AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗ್ಗೇಶ್​ ಜನ್ಮದಿನ: ಪುನೀತ್​ ವಿಶ್​ ಮಾಡಿದ್ದ ಆ ವಿಡಿಯೋ ಮತ್ತೆ ವೈರಲ್​; ಭಾವುಕರಾದ ‘ನವರಸ ನಾಯಕ’

Jaggesh Birthday: ಪುನೀತ್​ ರಾಜ್​ಕುಮಾರ್​ ಅವರ ಹಳೇ ವಿಡಿಯೋ ಮತ್ತೆ ವೈರಲ್​ ಆಗಿರುವುದು ಕಂಡು ಜಗ್ಗೇಶ್​ ಭಾವುಕರಾಗಿದ್ದಾರೆ. ಅಳುವ ಎಮೋಜಿಗಳ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ.

ಜಗ್ಗೇಶ್​ ಜನ್ಮದಿನ: ಪುನೀತ್​ ವಿಶ್​ ಮಾಡಿದ್ದ ಆ ವಿಡಿಯೋ ಮತ್ತೆ ವೈರಲ್​; ಭಾವುಕರಾದ ‘ನವರಸ ನಾಯಕ’
ಪುನೀತ್​ ರಾಜ್​ಕುಮಾರ್​, ಜಗ್ಗೇಶ್
TV9 Web
| Updated By: ಮದನ್​ ಕುಮಾರ್​|

Updated on: Mar 17, 2022 | 1:53 PM

Share

ಇಂದು (ಮಾ.17) ಪುನೀತ್​ ರಾಜ್​ಕುಮಾರ್ (Puneeth Rajkumar)​ ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬ ಆಚರಣೆ ಮಾಡುವ ಪರಿಸ್ಥಿತಿ ಬಂದಿದೆ. ಕಳೆದ ವರ್ಷ ಅ.29ರಂದು ಹೃದಯಾಘಾತದಿಂದ ನಿಧನರಾದ ಅಪ್ಪು ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ‘ಪವರ್​ ಸ್ಟಾರ್​’ ಇಲ್ಲ ಎಂಬ ನೋವಿನ ನಡುವೆಯೂ ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಮಾ.17 ಎಂದರೆ ಜಗ್ಗೇಶ್​ ಅಭಿಮಾನಿಗಳಿಗೂ ವಿಶೇಷ. ಯಾಕೆಂದರೆ, ಇಂದು ಜಗ್ಗೇಶ್​ ಜನ್ಮದಿನ (Jaggesh Birthday) ಕೂಡ ಹೌದು. ಅಪ್ಪು ಬದುಕಿದ್ದಾಗ ‘ನವರಸ ನಾಯಕ’ನಿಗೆ ವಿಶ್​ ಮಾಡುತ್ತಿದ್ದರು. ‘ನಾನು ಜಗ್ಗೇಶ್​ ಅವರ ಅಭಿಮಾನಿ’ ಎಂದು ಹಲವು ಬಾರಿ ಪುನೀತ್​ ಹೇಳಿದ್ದರು. ಆದರೆ ಇಂದು ಆ ಮಾತನ್ನು ಹೇಳಲು ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲ. ಪುನೀತ್​ ರಾಜ್​ಕುಮಾರ್​ ಅವರ ಬಗೆಗಿನ ನೆನಪುಗಳು ಎಂದಿಗೂ ಶಾಶ್ವತವಾಗಿ ಇರುತ್ತವೆ. ಅದರಲ್ಲೂ ಕೆಲವು ಹಳೇ ವಿಡಿಯೋಗಳು ವೈರಲ್​ ಆದಾಗ ಅಪ್ಪು ನೆನಪು ಇನ್ನಷ್ಟು ಕಾಡುತ್ತದೆ. ಇಂದು ಜಗ್ಗೇಶ್​ (Navarasa Nayaka Jaggesh) ಜನ್ಮದಿನದ ಪ್ರಯುಕ್ತ ಶುಭ ಕೋರಿರುವ ಅಭಿಮಾನಿಗಳು ಅಂಥ ಕೆಲವು ಹಳೇ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಜಗ್ಗೇಶ್​ ಭಾವುಕರಾಗಿದ್ದಾರೆ.

ಜಗ್ಗೇಶ್​ ಮೇಲೆ ತಮಗೆ ಯಾವ ರೀತಿಯ ಅಭಿಮಾನ ಇದೆ ಎಂಬುದನ್ನು ಪುನೀತ್​ ರಾಜ್​ಕುಮಾರ್​ ಅವರು ಅನೇಕ ಬಾರಿ ಹೇಳಿದ್ದರು. ‘ತರ್ಲೆ ನನ್​ ಮಗ’ ಸಿನಿಮಾವನ್ನು ಅವರು ನೂರಾರು ಸಲ ನೋಡಿದ್ದರು. ಜಗ್ಗೇಶ್​ ಕಾಮಿಡಿಗೆ ಅಪ್ಪು ಫಿದಾ ಆಗಿದ್ದರು. ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ಪುನೀತ್​ ಕಡೆಯಿಂದ ಜಗ್ಗೇಶ್​ ಅವರಿಗೆ ಶುಭಾಶಯ ತಿಳಿಸಲಾಗುತ್ತಿತ್ತು. ‘ಜಗ್ಗೇಶ್​ ಅವರಿಗೆ ಒಬ್ಬ ಅಭಿಮಾನಿಯಾಗಿ ನನ್ನ ಕಡೆಯಿಂದ ಶುಭಾಶಯಗಳು. ಹ್ಯಾಪಿ ಬರ್ತ್​ಡೇ ಜಗ್ಗೇಶ್​ ಸರ್​. ಯಾಕೆಂದರೆ ನಾನು ಅವರ ದೊಡ್ಡ ಫ್ಯಾನ್​’ ಎಂದು ಪುನೀತ್​ ಹೇಳಿದ್ದ ವಿಡಿಯೋವನ್ನು ಅಭಿಮಾನಿಗಳು ಟ್ವಿಟರ್​ನಲ್ಲಿ ಈಗ ಶೇರ್​ ಮಾಡಿಕೊಂಡಿದ್ದಾರೆ.

