AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಮಲತಾ ಅಂಬರೀಶ್ ಅವರನ್ನು ಏನೆಂದು ಕರೆಯುತ್ತಾರೆ ನಟ ದರ್ಶನ್?

Darshan: ನಟ ದರ್ಶನ್, ಅಂಬರೀಶ್ ಮನೆಯ ಅತ್ಯಂತ ಆಪ್ತ ಸದಸ್ಯ. ಅಂದಹಾಗೆ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರನ್ನು ದರ್ಶನ್ ಏನೆಂದು ಕರೆಯುತ್ತಾರೆ ಗೊತ್ತೆ?

ಸುಮಲತಾ ಅಂಬರೀಶ್ ಅವರನ್ನು ಏನೆಂದು ಕರೆಯುತ್ತಾರೆ ನಟ ದರ್ಶನ್?
ದರ್ಶನ್-ಸುಮಲತಾ
ಮಂಜುನಾಥ ಸಿ.
|

Updated on: Dec 23, 2023 | 10:56 PM

Share

ಅಂಬರೀಶ್ (Ambareesh) ಕುಟುಂಬಕ್ಕೂ ನಟ ದರ್ಶನ್​ಗೂ ಹಲವು ವರ್ಷಗಳ ನಂಟು. ಅಂಬರೀಶ್ ಬದುಕಿದ್ದ ಸಮಯದಿಂದಲೂ ಆ ಕುಟುಂಬದ ಮಾನಸ ಪುತ್ರನಂತೆಯೇ ಇದ್ದರು ದರ್ಶನ್. ಸ್ವತಃ ಅಂಬರೀಶ್ ಸಹ ಹಲವು ಬಾರಿ ದರ್ಶನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು, ತಮ್ಮ ಪುತ್ರನಂತೆ ಎಂದು ಸಹ ಹೇಳಿದ್ದರು. ದರ್ಶನ್ ಸಹ ಹಾಗೆಯೇ ನಡೆದುಕೊಂಡಿದ್ದಾರೆ. ಅಂಬರೀಶ್ ಕಾಲವಾದ ಬಳಿಕ ಆ ಮನೆಯ ಸದಸ್ಯನಂತೆ ವರ್ತಿಸಿದ್ದಾರೆ. ಅಗತ್ಯ ಬಂದಾಗ ಸುಮಲತಾ ಅವರ ಮಗನಂತೆ ಎದೆಗೊಟ್ಟೆ ನಿಂತಿದ್ದಾರೆ. ಸುಮಲತಾ ಹಾಗೂ ಅಭಿಷೇಕ್ ಅಂಬರೀಶ್ ಸಹ ದರ್ಶನ್ ಅವರನ್ನು ತಮ್ಮ ಮನೆಯ ಸದಸ್ಯನೆಂದೇ ಪರಿಗಣಿಸಿದ್ದಾರೆ.

ಇಂದು (ಡಿಸೆಂಬರ್ 23) ಸುಮಲತಾರ ಲೋಕಸಭಾ ಕ್ಷೇತ್ರ ಮಂಡ್ಯದಲ್ಲಿ ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಹಾಡು ಲಾಂಚ್ ಮಾಡಲಾಗಿದೆ. ಇದಕ್ಕಾಗಿ ಅದ್ಧೂರಿ ಕಾರ್ಯಕ್ರಮವನ್ನು ಮಾಡಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಸದೆ ಸುಮಲತಾ ಭಾಗಿಯಾಗಿದ್ದಾರೆ. ಇಂದು (ಡಿಸೆಂಬರ್ 23) ರೈತ ದಿನವೂ ಆಗಿದ್ದು, ಈ ದಿನದ ವಿಶೇಷವಾಗಿ ‘ಕಾಟೇರ’ ಸಿನಿಮಾದಲ್ಲಿನ ರೈತರ ಬಗೆಗಿನ ಹಾಡನ್ನು ಸುಮಲತಾ ಅವರು ಬಿಡುಗಡೆ ಮಾಡಿದ್ದಾರೆ.

