AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Kiran Raj: ಸಖತ್​ ಆ್ಯಕ್ಷನ್​ನಲ್ಲಿ ಮಿಂಚುತ್ತಿದ್ದಾರೆ ಕಿರಣ್​ ರಾಜ್; ಇದಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ

Bahaddhur Gandu Teaser: ಪ್ರಸಿದ್ಧ್​ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಯಶಾ ಶಿವಕುಮಾರ್​ ಚಿತ್ರದ ನಾಯಕಿ. ಕಿಟ್ಟಿ ಕೌಶಿಕ್​ ಛಾಯಾಗ್ರಹಣ ಈ ಸಿನಿಮಾಗಿದೆ. ಪ್ರಸಿದ್ಧ್​ ಸಿನಿಮಾಸ್​ ಹಾಗೂ ರಮೇಶ್​ ರೆಡ್ಡಿ ಬಹದ್ದೂರ್​ ಗಂಡು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

Happy Birthday Kiran Raj: ಸಖತ್​ ಆ್ಯಕ್ಷನ್​ನಲ್ಲಿ ಮಿಂಚುತ್ತಿದ್ದಾರೆ ಕಿರಣ್​ ರಾಜ್; ಇದಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ
ರಾಜೇಶ್ ದುಗ್ಗುಮನೆ
|

Updated on:Jul 05, 2021 | 3:06 PM

Share

ಇಂದು (ಜುಲೈ 5) ನಟ ಕಿರಣ್​ ರಾಜ್​ ಜನ್ಮದಿನ. ಈ ವಿಶೇಷ ದಿನದ ಅಂಗವಾಗಿ ಅವರ ನಟನೆಯ ‘ಬಹದ್ದೂರ್​ ಗಂಡು’ ಚಿತ್ರದ ಟೀಸರ್​ ರಿಲೀಸ್​ ಆಗಿದೆ. ಈ ಟೀಸರ್​​ನಲ್ಲಿ ಕಿರಣ್​ ಆ್ಯಕ್ಷನ್​ ದೃಶ್ಯಗಳ ಮೂಲಕ ಮಿಂಚಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ.

ಕಿರಣ್​ ರಾಜ್​ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ನಟಿಸುತ್ತಿರುವ ‘ಕನ್ನಡತಿ’ ಧಾರಾವಾಹಿಯಲ್ಲಿ ಅವರ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. ಈಗ ‘ಬಹದ್ದೂರ್​ ಗಂಡು’ ಚಿತ್ರದಲ್ಲಿ ಅವರು ಸ್ಟೈಲ್​, ಲುಕ್​ ಸಂಪೂರ್ಣ ಭಿನ್ನವಾಗಿದೆ. ಅವರ ಮೈಕಟ್ಟು ನೋಡಿ ಅನೇಕರು ಫಿದಾ ಆಗಿದ್ದಾರೆ. ಇನ್ನು, ಅವರ ಆ್ಯಕ್ಷನ್​ ದೃಶ್ಯಗಳನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಸಿನಿಮಾದಲ್ಲಿ ಕ್ಲೈಮ್ಯಾಕ್ಸ್​ನಲ್ಲಿ ಬರೋ ಫೈಟ್​ಗೋಸ್ಕರ್​ ಕಿರಣ್​ ರಾಜ್​ ನಾಲ್ಕು ತಿಂಗಳಕಾಲ ಸತತವಾಗಿ ವರ್ಕೌಟ್​ ಮಾಡಿದ್ದಾರೆ. ‘ರಾತ್ರಿ 12ರಿಂದ ಮುಂಜಾನೆ 4:30ವರೆಗೆ ನಾನು ನಿರಂತರವಾಗಿ 4 ತಿಂಗಳು ವರ್ಕೌಟ್​ ಮಾಡಿದ್ದೇನೆ. ಅದು ಸಿನಿಮಾದಲ್ಲಿ ಬರುವ ಕ್ಲೈಮ್ಯಾಕ್ಸ್​ ದೃಶ್ಯಕ್ಕೋಸ್ಕರ. ಬೆಳಗ್ಗೆ ಧಾರಾವಾಹಿ ಶೂಟಿಂಗ್​, ಚ್ಯಾರಿಟಿ ಕೆಲಸಗಳು ಇರುತ್ತಿದ್ದವು. ಹೀಗಾಗಿ, ರಾತ್ರಿ ವರ್ಕೌಟ್​ ಮಾಡುತ್ತಿದ್ದೆ’ ಎಂದು ತಮ್ಮ ಶ್ರಮದ ಬಗ್ಗೆ ಕಿರಣ್​ ರಾಜ್​ ಹೇಳಿಕೊಂಡಿದ್ದಾರೆ.

