AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣಾವ್ರ ಜೊತೆ ಡಾ. ಭುಜಂಗ ಶೆಟ್ಟಿಗೆ ಒಡನಾಟ ಬೆಳೆದಿದ್ದು ಹೇಗೆ? ಇಲ್ಲಿದೆ ಹಳೆಯ ದಿನಗಳ ಕಥೆ

Dr. Bhujang Shetty: ಅನೇಕರನ್ನು ನೇತ್ರದಾನಕ್ಕೆ ಪ್ರೇರೇಪಿಸಿದ ಖ್ಯಾತಿ ಭುಜಂಗ ಶೆಟ್ಟಿಗೆ ಸಲ್ಲಿಕೆ ಆಗುತ್ತದೆ. ಡಾ. ರಾಜ್​ಕುಮಾರ್ ನೇತ್ರದಾನ ಕೇಂದ್ರವನ್ನು ಅವರು ಸ್ಥಾಪಿಸಿದ್ದರು. ರಾಜ್​ಕುಮಾರ್ ಜೊತೆ ಒಡನಾಟ ಬೆಳೆದಿದ್ದು ಹೇಗೆ ಎನ್ನುವ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದರು.

ಅಣ್ಣಾವ್ರ ಜೊತೆ ಡಾ. ಭುಜಂಗ ಶೆಟ್ಟಿಗೆ ಒಡನಾಟ ಬೆಳೆದಿದ್ದು ಹೇಗೆ? ಇಲ್ಲಿದೆ ಹಳೆಯ ದಿನಗಳ ಕಥೆ
ಡಾ.ಭುಜಂಗ ಶೆಟ್ಟಿ-ರಾಜ್​ಕುಮಾರ್
ರಾಜೇಶ್ ದುಗ್ಗುಮನೆ
|

Updated on: May 20, 2023 | 7:08 AM

Share

ನಾರಾಯಣ ನೇತ್ರಾಲಯ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ. ಕೆ ಭುಜಂಗ ಶೆಟ್ಟಿ ಅವರನ್ನು ಕಳೆದುಕೊಂಡಿರುವುದು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ. ಶುಕ್ರವಾರ (ಮೇ 19) ಅವರು ನಿಧನ ಹೊಂದಿದರು. ಸಂಜೆ 6 ಗಂಟೆ ವೇಳೆಗೆ ಅವರಿಗೆ ತೀವ್ರ ಹೃದಯಾಘಾತವಾಯಿತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿ ಆಗಿಲ್ಲ. ಡಾ. ರಾಜ್​ಕುಮಾರ್ (Rajkumar) ಕುಟುಂಬದ ಜೊತೆ ಅವರಿಗೆ ಒಳ್ಳೆಯ ಒಡನಾಟ ಇತ್ತು. ಅನೇಕರನ್ನು ನೇತ್ರದಾನಕ್ಕೆ ಪ್ರೇರೇಪಿಸಿದ ಖ್ಯಾತಿ ಭುಜಂಗ ಶೆಟ್ಟಿಗೆ (Dr. Bhujang Shetty) ಸಲ್ಲಿಕೆ ಆಗುತ್ತದೆ. ಡಾ. ರಾಜ್​ಕುಮಾರ್ ನೇತ್ರದಾನ ಕೇಂದ್ರವನ್ನು ಅವರೇ ಸ್ಥಾಪಿಸಿದ್ದರು. ಪುನೀತ್ ನಿಧನ ಹೊಂದಿದಾಗ ಅವರ ಕಣ್ಣಿನಿಂದ ನಾಲ್ಕು ಜನಕ್ಕೆ ದೃಷ್ಟಿ ಕೊಡಿಸಿದ್ದರು. ರಾಜ್​ಕುಮಾರ್ ಜೊತೆ ಒಡನಾಟ ಬೆಳೆದಿದ್ದು ಹೇಗೆ ಎನ್ನುವ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದರು.

‘ನಾನು ಶಾಲೆಗೆ ಹೋಗುವ ದಿನಗಳಲ್ಲೇ ರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ​. ಅವರ ನಟನೆಯ ಹಲವಾರು ಚಿತ್ರಗಳನ್ನು ನೋಡಿದ್ದೆ. ಅವರನ್ನು ಯಾವತ್ತಾದರೂ ಭೇಟಿ ಆಗಬೇಕು ಅಂದುಕೊಂಡಿದ್ದೆ. ಆ ಆಸೆ ತುಂಬಾ ವರ್ಷಗಳ ಕಾಲ ಇಡೇರಲಿಲ್ಲ. ಕಣ್ಣಿನ ಸ್ಪೆಷಲಿಸ್ಟ್ ಆಗಿ ನಾನು ಶ್ರೀರಾಮ್​ಪುರದ ಆಸ್ಪತ್ರೆಗೆ ಸೇರಿದೆ. ಆಗ ಅವರು ಕಣ್ಣಿನ ಟೆಸ್ಟ್​​ಗೆ ಬಂದಿದ್ದರು. ಒಂದು ಗಂಟೆ ಮಾತನಾಡಿದೆ. ರಾಜಾಜಿನಗರದ ನಾರಾಯಣ ನೇತ್ರಾಲಯವನ್ನು ಸ್ಥಾಪಿಸಿದಾಗ ರಾಜ್​ಕುಮಾರ್ ಉದ್ಘಾಟನೆ ಮಾಡಬೇಕು ಎಂದುಕೊಂಡಿದ್ದೆ. ರಾಜ್​ಕುಮಾರ್ ಹಾಗೂ ಪಾರ್ವತಮ್ಮ ರಾಜ್​ಕುಮಾರ್ ಬಂದು 1993ರಲ್ಲಿ ಉದ್ಘಾಟನೆ ಮಾಡಿದ್ದರು. ತುಂಬು ಹೃದಯದಿಂದ ಆಶೀರ್ವಾದ ಮಾಡಿದರು’ ಎಂದು ಹಳೆ ಘಟನೆ ನೆನಪಿಸಿಕೊಂಡಿದ್ದರು ಡಾ. ಭುಜಂಗ ಶೆಟ್ಟಿ.

