Exclusive: ‘ಭವಿಷ್ಯದಲ್ಲಿ ಸುದೀಪ್ ಜತೆ ಸಿನಿಮಾ ಮಾಡಬಹುದು’; ರಮ್ಯಾ ಮಾತುಕೇಳಿ ಫ್ಯಾನ್ಸ್ ಖುಷ್

ಪುನೀತ್ ರಾಜ್​ಕುಮಾರ್ ಜತೆ ರಮ್ಯಾ ಸಿನಿಮಾ ಮಾಡಬೇಕಿತ್ತು. ಇದನ್ನು ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಸುದೀಪ್ ಜತೆ ಸಿನಿಮಾ ಮಾಡಬಹುದು ಎಂದು ಹೇಳಿದ್ದಾರೆ.

Exclusive: ‘ಭವಿಷ್ಯದಲ್ಲಿ ಸುದೀಪ್ ಜತೆ ಸಿನಿಮಾ ಮಾಡಬಹುದು’; ರಮ್ಯಾ ಮಾತುಕೇಳಿ ಫ್ಯಾನ್ಸ್ ಖುಷ್
ರಮ್ಯಾ-ಸುದೀಪ್
Edited By:

Updated on: Oct 06, 2022 | 3:55 PM

ನಟಿ ರಮ್ಯಾ ಹಾಗೂ ಕಿಚ್ಚ ಸುದೀಪ್ (Kichcha Sudeep) ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. 2008ರಲ್ಲಿ ತೆರೆಗೆ ಬಂದ ‘ಮುಸ್ಸಂಜೆಮಾತು’ ಚಿತ್ರ ಸೂಪರ್ ಹಿಟ್ ಆಯಿತು. ಇವರ ಕಾಂಬಿನೇಷನ್​ ಬಗ್ಗೆ ಫ್ಯಾನ್ಸ್​ಗೆ ಈಗಲೂ ಪ್ರೀತಿ ಇದೆ. ಇವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂಬುದು ಫ್ಯಾನ್ಸ್ ಬಯಕೆ. ಇದು ಮತ್ತೆ ನಿಜವಾಗುವ ಸೂಚನೆ ಸಿಕ್ಕಿದೆ. ರಮ್ಯಾ (Ramya) ಅವರು ಟಿವಿ9 ಕನ್ನಡದ ಜತೆಗೆ ಮಾತನಾಡುವಾಗ ಈ ವಿಚಾರವನ್ನು ಹೇಳಿದ್ದಾರೆ.

ರಮ್ಯಾ ಅವರು ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಪ್ರೊಡಕ್ಷನ್​ಹೌಸ್ ಮೂಲಕ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ರಾಜ್ ಬಿ. ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾರೆ. ಇದರ ಬಗ್ಗೆ ರಮ್ಯಾ ಅವರು ಟಿವಿ9 ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಒಂದು ಕಡೆ ಭಯ ಇದೆ, ಮತ್ತೊಂದು ಕಡೆ ಎಗ್ಸೈಟ್​ಮೆಂಟ್ ಇದೆ. ಈ ಚಿತ್ರಕ್ಕೆ ಟೈಟಲ್ ಇಟ್ಟಿರೋದು ರಾಜ್ ಶೆಟ್ಟಿ. ಈ ಟೈಟಲ್ ಹಿಡಿಸಿತು. ನಾನು ಚಿತ್ರರಂಗಕ್ಕೆ ಮರಳುತ್ತೇನೆ ಎಂದಾಗ ತುಂಬಾ ಕಥೆಗಳು ಬಂದವು. ರಾಜ್ ಬಿ. ಶೆಟ್ಟಿ ಹೇಳಿದ ಕಥೆ ಇಷ್ಟ ಆಯ್ತು. ಇದು ಬೇರೇ ರೀತಿಯಲ್ಲಿ ಇರುವ ಸಿನಿಮಾ’ ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ
Ramya: 18ನೇ ಪ್ರಾಯದಲ್ಲಿ ರಮ್ಯಾ ಹೇಗಿದ್ದರು ನೋಡಿ; ವೈರಲ್​ ಆಗಿದೆ ಹಳೇ ಐಡಿ ಕಾರ್ಡ್​​ ಫೋಟೋ
ಕನ್ನಡದ ಪ್ರಸಿದ್ಧ ನಟಿಯರ ಪಟ್ಟಿಯಲ್ಲಿ ರಮ್ಯಾಗೆ 4ನೇ ಸ್ಥಾನ; ರಚಿತಾ, ಆಶಿಕಾ, ರಶ್ಮಿಕಾ, ರಾಧಿಕಾ ನಡುವೆ ನಂ.1 ಯಾರು?
Ramya: ತಮ್ಮನ್ನು ತಾವೇ ‘ಡ್ರಾಮಾ ಕ್ವೀನ್​’ ಎಂದು ಕರೆದುಕೊಂಡ ನಟಿ ರಮ್ಯಾ; ಕಾರಣ ಏನು?
Ramya: ಕಡೆಗೂ ಶೂಟಿಂಗ್​ ಸೆಟ್​ಗೆ ಬಂದ ರಮ್ಯಾ: ಡಾಲಿ ಜತೆ ಇರುವ ವಿಡಿಯೋ ವೈರಲ್​; ಏನಿದು ಸಮಾಚಾರ?