‘ಈ ಚಿತ್ರದಲ್ಲಿ ನನಗೆ ಎರಡು ಶೇಡ್​ ಇದೆ. ‘ಬಹದ್ದೂರ್​ ಗಂಡು’ ಎಂದು ಸಿನಿಮಾ ಟೈಟಲ್ ಇಟ್ಟಿರೋದ್ರಿಂದ ಒಂದು ದೊಡ್ಡ ಜವಾಬ್ದಾರಿ ನಮಗಿದೆ. ಸಿನಿಮಾದಲ್ಲಿ ಒಂದು ಸಂಸ್ಕೃತಿ ಬಗ್ಗೆ ನಾವು ಹೇಳುತ್ತಿದ್ದೇವೆ’ ಎನ್ನುತ್ತಾರೆ ಕಿರಣ್​ ರಾಜ್​.

ಪ್ರಸಿದ್ಧ್​ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಯಶಾ ಶಿವಕುಮಾರ್​ ಚಿತ್ರದ ನಾಯಕಿ. ಕಿಟ್ಟಿ ಕೌಶಿಕ್​ ಛಾಯಾಗ್ರಹಣ ಈ ಸಿನಿಮಾಗಿದೆ. ಪ್ರಸಿದ್ಧ್​ ಸಿನಿಮಾಸ್​ ಹಾಗೂ ರಮೇಶ್​ ರೆಡ್ಡಿ ಬಹದ್ದೂರ್​ ಗಂಡು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇನ್ನು, ಕಿರಣ್​ ರಾಜ್​ ಜನ್ಮದಿನದ ಅಂಗವಾಗಿ ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಯ ಮಳೆ ಸುರಿಸಿದ್ದಾರೆ. ಕನ್ನಡತಿ ಚಿತ್ರದ ಮುಖ್ಯಪಾತ್ರಧಾರಿ ರಂಜನಿ ರಾಘವನ್​ ಅವರು ಕಿರಣ್​ ರಾಜ್​ ಅವರಿಗೆ ಬರ್ತ್​ಡೇ ವಿಷ್​ ಮಾಡಿದ್ದಾರೆ. ಕಿರಣ್​ ಕುಟುಂಬದವರ ಜತೆ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ.

ಕಿರಣ್​ ರಾಜ್​ ಕೂಡ ಕೊವಿಡ್​ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ತೊಂದರೆ ಅನುಭವಿಸುತ್ತಿರುವವರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ‘ಕಿರಣ್​ ರಾಜ್​ ಫೌಂಡೇಷನ್’ಮೂಲಕ ಸಾಕಷ್ಟು ಜನರ ನೋವಿಗೆ ಸ್ಪಂದಿಸಿದ್ದಾರೆ. ಕಿರಣ್​ ರಾಜ್​ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಕ್ಕಾಗಿ ಅವರು ಮುಂಬೈಗೆ ತೆರಳಿದ್ದರು. ಕಿರಣ್​ ರಾಜ್​ ಫೌಂಡೇಷನ್​ ಕನಸು ಆರಂಭವಾಗಿದ್ದು ಅಲ್ಲಿಯೇ. ಕಿರಣ್​ ರಾಜ್​ ತಮ್ಮ ಒಟ್ಟೂ ಆದಾಯದಲ್ಲಿ ಶೇ.40ರಷ್ಟು ಗಳಿಕೆಯನ್ನು ಕಷ್ಟದಲ್ಲಿರುವವರ ಸಹಾಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಅಮ್ಮನ ಮಾತು ಕೇಳಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ‘ಕನ್ನಡತಿ’ ಹೀರೋ ಕಿರಣ್​ ರಾಜ್​!

ಶಾಲಾ-ಕಾಲೇಜು ಪ್ರವೇಶ​ ಶುಲ್ಕ ಇಳಿಸಿ ಎಂಬ ಕೂಗಿಗೆ ಧ್ವನಿಯಾದ ಕಿರಣ್​ ರಾಜ್​; ಸಿಎಂ ಯಡಿಯೂರಪ್ಪಗೆ ಪತ್ರ

Published On - 11:28 am, Mon, 5 July 21

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?