ಈ ವಿಡಿಯೋ ಮತ್ತೆ ವೈರಲ್​ ಆಗಿರುವುದು ಕಂಡು ಜಗ್ಗೇಶ್​ ಭಾವುಕರಾಗಿದ್ದಾರೆ. ಅಳುವ ಎಮೋಜಿಗಳ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ. ಜಗ್ಗೇಶ್​ ಮತ್ತು ಪುನೀತ್​ ರಾಜ್​ಕುಮಾರ್​ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅದನ್ನು ಅನೇಕ ವೇದಿಕೆಗಳಲ್ಲಿ ಅವರು ಹೇಳಿದ್ದುಂಟು. ಆದರೆ ಅಪ್ಪು ಈಗ ನೆನಪು ಮಾತ್ರ ಎಂಬುದನ್ನು ತಿಳಿದಾಗ ಅಭಿಮಾನಿಗಳಿಗೆ ಸಖತ್ ದುಃಖ ಆಗುತ್ತದೆ. ಪುನೀತ್​ ಅವರನ್ನು ಕಳೆದುಕೊಂಡ ನೋವು ಇನ್ನೂ  ಹಸಿಯಾಗಿ ಇರುವುದರಿಂದ ಈ ಬಾರಿ ಜಗ್ಗೇಶ್​ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೂ ಅವರಿಗೆ ಅನೇಕರು ಶುಭಾಶಯ ಕೋರುತ್ತಿದ್ದಾರೆ.

ಈ ವರ್ಷ ತಾವು ಬರ್ತ್​ಡೇ ಆಚರಿಸಿಕೊಳ್ಳುವುದಿಲ್ಲ ಎಂಬ ಬಗ್ಗೆ ಇತ್ತೀಚೆಗೆ ಜಗ್ಗೇಶ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ತಿಳಿಸಿದ್ದರು. ಪುನೀತ್​ ಜತೆ ಇರುವ ಫೋಟೋ ಹಂಚಿಕೊಂಡಿದ್ದ ಜಗ್ಗೇಶ್, ‘ಈ ಬಾರಿ ನನ್ನ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆಚರಿಸುವ ಮನಸ್ಸು ಕೂಡ ಇಲ್ಲ. ಕಾರಣ, ಪ್ರತಿ ಮಾರ್ಚ್​ 17ಕ್ಕೆ ತಪ್ಪದೇ ಪುನೀತ್ ಕರೆ ಮಾಡುತ್ತಿದ್ದ. ಅಣ್ಣಾ happy birthday ಎಂದು ಹೇಳುತ್ತಿದ್ದ ಕರೆ ಮತ್ತೆ ಎಂದೂ ಬರದಂತಾಯಿತು. ಪುನೀತ್​ ಜೊತೆ ಕೊನೆಯ ಚಿತ್ರ’ ಎಂದು ಬರೆದುಕೊಂಡಿದ್ದರು.

ಹಲವು ಸಿನಿಮಾಗಳಲ್ಲಿ ಜಗ್ಗೇಶ್​ ಬ್ಯುಸಿ ಆಗಿದ್ದಾರೆ. ‘ತೋತಾಪುರಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ರಾಘವೇಂದ್ರ ಸ್ಟೋರ್ಸ್​’ ಚಿತ್ರ ಕೂಡ ನಿರೀಕ್ಷೆ ಸೃಷ್ಟಿಸಿದೆ. ಈ ಎಲ್ಲ ಸಿನಿಮಾತಂಡಗಳಿಂದಲೂ ಜಗ್ಗೇಶ್​ ಬರ್ತ್​ಡೇ ಪ್ರಯುಕ್ತ ಹೊಸ ಪೋಸ್ಟರ್​ಗಳನ್ನು ರಿಲೀಸ್​ ಮಾಡಲಾಗಿದ್ದು, ಆ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲಾಗಿದೆ.

ಇದನ್ನೂ ಓದಿ:

ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್​ ಫ್ಯಾನ್ಸ್​

‘ಜೇಮ್ಸ್​’ ಚಿತ್ರದ ಆ ಒಂದು ಸೀನ್​ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ; ಪುನೀತ್​ ಮೇಲಿನ ಅಭಿಮಾನ​ ಶಾಶ್ವತ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!