‘ಕೊವಿಡ್ ಸಮಯದಲ್ಲಿ ಕನ್ನಡದ ಹಲವು ಸಿನಿಮಾ ನೋಡಿದೆ. ‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ, ಆಗಿಲ್ಲ. ಕಾರ್ತಿಕ್ ಗೌಡ ಅವರು ಸಿನಿಮಾ ಬಗ್ಗೆ ಮಾತನಾಡಿದ್ದರು. ‘ನೀವು ಯಾಕೆ ಮತ್ತೆ ಸಿನಿಮಾ ಮಾಡಬಾರದು’ ಎಂದು ಕೇಳಿದ್ದರು. ಹಾಗೆ ಶುರುವಾದ ಮಾತುಕಥೆ ಇಲ್ಲಿಗೆ ಬಂದಿದೆ. ನನ್ನ ನಿರ್ಮಾಣ ಸಂಸ್ಥೆಯಡಿಯಲ್ಲಿ ಹೊಸಬರಿಗೆ ಅವಕಾಶ ನೀಡುತ್ತೇನೆ’ ಎಂದು ಸಂತಸದಿಂದ ಹೇಳಿದ್ದಾರೆ ರಮ್ಯಾ.

ಪುನೀತ್ ರಾಜ್​ಕುಮಾರ್ ಜತೆ ರಮ್ಯಾ ಸಿನಿಮಾ ಮಾಡಬೇಕಿತ್ತು. ಇದನ್ನು ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ‘ಅಪ್ಪು ಜೊತೆ ಕಂಬ್ಯಾಕ್ ಮಾಡೋ‌ ಪ್ಲಾನ್ ಇತ್ತು. ನಾನು-ಅಪ್ಪು ಸಿನಿಮಾ ಬಗ್ಗೆ ಮಾತಾಡಿದ್ವಿ. ಆದರೆ ಅದು ಆಗಲೇ ಇಲ್ಲ. ಮುಂದೊಂದು ದಿನ ನಾನು ಸುದೀಪ್ ಅವರ ಜೊತೆಯೂ ಆ್ಯಕ್ಟ್ ಮಾಡಬಹುದು’ ಎಂದು ಕುತೂಹಲ ಹುಟ್ಟು ಹಾಕಿದ್ದಾರೆ.

ಇದನ್ನೂ ಓದಿ: ದಸರಾ ಸಿನಿಮೋತ್ಸವಕ್ಕೆ ಚಾಲನೆ ನೀಡುವ ವೇಳೆ ಕಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜ್​ಕುಮಾರ್

‘ಹಿಂದೆ ಮಾಡಿದ ರೀತಿಯಲ್ಲಿ ಸಿನಿಮಾ ಮಾಡೋಕೆ ಆಗಲ್ಲ. ತುಂಬಾ ಸೆಲೆಕ್ಟಿವ್ ರೋಲ್​​ನಲ್ಲಿ ಸಿನಿಮಾ ಮಾಡ್ತೀನಿ. ಮೊದಲ ಸಿನಿಮಾ ಮಾಡಿದ ರೀತಿ ನಂಗೆ ಈಗ ಭಯ ಇದೆ. ನಾನು ಕನಿಷ್ಠ 20 ಕಥೆಗಳನ್ನ ರಿಜೆಕ್ಟ್ ಮಾಡಿದ್ದೇನೆ. ಇನ್ಮುಂದೆ ಸಿನಿಮಾ ಮಾಡಿದ್ರೆ ಒಳ್ಳೆಯ ಸಿನಿಮಾ ಮಾಡಬೇಕು ಅಂತ ಪ್ಲಾನ್ ಇದೆ’ ಎಂದಿದ್ದಾರೆ ರಮ್ಯಾ.

Web contact

TV9 Kannada

Read More
Follow Us