‘ರಾಜ್​ಕುಮಾರ್ ಅವರಲ್ಲಿ ನೋಡಿದ ವಿಷಯ ಎಂದರೆ ಅವರು ಹಣಕ್ಕೆ ಬೆಲೆ ಕೊಡುತ್ತಾ ಇರಲಿಲ್ಲ. ಗುಣಕ್ಕೆ ಬೆಲೆ ಕೊಡುತ್ತಾ ಇದ್ದರು. ಹೂವು, ಹಣ್ಣು, ಹಸಿರು ನೋಡಿದರೆ ಅವರಿಗೆ ಖುಷಿ ಆಗುತ್ತಿತ್ತು. ಹಳ್ಳಿ ಜನರಿಗೆ ಒಳ್ಳೆಯದಾಯ್ತು ಎಂದರೆ ಖುಷಿ ಪಡುತ್ತಿದ್ದರು. ಒಮ್ಮೆ ಬೋರ್​ವೆಲ್​ ಹಾಕಿಸಿದ್ವಿ ತುಂಬಾ ಚೆನ್ನಾಗಿ ನೀರು ಬಂದಿದೆ ಎಂದು ರಾಜ್​​ಕುಮಾರ್ ಖುಷಿಪಟ್ಟಿದ್ದರು’ ಎಂದು ಆರಂಭದ ದಿನಗಳಲ್ಲಿ ನೆನಪಿಸಿಕೊಂಡಿದ್ದರು ಭುಜಂಗ ಶೆಟ್ಟಿ.

‘ನನ್ನನ್ನು ತಿರುಪತಿಗೆ ಕರೆದುಕೊಂಡು ಹೋಗಿದ್ದರು. ಅಲ್ಲೊಂದು ಹುಂಡಿ ಇದೆ. ಪಾರ್ವತಮ್ಮ ಅವರು ರಾಜ್​ಕುಮಾರ್​ಗೆ ಹಣ ಕೊಟ್ಟರು. ನಾನು ಅವರ ಜೊತೆಗೇ ಇದ್ದೆ. ಅವರು ನನ್ನ ಕೈಯಿಂದ ಹುಂಡಿಗೆ ಹಣ ಹಾಕಿಸಿದರು. ಏನಣ್ಣ ಹೀಗೆ ಮಾಡಿದ್ರಿ ಎಂದೆ. ಅವನಿಗೆ ಕೊಡೋ ಶಕ್ತಿ ನನಗೆಲ್ಲಿದೆ. ಅವನ ಎದುರು ನಾವೆಲ್ಲ ಇರುವೆಗಳು ಎಂದಿದ್ದರು’ ಎಂದು ರಾಜ್​ಕುಮಾರ್ ಜೊತೆ ಕಳೆದ ಕ್ಷಣಗಳನ್ನು ಅವರು ನೆನಪಿಸಿಕೊಂಡಿದ್ದರು.

ಇದನ್ನೂ ಓದಿ: ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ

‘ರಾಜ್​​ಕುಮಾರ್ ತಂಗಿಯ ಕಣ್ಣಿಗೆ ಪೊರೆ ಬಂದಿತ್ತು. ನಾರಾಯಣ ನೇತ್ರಾಲಯ ಓಪನ್ ಆದಮೇಲೆ ಅಲ್ಲೇ ಬಂದು ತಂಗಿಗೆ ಆಪರೇಷನ್ ಮಾಡಿದ್ದರು. ಆಗ ನೇತ್ರದಾನದ ಬಗ್ಗೆ ಮಾತನಾಡಿದ್ದೆ. ಕಣ್ಣಿನ ದಾನದ ಮಹತ್ವದ ಬಗ್ಗೆ ಹೇಳಿದ್ದೆ. ಮಣ್ಣಾಗೋ ಬದಲು ನಾಲ್ಕು ಜನರ ದೃಷ್ಟಿಗೆ ಸಹಾಯ ಆಗುತ್ತದೆ ಎಂದೆ. ಆಗ ಅವರು ನನ್ನ ಕೈಯಿಂದ ಏನು ಆಗಬೇಕು ಎಂದು ಕೇಳಿದ್ದರು. ನಿಮ್ಮ ಹೆಸರನ್ನು ನೋಂದಣಿ ಮಾಡಿಸಿ ಎಂದು ಕೋರಿಕೊಂಡೆ. ಅವರು ಮಾಡಿಸಿದರು. ಹೀಗಾಗಿ 1994ರಲ್ಲಿ ಡಾ.ರಾಜ್​ಕುಮಾರ್ ನೇತ್ರದಾನ ಕೇಂದ್ರ ಆರಂಭಿಸಿದೆವು’ ಎಂದು ಭುಜಂಗ ಶೆಟ್ಟಿ ಮಾಹಿತಿ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