ಹಾಡು ಬಿಡುಗಡೆ ಮಾಡಿ ಮಾತನಾಡಿರುವ ಸಂಸದೆ ಸುಮಲತಾ, ಮಂಡ್ಯದ ಜನರ ಬಗ್ಗೆ, ಅವರ ಪ್ರೀತಿಯ ಬಗ್ಗೆ ಮಾತನಾಡಿದ ಬಳಿಕ ನಟ ದರ್ಶನ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ‘‘ಮಂಡ್ಯ ಜನ ಪ್ರೀತಿ ಕೊಟ್ಟರೆ ಯಾವ ರೀತಿ ಇರುತ್ತದೆ ಎಂಬುದು ನಮಗೆ ಗೊತ್ತಿದೆ. ಅಂಬರೀಶ್ ಅವರಿಗೆ ನೀಡಿದ ಪ್ರೀತಿಯನ್ನೇ ನಮಗೂ ನೀಡಿದ್ದೀರಿ. ಮಂಡ್ಯದಲ್ಲಿ ಏನೇ ನಡೆದರೂ ಅದು ಇತಿಹಾಸವೇ. ‘ಕಾಟೇರ’ ಸಿನಿಮಾದ ಹಲವು ಕಾರ್ಯಕ್ರಮಗಳು ನಡೆದಿವೆ, ಆದರೆ ಮಂಡ್ಯದಲ್ಲಿ ಇಂದು ನಡೆಯುತ್ತಿರುವ ಈ ಇವೆಂಟ್ ಸಹ ಇತಿಹಾಸವೇ ಆಗಬೇಕು, ಹಲವು ವರ್ಷಗಳ ಕಾಲ ಈ ಕಾರ್ಯಕ್ರಮವನ್ನು ಜನ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದರು.

ಇದನ್ನೂ ಓದಿ:ಲೋಕಸಭಾ ಚುನಾವಣೆ: ನಿಖಿಲ್​ರನ್ನು​ ಅಖಾಡಕ್ಕೆ ಇಳಿಸಲು ಒತ್ತಡ, ಬೆಂಗಳೂರು ಉತ್ತರಕ್ಕೆ ಹೋಗುತ್ತಾರ ಸುಮಲತಾ?

‘‘ನಾಲ್ಕೂವರೆ ವರ್ಷದ ಹಿಂದೆ ನೀವು ಸೃಷ್ಟಿಸಿದ ಇತಿಹಾಸ ನಾನು ಮರೆಯಲಾರೆ, ಬಹುಷಃ ನೀವು ಮರೆಯಲಾರಿರಿ. ನನಗೆ ಯಾರೂ ಇಲ್ಲ, ನನ್ನಲ್ಲಿನ ಶಕ್ತಿ ನಾನು ಕಳೆದುಕೊಂಡೆ ಎಂದುಕೊಂಡಿದ್ದಾಗ, ನನಗೆ ಶಕ್ತಿಯಾಗಿ ನಿಂತಿದ್ದು ನನ್ನ ಮಂಡ್ಯದ ಜನ. ಜೊತೆಗೆ ಇನ್ನಷ್ಟು ಶಕ್ತಿಯನ್ನು ನನ್ನ ಆಪ್ತರು ತುಂಬಿದರು. ಅದರಲ್ಲಿ ಮುಖ್ಯ ಶಕ್ತಿ ಡಿ-ಬಾಸ್, ದರ್ಶನ್. ಅಭಿಮಾನಿಗಳು ದರ್ಶನ್ ಮೇಲೆ ಎಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆಯೋ ಅದೇ ಅಭಿಮಾನವನ್ನು ಅವರು ಅವರ ಅಭಿಮಾನಿಗಳ ಮೇಲೆ ಇಟ್ಟಿದ್ದಾರೆ. ಹಾಗಾಗಿ ಅವರನ್ನು ಸೆಲೆಬ್ರಿಟಿ ಎಂದು ಕರೆಯುತ್ತಾರೆ. ನಾನೂ ಸಹ ದರ್ಶನ್​ರ ಸೆಲೆಬ್ರಿಟಿ’’ ಎಂದರು ಸುಮಲತಾ.

‘‘ದರ್ಶನ್ ನನ್ನನ್ನು ‘ಮದರ್ ಇಂಡಿಯಾ’ ಎಂದೇ ಕರೆಯೋದು. ಮಂಡ್ಯಕ್ಕೆ ನಾನು ಸೊಸೆ ಮತ್ತು ಸಂಸದೆ, ಆದರೆ ಇಲ್ಲಿ ನಾನು ನಿಂತಿರುವುದು ನಿಮ್ಮಂತೆ ನಾನೂ ಸಹ ದರ್ಶನ್ ಅಭಿಮಾನಿಯಾಗಿ, ದರ್ಶನ್​ರ ಸೆಲೆಬ್ರಿಟಿಯಾಗಿ. ನನಗೆ ದರ್ಶನ್​ರ ನಟನೆ, ಡ್ಯಾನ್ಸ್, ಹಾಡು, ಫೈಟ್​ಗಳೆಂದರೆ ಬಹಳ ಇಷ್ಟ. ಈಗ ಬಿಡುಗಡೆಗೆ ರೆಡಿಯಾಗಿರುವ ‘ಕಾಟೇರ’ ಸಿನಿಮಾವನ್ನು ನೋಡಲು ಸಹ ನಾನು ಕಾತರಳಾಗಿ ಕಾಯುತ್ತಿದ್ದೇನೆ’’ ಎಂದಿದ್ದಾರೆ. ‘ಕಾಟೇರ’ ಸಿನಿಮಾ ಡಿಸೆಂಬರ್ 29ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