AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಯ್ ರಾವ್ ‘ಯುದ್ಧಕಾಂಡ’ ಸೇರಿದ ಖ್ಯಾತ ಗಾಯಕ

Ajay Rao: ರವಿಚಂದ್ರನ್ ನಟನೆಯ ‘ಯುದ್ಧಕಾಂಡ’ ಸಿನಿಮಾ ಯಾರಿಗೆ ಗೊತ್ತಿಲ್ಲ. ‘ಸೋಲೆ ಇಲ್ಲ’, ‘ಕುಡಿಯೋದೆ ನನ್ ಬಿಸಿನೆಸ್ಸು’ ಇನ್ನಿತರೆ ಸೂಪರ್ ಹಿಟ್ ಹಾಡುಗಳನ್ನು ಒಳಗೊಂಡ ಸಿನಿಮಾ ಅದು. ಇದೀಗ ಅದೇ ಹೆಸರಿನ ಸಿನಿಮಾ ಮತ್ತೆ ಬರುತ್ತಿದೆ. ಈ ಸಿನಿಮಾದಲ್ಲಿ ಅಜಯ್ ರಾವ್ ನಾಯಕ. ಮೊದಲ ಸಿನಿಮಾದಂತೆ ಹಾಡುಗಳನ್ನು ಬಂಪರ್ ಹಿಟ್ ಮಾಡಿಸುವ ಪ್ರಯತ್ನದಲ್ಲಿದೆ ಚಿತ್ರತಂಡ. ಹಾಗಾಗಿ ವಿಶೇಷ ಗಾಯಕರೊಬ್ಬರನ್ನು ಕನ್ನಡಕ್ಕೆ ಕರೆತಂದಿದ್ದಾರೆ.

ಅಜಯ್ ರಾವ್ ‘ಯುದ್ಧಕಾಂಡ’ ಸೇರಿದ ಖ್ಯಾತ ಗಾಯಕ
Yudha Kanda
ಮಂಜುನಾಥ ಸಿ.
|

Updated on: Feb 15, 2025 | 9:53 AM

Share

ರವಿಚಂದ್ರನ್ ನಟನೆಯ ‘ಯುದ್ಧಕಾಂಡ’ ಸಿನಿಮಾ ಯಾರಿಗೆ ನೆನಪಿಲ್ಲ ಹೇಳಿ. ಆ ಸಿನಿಮಾದ ‘ಸೋಲೆ ಇಲ್ಲ’, ‘ಕುಡಿಯೋದೆ ನನ್ ಬಿಸಿನೆಸ್ಸು’ ಇನ್ನೂ ಕೆಲ ಹಾಡುಗಳು ಇಂದಿಗೂ ಜನಪ್ರಿಯ. ಅನ್ಯಾಯದ ವಿರುದ್ಧ ಹೋರಾಡುವ ವಕೀಲನ ಕತೆಯನ್ನು ಹೊಂದಿದ್ದ ಆ ಸಿನಿಮಾ, ತಾಯಿ ಸೆಂಟಿಮೆಂಟ್ ಅನ್ನೂ ಒಳಗೊಂಡಿತ್ತು. ಕೊಲೆಯೊಂದರ ಸುತ್ತ ನಡೆಯುವ ಕತೆ ಹೊಂದಿದ್ದ ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಮತ್ತೊಮ್ಮೆ ‘ಯುದ್ಧಕಾಂಡ’ ಸಿನಿಮಾ ಬರುತ್ತಿದೆ. ಈ ಬಾರಿಯೂ ಸಹ ವಕೀಲನ ಕತೆಯನ್ನೇ ಸಿನಿಮಾ ಒಳಗೊಂಡಿದೆ. ಸಿನಿಮಾದ ನಾಯಕ ಅಜಯ್ ರಾವ್.

