ಯಶ್ ಬರ್ತ್​ಡೇ ಏಕೆ ಆಚರಿಸಿಕೊಳ್ಳಲಿಲ್ಲ; ಕೊನೆಗೂ ಮೌನ ಮುರಿದ ರಾಕಿಂಗ್ ಸ್ಟಾರ್

|

Updated on: Jan 09, 2024 | 7:09 AM

ಕೆಲ ಫ್ಯಾನ್ಸ್ ಯಶ್​ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದರು. ಈ ದಿನ ಅಭಿಮಾನಿಗಳ ಪಾಲಿಗೆ ಹಾಗೂ ಯಶ್ ಪಾಲಿಗೆ ಕರಾಳ ದಿನ ಆಯಿತು. ಮೂವರು ಯಶ್ ಫ್ಯಾನ್ಸ್ ಮೃತಪಟ್ಟರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ಯಶ್ ಅವರು ಬರ್ತ್​ಡೇ ಆಚರಿಸಿಕೊಳ್ಳದಿರಲು ಕಾರಣ ಏನು ಎಂಬ ಬಗ್ಗೆ ಮಾತನಾಡಿದ್ದಾರೆ.

ಯಶ್ ಬರ್ತ್​ಡೇ ಏಕೆ ಆಚರಿಸಿಕೊಳ್ಳಲಿಲ್ಲ; ಕೊನೆಗೂ ಮೌನ ಮುರಿದ ರಾಕಿಂಗ್ ಸ್ಟಾರ್
ಯಶ್
Follow us on

ಸೆಲೆಬ್ರಿಟಿಗಳ ಬರ್ತ್​ಡೇ ಬಂತು ಎಂದರೆ ಅಭಿಮಾನಿಗಳಿಗೆ ಹಬ್ಬ. ಅದರಲ್ಲಂತೂ ನೆಚ್ಚಿನ ನಟ/ನಟಿ ತಮ್ಮ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರೆ ಅಭಿಮಾನಿಗಳ ಖುಷಿ ದ್ವಿಗುಣವಾಗುತ್ತದೆ. ಜನವರಿ 8 ಯಶ್ (Yash) ಅವರ ಬರ್ತ್​ಡೇ. ಈ ವಿಶೇಷ ದಿನವನ್ನು ಯಶ್ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಇದಕ್ಕೆ ಪ್ರಮುಖ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಯಶ್ ಬರ್ತ್​ಡೇ ಬ್ಯಾನರ್ ಹಾಕಲು ಹೋದ ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಹನುಮಂತ ಹರಿಜನ, ಮುರಳಿ ನಡವಿನಮನಿ ಮತ್ತು ನವೀನ್ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋದ ಯಶ್ ಈ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ಟ್ವೀಟ್ ಮಾಡಿದ್ದ ಯಶ್ ಅವರು ‘ಸಿನಿಮಾ ಕೆಲಸಗಳು ಇವೆ. ಅನಿವಾರ್ಯವಾಗಿ ಪ್ರಯಾಣ ಮಾಡಬೇಕಿರುವುದರಿಂದ ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ’ ಎಂದು ಹೇಳಿದ್ದರು. ಆದರೂ ಕೆಲ ಫ್ಯಾನ್ಸ್ ಯಶ್​ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದರು. ಈ ದಿನ ಅಭಿಮಾನಿಗಳ ಪಾಲಿಗೆ ಹಾಗೂ ಯಶ್ ಪಾಲಿಗೆ ಕರಾಳ ದಿನ ಆಯಿತು. ಮೂವರು ಯಶ್ ಫ್ಯಾನ್ಸ್ ಮೃತಪಟ್ಟರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ಯಶ್ ಅವರು ಬರ್ತ್​ಡೇ ಆಚರಿಸಿಕೊಳ್ಳದಿರಲು ಕಾರಣ ಏನು ಎಂಬ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಅಷ್ಟು ಇಷ್ಟು ಅಂತ ಹೇಳಿಲ್ಲ’: ಯಶ್​ ಕೊಟ್ಟ ಭರವಸೆ ಬಗ್ಗೆ ಮೃತರ ಕುಟುಂಬದವರ ಮಾತು

‘ಎರಡು ವಾರದ ಹಿಂದೆ ಕೊವಿಡ್​ ಎಂದು ಶುರು ಮಾಡಿದರು. ನಮ್ಮ ಬರ್ತ್​ಡೇಯಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾನು ಈ ವರ್ಷ ಎಲ್ಲರ ಜೊತೆ ಹುಟ್ಟುಹಬ್ಬ ಆಚರಣೆ ಬೇಡ ಎಂದು ನಿರ್ಧರಿಸಿದ್ದೆ’ ಎಂದಿದ್ದಾರೆ ಯಶ್. ರಾಕಿಂಗ್ ಸ್ಟಾರ್ ಬರ್ತ್​ಡೇ ಆಚರಿಸಿಕೊಳ್ಳದೇ ಇರಲು ಒಂದು ಮುಖ್ಯ ಕಾರಣ ಇತ್ತು. ಆದರೆ, ಯಾರೂ ಊಹಿಸದ ಘಟನೆ ನಡೆದಿದ್ದರಿಂದ ಯಶ್ ಸಾಕಷ್ಟು ನೊಂದುಕೊಂಡಿದ್ದಾರೆ.

ಯಾವುದೇ ಸೆಲೆಬ್ರಿಟಿ ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಿಸಿಕೊಳ್ಳುವುದಿಲ್ಲ ಎಂದರೆ ಅಭಿಮಾನಿಗಳಿಗೆ ಬೇಸರ ಆಗುತ್ತದೆ. ಈ ಬಾರಿ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಾಗಲೂ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದರು. ಈಗ ನಡೆದಿರುವ ಅವಘಡದಿಂದ ಯಶ್ ಅವರಿಗೆ ಹಾಗೂ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