ಗಳು ಸಕ್ರಿಯರಾಗಿದ್ದಾರೆ. ಈಗ ಅವರ ಸಾಲಿಗೆ ಮತ್ತೋರ್ವ ನಿರ್ದೇಶಕಿ ಸೇರ್ಪಡೆ ಆಗುತ್ತಿದ್ದಾರೆ. ಯಾರವರು? ಗೌರಿ ಶ್ರೀನಿವಾಸ್. ಮಕ್ಕಳ ಸಿನಿಮಾದ ಮೂಲಕ ಅವರು ಚಂದನವನಕ್ಕೆ ಎಂಟ್ರಿ ನೀಡುತ್ತಿದ್ದಾರೆ ಎಂಬುದು ವಿಶೇಷ. ‘ಜರ್ನಿ ಆಫ್ ಬೆಳ್ಳಿ’ (Journey of Belli) ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಸಿದ್ಧವಾಗುತ್ತಿದೆ. ಇದರಲ್ಲಿ ಮಕ್ಕಳ ಕಥೆ ಇರಲಿದೆ. ಈ ಚಿತ್ರಕ್ಕೆ ಗೌರಿ ಶ್ರೀನಿವಾಸ್ (Gowri Srinivasa) ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಅಂತಿಮ ಘಟ್ಟದಲ್ಲಿವೆ.

ಕಮರ್ಷಿಯಲ್​, ಹಾರರ್​, ಮಹಿಳಾ ಪ್ರಧಾನ, ಕಾಮಿಡಿ.. ಹೀಗೆ ನಾನಾ ಪ್ರಕಾರದ ಸಿನಿಮಾಗಳು ಪ್ರತಿ ವರ್ಷ ತಯಾರಾಗುತ್ತವೆ. ಆದರೆ ಮಕ್ಕಳ ಸಿನಿಮಾಗಳ ಸಂಖ್ಯೆ ಕಡಿಮೆ. ಮಕ್ಕಳಿಗಾಗಿ ತಯಾರಾಗುವ ಸಿನಿಮಾಗಳ ಸಂಖ್ಯೆ ವಿರಳ. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ‘ಜರ್ನಿ ಆಫ್ ಬೆಳ್ಳಿ’ ಸಿನಿಮಾ ಮೂಡಿಬರುತ್ತಿದೆ. ಒಂದಷ್ಟು ಹೊಸತನಗಳೊಂದಿಗೆ ಗೌರಿ ಶ್ರೀನಿವಾಸ್​ ಅವರು ಈ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಇದು ಮಕ್ಕಳ ಸಿನಿಮಾ ಆಗಿದ್ದರೂ ಇದರಲ್ಲಿನ ಕಥೆ ಎಲ್ಲರಿಗೂ ಅನ್ವಯ ಆಗುವಂತಿದೆ.

ಇದನ್ನೂ ಓದಿ: ಮುಹೂರ್ತದ ಜೊತೆ ‘ಶಭ್ಬಾಷ್’ ಫಸ್ಟ್​ ಲುಕ್​ ಅನಾವರಣ; ‘ಹೊಡಿರೋ ಸೆಲ್ಯೂಟ್’

‘ಜರ್ನಿ ಆಫ್ ಬೆಳ್ಳಿ’ ಚಿತ್ರದಲ್ಲಿ ಓರ್ವ ಪುಟ್ಟ ಹುಡುಗಿಯ ಕಥೆ ಇರಲಿದೆ. ಆಕೆಯ ದೃಷ್ಟಿಕೋನದಲ್ಲಿ ಸೈನಿಕರ ಫ್ಯಾಮಿಲಿಯ ವಿಷಯ ತೆರೆದುಕೊಳ್ಳಲಿದೆ. ಈ ಚಿತ್ರದಲ್ಲಿ ಸಮನ್ವಿ ಪಾಟೀಲ್ ಮುಖ್ಯ ಪಾತ್ರ ಮಾಡುತ್ತಿದ್ದಾಳೆ. ಮಕ್ಕಳಲ್ಲಿ ಹೊಸ ರೀತಿಯ ಆಲೋಚನೆ ತುಂಬಬಲ್ಲ ಕಥೆ ಈ ಚಿತ್ರದಲ್ಲಿ ಇರಲಿದೆ. ಜೊತೆಗೆ, ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟ ಆಗಲಿದೆ ಎಂಬ ನಂಬಿಕೆಯಲ್ಲಿ ‘ಜರ್ನಿ ಆಫ್ ಬೆಳ್ಳಿ’ ತಂಡ ಕಾರ್ಯನಿರತವಾಗಿದೆ. ತುಳು ಚಿತ್ರರಂಗದಲ್ಲಿ ಈಗಾಗಲೇ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಮಹೇಂದ್ರ ಕುಮಾರ್ ಅವರು ‘ಜರ್ನಿ ಆಫ್ ಬೆಳ್ಳಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಆ ಮೂಲಕ ಅವರು ಕೂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ನಿರ್ದೇಶಕಿ ಗೌರಿ ಶ್ರೀನಿವಾಸ್​ ಬಗ್ಗೆ:

‘ಜೀ ಕನ್ನಡ’ ಚಾನೆಲ್​ನಲ್ಲಿ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿದ್ದ ಗೌರಿ ಶ್ರೀನಿವಾಸ್ ಅವರು ನಂತರ ಬೇರೆ ಬೇರೆ ವಿಭಾಗಗಳಲ್ಲಿ ಅನುಭವ ಪಡೆದರು. ತಾವೇ ‘ಲಿಚಿ ಫಿಲ್ಮ್ಸ್​’ ಕಂಪನಿ ಆರಂಭಿಸಿದರು. ಬಳಿಕ ಕೆಲವು ಸಾಕ್ಷ್ಯಚಿತ್ರಗಳು ಹಾಗೂ ಕಾಪೋರೇಟ್ ಜಾಹೀರಾತುಗಳನ್ನು ತಯಾರಿಸಿದರು. ಅವರ ನಿರ್ಮಾಣದಲ್ಲಿ ಮೂಡಿಬಂದ ಮಧ್ಯಪ್ರದೇಶದ ಕೈಮಗ್ಗ ಉದ್ಯಮದ ಕುರಿತಾದ ‘the woven motifs of chanderi’ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ಈ ಎಲ್ಲ ಅನುಭವಗಳನ್ನು ಇಟ್ಟುಕೊಂಡು ಅವರು ‘ಜರ್ನಿ ಆಫ್ ಬೆಳ್ಳಿ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