ಅಜಯ್ ರಾವ್, ‘ಯುದ್ಧಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದು, ಇದೂ ಸಹ ಕೋರ್ಟ್ ಡ್ರಾಮಾ ಉಳ್ಳ ಕತೆಯಾಗಿದೆ. ಮೂಲ ‘ಯುದ್ಧಕಾಂಡ’ ಸಿನಿಮಾದಲ್ಲಿ ಇರುವಂತೆ ಈ ಸಿನಿಮಾದಲ್ಲಿಯೂ ಸಹ ಮದರ್ ಸೆಂಟಿಮೆಂಟ್ ಇದೆಯಂತೆ. ಆದರೆ ಅದರ ಜೊತೆಗೆ ಈ ಸಿನಿಮಾ ಹೆಣ್ಣುಮಕ್ಕಳ ರಕ್ಷಣೆ, ಅವರ ಹಕ್ಕುಗಳು, ಹೆಣ್ಣು ಮಕ್ಕಳನ್ನು ಸಮಾಜ ನೋಡುವ ಬಗೆಯ ಬಗ್ಗೆ ಚರ್ಚೆ ಮಾಡುತ್ತದೆಯಂತೆ. ಯುವತಿಯೊಬ್ಬಾಕೆಯ ಕೊಲೆ ಆ ನಂತರ ನಡೆಯುವ ಘಟನೆಗಳ ಕತೆಯನ್ನು ‘ಯುದ್ಧಕಾಂಡ’ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಕ್ಲಾಂತ’ ಟ್ರೈಲರ್ ಬಿಡುಗಡೆ ಮಾಡಿದ ಅಜಯ್ ರಾವ್, ಇದು ನಿಗೂಢ ಕತೆ

ಇನ್ನು ಇತ್ತೀಚೆಗಷ್ಟೆ ‘ಯುದ್ಧಕಾಂಡ’ ಸಿನಿಮಾ ತಂಡವನ್ನು ದಕ್ಷಿಣ ಭಾರತದ ಖ್ಯಾತ ಗಾಯಕರೊಬ್ಬರು ಸೇರಿಕೊಂಡರು. ಮೋಹನ್​ಲಾಲ್ ಪುತ್ರ ಪ್ರಣವ್ ಮೋಹನ್​ಲಾಲ್ ನಟನೆಯ ‘ಹೃದಯಂ’ ಸಿನಿಮಾದ ‘ದರ್ಶನಾ’ ಎಂಬ ಜನಪ್ರಿಯ ಹಾಡು ಹಾಡಿರುವ ಮಲಯಾಳಿ ಗಾಯಕ ಹೇಷಮ್ ಅದ್ಭುಲ್ ವಹಾಬ್ ‘ಯುದ್ಧಕಾಂಡ’ ಸಿನಿಮಾಕ್ಕೆ ಹಾಡೊಂದನ್ನು ಹಾಡಿದ್ದಾರೆ. ಈ ಹಾಡು, ಅಜಯ್ ರಾವ್ ಅವರ ಇಂಟ್ರೊಡಕ್ಷನ್ ಹಾಡಾಗಿರಲಿದೆ.

ಹೇಷಮ್ ಅದ್ಭುಲ್ ವಹಾಬ್ ಸ್ವತಃ ಸಂಗೀತ ನಿರ್ದೇಶಕರಾಗಿದ್ದು ಇದೀಗ ಅಜಯ್ ರಾವ್ ಅವರ ಸಿನಿಮಾಕ್ಕೆ ಧ್ವನಿ ನೀಡಿದ್ದಾರೆ. ಅಜಯ್ ರಾವ್ ಅವರ ‘ಯುದ್ಧಕಾಂಡ’ ಸಿನಿಮಾಕ್ಕೆ ಕೆಬಿ ಪ್ರವೀಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಕಟ್ಟಿಂಗ್ ಶಾಪ್’ ಸಿನಿಮಾ ನಿರ್ದೇಶಿಸಿದ್ದ ಪ್ರವೀಣ್ ಭಟ್ ಅವರು ‘ಯುದ್ಧಕಾಂಡ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಯುದ್ಧಕಾಂಡ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸಿನಿಮಾ ಏಪ್ರಿಲ್​ನಲ್ಲಿ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ
ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ
ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲೆ ಹಾರಿ ನೆಲಕ್ಕೆ ಬಿದ್ದ ಗಂಡ-ಹೆಂಡತಿ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲೆ ಹಾರಿ ನೆಲಕ್ಕೆ ಬಿದ್ದ ಗಂಡ-ಹೆಂಡತಿ
ಈ ಬಾರಿ ಅಸ್ಸಾಂನಲ್ಲಿ ಎನ್​ಡಿಎ ಹ್ಯಾಟ್ರಿಕ್​ಗೆ ಸಿದ್ಧವಾಗಿದೆ: ಮೋದಿ
ಈ ಬಾರಿ ಅಸ್ಸಾಂನಲ್ಲಿ ಎನ್​ಡಿಎ ಹ್ಯಾಟ್ರಿಕ್​ಗೆ ಸಿದ್ಧವಾಗಿದೆ: ಮೋದಿ