AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಥಿಯೇಟರ್​ ಜೊತೆ ಅಣ್ಣಾವ್ರ ಕುಟುಂಬಕ್ಕೆ ಇದೆ ವಿಶೇಷ ನಂಟು; ಏನೆಂದು ತಿಳಿಸಿದ ರಾಘಣ್ಣ

Raghavendra Rajkumar: ‘ಅಪ್ಪು ಮತ್ತು ಅಪ್ಪಾಜಿ ಅವರು ಆ ಥಿಯೇಟರ್​ಗೆ ಬರುತ್ತಾರೆ ಎಂಬ ನಂಬಿಕೆ ನಮಗೆ ಇದೆ. ಹಾಗಾಗಿ ನಾವು ಅಲ್ಲಿಯೇ ಜೇಮ್ಸ್​ ಸಿನಿಮಾ ನೋಡುತ್ತೇವೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಈ ಥಿಯೇಟರ್​ ಜೊತೆ ಅಣ್ಣಾವ್ರ ಕುಟುಂಬಕ್ಕೆ ಇದೆ ವಿಶೇಷ ನಂಟು; ಏನೆಂದು ತಿಳಿಸಿದ ರಾಘಣ್ಣ
ರಾಘವೇಂದ್ರ ರಾಜ್​ಕುಮಾರ್
TV9 Web
| Edited By: |

Updated on: Mar 17, 2022 | 8:28 AM

Share

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಟನೆಯ ‘ಜೇಮ್ಸ್​’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ಇಂದು ಅಪ್ಪು ಜನ್ಮದಿನ ಕೂಡ. ಆ ಕಾರಣದಿಂದ ಅಭಿಮಾನಿಗಳಿಗೆ ಡಬಲ್ ಧಮಾಕಾ. ವಿಶ್ವಾದ್ಯಂತ ‘ಜೇಮ್ಸ್​’ ತೆರೆಕಂಡಿದೆ. ಕರುನಾಡಿನ ಮೂಲೆಮೂಲೆಯಲ್ಲೂ ಅಭಿಮಾನಿಗಳು ‘ಪವರ್​ ಸ್ಟಾರ್​’ಗೆ ಜೈಕಾರ ಕೂಗುತ್ತಿದ್ದಾರೆ. ಇನ್ನು, ಡಾ. ರಾಜ್​ಕುಮಾರ್​ ಕುಟುಂಬದವರು ಕೂಡ ಅಭಿಮಾನಿಗಳ ರೀತಿಯಲ್ಲೇ ಬೆಳ್ಳಂಬೆಳಗ್ಗೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ. ಪುನೀತ್​ ಸಹೋದರ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar)​ ಅವರು ಪತ್ನಿ ಮಂಗಳಾ ಜೊತೆಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್​ ಚಿತ್ರಮಂದಿರಕ್ಕೆ ಬಂದು ‘ಜೇಮ್ಸ್​’ ನೋಡಿದ್ದಾರೆ. ಬೆಳಗ್ಗೆ 6 ಗಂಟೆ ಶೋಗೆ ಅವರು ಬಂದಿದ್ದು ಕಂಡು ಅಭಿಮಾನಿಗಳ ಜೋಶ್​ ಹೆಚ್ಚಿತು. ಅಷ್ಟಕ್ಕೂ ಅವರು ‘ವೀರೇಶ್​’ (Veeresh Theatre) ಚಿತ್ರಮಂದಿರವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಈ ಪ್ರಶ್ನೆಗೆ ರಾಘಣ್ಣ ಉತ್ತರ ನೀಡಿದ್ದಾರೆ. ಈ ಥಿಯೇಟರ್​ ಜೊತೆ ಅವರಿಗೆ ಒಂದು ವಿಶೇಷವಾದ ನಂಟು ಇದೆ. ಇಡೀ ರಾಜ್​ ಕುಟುಂಬಕ್ಕೆ ಈ ಚಿತ್ರಮಂದಿರದ ಜೊತೆ ಕೆಲವು ನೆನಪುಗಳಿವೆ. ಆ ಬಗ್ಗೆ ರಾಘವೆಂದ್ರ ರಾಜ್​ಕುಮಾರ್​ ಅವರು ಒಂದಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸ್ಟಾರ್​ ನಟರು ತಮ್ಮದೇ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡುವ ಅನುಭವ ಭಿನ್ನವಾಗಿರುತ್ತದೆ. ಡಾ. ರಾಜ್​ಕುಮಾರ್​ ಅವರು ಕೂಡ ಅನೇಕ ಬಾರಿ ಇದೇ ‘ವೀರೇಶ್​’ ಚಿತ್ರಮಂದಿರಕ್ಕೆ ಬಂದು ಫ್ಯಾನ್ಸ್​ ಜೊತೆ ಸಿನಿಮಾ ವೀಕ್ಷಿಸಿದ್ದರು. ಆ ಘಟನೆಗಳನ್ನು ರಾಘವೇಂದ್ರ ರಾಜ್​ಕುಮಾರ್​ ಮೆಲುಕು ಹಾಕಿದ್ದಾರೆ. ಬುಧವಾರ (ಮಾ.16) ರಾತ್ರಿಯೇ ಪುನೀತ್​ ರಾಜ್​ಕುಮಾರ್​ ಸಮಾಧಿ ಬಳಿ ಕೇಕ್​ ಕತ್ತರಿಸುವ ಮೂಲಕ ಅಪ್ಪು ಜನ್ಮದಿನವನ್ನು ರಾಜ್​ ಕುಟುಂಬದವರು ಆಚರಿಸಿದ್ದಾರೆ. ಈ ವೇಳೆ ರಾಘಣ್ಣ ಕೂಡ ಇದ್ದರು. ತಾವು ವೀರೇಶ್​ ಥಿಯೇಟರ್​​ನಲ್ಲೇ ‘ಜೇಮ್ಸ್​’ ನೋಡುವುದಾಗಿ ತಿಳಿಸಿದರು. ಆ ಚಿತ್ರಮಂದಿರವೇ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅಪರೂಪದ ಮಾಹಿತಿ ಹಂಚಿಕೊಂಡರು.

ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ನಟಿಸಿದ ಮೊದಲ ಸಿನಿಮಾಗಳನ್ನು ಡಾ. ರಾಜ್​ಕುಮಾರ್​ ಅವರು ‘ವೀರೇಶ್​’ ಚಿತ್ರಮಂದಿರದಲ್ಲಿ ನೋಡಿದ್ದರು. ಆ ನೆನಪುಗಳು ರಾಘಣ್ಣನ ಮನದಲ್ಲಿ ಹಸಿರಾಗಿವೆ. ಹಾಗಾಗಿ ಈ ಚಿತ್ರಮಂದಿರ ಎಂದರೆ ಅವರಿಗೆ ವಿಶೇಷ ಪ್ರೀತಿ. ‘ನಾನು ವೀರೇಶ್​ ಥಿಯೇಟರ್​ನಲ್ಲೇ ಸಿನಿಮಾ ನೋಡುತ್ತೇವೆ. ಯಾಕೆಂದರೆ, ನಮ್ಮೆಲ್ಲರ ಮೊದಲ ಸಿನಿಮಾವನ್ನು ಅಪ್ಪಾಜಿ ಅವರು ಅಲ್ಲಿಗೇ ಹೋಗಿ ಅಭಿಮಾನಿಗಳ ಜೊತೆ ಶಿಳ್ಳೆ ಹೊಡೆಯುತ್ತಾ ವೀಕ್ಷಣೆ ಮಾಡಿದ್ದರು. ‘ಜೀವನ ಚೈತ್ರ’ ಸಿನಿಮಾವನ್ನೂ ಸಹ ಅಲ್ಲಿಯೇ ನೋಡಿದ್ದರು. ಹಾಗಾಗಿ ನಾವು ಕೂಡ ‘ಜೇಮ್ಸ್​’ ಸಿನಿಮಾವನ್ನು ವೀರೇಶ್​ ಚಿತ್ರಮಂದಿರದಲ್ಲಿ ನೋಡುತ್ತೇವೆ. ಅಪ್ಪು ಮತ್ತು ಅಪ್ಪಾಜಿ ಅವರು ಆ ಥಿಯೇಟರ್​ಗೆ ಬರುತ್ತಾರೆ ಎಂಬ ನಂಬಿಕೆ ನಮಗೆ ಇದೆ’ ಎಂದು ರಾಘವೆಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಮೊದಲ ದಿನ ‘ಜೇಮ್ಸ್​’ ಸಿನಿಮಾಗೆ ಅಭಿಮಾನಿಗಳಿಂದ ಸಿಗುತ್ತಿರುವ ರೆಸ್ಪಾನ್ಸ್​ ಕಂಡು ರಾಘಣ್ಣ ಖುಷಿ ಆಗಿದ್ದಾರೆ. ‘ಇಂದು ಇಷ್ಟೊಂದು ಜನರು ಅಪ್ಪುನನ್ನು ಎದೆಯಲ್ಲಿ ಇಟ್ಟುಕೊಂಡು ಬಂದಿದ್ದಾರೆ. ಹೀಗಿರುವಾಗ ಅಪ್ಪು ಇಲ್ಲ ಅಂತ ನಾನು ಹೇಗೆ ಹೇಳಲಿ?’ ಪುನೀತ್​ ನಮ್ಮೆಲ್ಲರ ಜೊತೆ ಇದ್ದಾರೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:

ನಾಗತ್ತೆ ಮನೆಯಲ್ಲಿ ಭಾವುಕರಾದ ರಾಘವೇಂದ್ರ ರಾಜ್​ಕುಮಾರ್​-ಮಂಗಳಾ ದಂಪತಿ; ಇಲ್ಲಿದೆ ವಿಡಿಯೋ

ರಾಜ್​ಕುಮಾರ್ ಹುಟ್ಟಿದ ಗಾಜನೂರಿನಲ್ಲೇ ಸಿನಿಮಾ ಮುಹೂರ್ತ; ಪ್ರಮುಖ ಪಾತ್ರದಲ್ಲಿ ರಾಘಣ್ಣ

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