AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಯತೀರ್ಥ, ಸತ್ಯ ಮೆಚ್ಚಿದ ‘ಗಿಲ್ಕಿ’ ಟ್ರೇಲರ್​; ಇದು ಅಪರೂಪದ ಪ್ರೇಮಕಥೆಯ ವಿಭಿನ್ನ ಪ್ರಯತ್ನ

‘ಗಿಲ್ಕಿ’ ಚಿತ್ರ ಫೆ.18ರಂದು ರಿಲೀಸ್​ ಆಗಲಿದೆ. ಈ ಸಿನಿಮಾದ ಟ್ರೇಲರ್​ ಮತ್ತು ಹಾಡುಗಳನ್ನು ನೋಡಿ ಜಯತೀರ್ಥ ಹಾಗೂ ಡಿ. ಸತ್ಯ ಪ್ರಕಾಶ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಜಯತೀರ್ಥ, ಸತ್ಯ ಮೆಚ್ಚಿದ ‘ಗಿಲ್ಕಿ’ ಟ್ರೇಲರ್​; ಇದು ಅಪರೂಪದ ಪ್ರೇಮಕಥೆಯ ವಿಭಿನ್ನ ಪ್ರಯತ್ನ
ಗಿಲ್ಕಿ ಚಿತ್ರದ ಟ್ರೇಲರ್​ ಲಾಂಚ್​
TV9 Web
| Edited By: |

Updated on:Feb 12, 2022 | 10:11 AM

Share

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡ ನಿರ್ದೇಶಕರ ಪೈಕಿ ಡಿ. ಸತ್ಯ ಪ್ರಕಾಶ್​ (D Satya Prakash) ಮತ್ತು ಜಯತೀರ್ಥ (Jayatheertha) ಕೂಡ ಪ್ರಮುಖರು. ಇವರಿಬ್ಬರೂ ‘ಗಿಲ್ಕಿ’ ಸಿನಿಮಾದ ಟ್ರೇಲರ್​ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಮತ್ತು ಹಾಡುಗಳನ್ನು ಅನಾವರಣ ಮಾಡಲಾಯಿತು. ಆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಜಯತೀರ್ಥ ಮತ್ತು ಸತ್ಯ ಪ್ರಕಾಶ್​ ಆಗಮಿಸಿದ್ದರು. ‘ಗಿಲ್ಕಿ’ (Gilky Kannada Movie) ಸಿನಿಮಾದಲ್ಲಿ ಚೈತ್ರಾ ಆಚಾರ್​ ಮತ್ತು ತಾರಕ್​ ಪೊನ್ನಪ್ಪ ಜೋಡಿಯಾಗಿ ನಟಿಸಿದ್ದಾರೆ. ಜೋಡಿ ಎಂದಮಾತ್ರಕ್ಕೆ ಮಾಮೂಲಿ ಸಿನಿಮಾಗಳಂತೆ ಮರಸುತ್ತುವ ಪ್ರೇಮಿಗಳ ಪಾತ್ರ ಇದಲ್ಲ. ಬುದ್ಧಿಮಾಂದ್ಯನಾಗಿ ತಾರಕ್​ ಪೊನ್ನಪ್ಪ ನಟಿಸಿದ್ದರೆ, ಸೆಲೆಬ್ರಲ್​ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿರುವ ಅಂಗವಿಕಲ ಹುಡುಗಿಯಾಗಿ ಚೈತ್ರಾ ಆಚಾರ್​ ಅಭಿನಯಿಸಿದ್ದಾರೆ. ಇಂಥ ಎರಡು ಜೀವಗಳ ನಡುವೆ ಪ್ರೀತಿ ಚಿಗುರಿದರೆ ಯಾವ ರೀತಿ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂಬ ಕೌತುಕ ಮೂಡಿಸುವಲ್ಲಿ ‘ಗಿಲ್ಕಿ’ ಸಿನಿಮಾದ ಟ್ರೇಲರ್​ ಯಶಸ್ವಿ ಆಗಿದೆ.  ಈ ಚಿತ್ರಕ್ಕೆ ವೈ.ಕೆ. ನಿರ್ದೇಶನ ಮಾಡಿದ್ದಾರೆ. ನರಸಿಂಹ ಕುಲಕರ್ಣಿ ನಿರ್ಮಾಣ ಮಾಡಿದ್ದು, ಫೆ.18ರಂದು ಈ ಚಿತ್ರ ರಿಲೀಸ್​ ಆಗಲಿದೆ.

ಈ ಸಿನಿಮಾದ ಟ್ರೇಲರ್​ ಮತ್ತು ಹಾಡುಗಳನ್ನು ನೋಡಿ ಜಯತೀರ್ಥ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಒಂದು ಒಳ್ಳೆಯ ಕಂಟೆಂಟ್​ ಇರುವ ಸಿನಿಮಾ ಹೇಗೆ ಜನರನ್ನು ಸೆಳೆಯುತ್ತದೆ ಎಂಬುದಕ್ಕೆ ಒಂದು ಘಟನೆ ಸಾಕ್ಷಿಯಾಗಿದೆ. ಕೆಲವು ದಿನಗಳ ಮೊದಲೇ ನಾನು ಈ ಹಾಡನ್ನು ​ನೋಡಿದ್ದೆ. ಇದರಲ್ಲಿ ನಟಿಸಿದ ಚೈತ್ರಾ ಆಚಾರ್​ ಅವರ ಹೆಸರನ್ನು ಬೇರೊಂದು ಸಿನಿಮಾಗೆ ಶಿಫಾರಸ್ಸು ಮಾಡಿದೆ. ಇಂಥ ಸಿನಿಮಾದ ಕಾರ್ಯಕ್ರಮಗಳಿಗೆ ಬಂದಾಗ ನಮಗೂ ಒಂದಷ್ಟು ಕಲಿಯೋಕೆ ಸಿಗುತ್ತದೆ. ಯಾಕೆಂದರೆ ಹೊಸಬರ ಚಿಂತನೆ ಯಾವಾಗಲೂ ಫ್ರೆಷ್​ ಆಗಿರುತ್ತದೆ’ ಎಂದು ಜಯತೀರ್ಥ ಹೇಳಿದ್ದಾರೆ.

ಡಿ. ಸತ್ಯ ಪ್ರಕಾಶ್​ ಅವರ ‘ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್’ ಮೂಲಕ ‘ಗಿಲ್ಕಿ’ ಸಿನಿಮಾವನ್ನು ರಿಲೀಸ್​ ಮಾಡಲಾಗುತ್ತಿದೆ. ಪೂರ್ತಿ ಸಿನಿಮಾ ನೋಡಿದ ಬಳಿಕವೇ ಅವರು ಇದನ್ನು ವಿತರಣೆ ಮಾಡಲು ಒಪ್ಪಿಕೊಂಡಿರುವುದು. ‘ಗಿಲ್ಕಿ’ ತಂಡದ ಈ ಹೊಸ ಬಗೆಯ ಪ್ರಯತ್ನಕ್ಕೆ ಸತ್ಯ ಪ್ರಕಾಶ್​ ಅವರಿಂದಲೂ ಕೂಡ ಪ್ರಶಂಸೆ ವ್ಯಕ್ತವಾಗಿದೆ.

ಸೂಕ್ಷ್ಮ ಕಥಾಹಂದರದ ಚಿತ್ರವನ್ನು ಜನರಿಗೆ ನೀಡಬೇಕು ಎಂಬ ಆಶಯ ಇಟ್ಟುಕೊಟ್ಟು ನಿರ್ದೇಶನ ವೈ.ಕೆ. ಅವರು ಈ ಅಪರೂಪದ ಕಥೆಯನ್ನು ಸಿನಿಮಾ ಮಾಡಿದ್ದಾರೆ. ‘ಒಬ್ಬಳು ಅಂಗವಿಕಲೆ, ಒಬ್ಬ ಬುದ್ಧಿಮಾಂದ್ಯ, ಇನ್ನೊಬ ಕುರುಡ- ಈ ಮೂರು ಪಾತ್ರಗಳು ಈ ಸಿನಿಮಾದಲ್ಲಿ ಮುಖ್ಯವಾಗಿರಲಿವೆ. ಸಿನಿಮಾ ನೋಡಿದ ಬಳಿಕ ಒಂದು ವಾರದವರೆಗೂ ಈ ಪಾತ್ರಗಳು ಜನರನ್ನು ಕಾಡುತ್ತವೆ’ ಎಂದು ತಮ್ಮ ಸಿನಿಮಾ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ ನಿರ್ದೇಶಕರು. ಕುರುಡನ ಪಾತ್ರದಲ್ಲಿ ಗೌತಮ್​ ರಾಜ್​ ನಟಿಸಿದ್ದಾರೆ.

‘ಅಮೃತ್​ ಅಪಾರ್ಟ್​ಮೆಂಟ್ಸ್​’ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ನರಸಿಂಹ ಕುಲಕರ್ಣಿ ಅವರು ವೈ.ಕೆ. ಅವರ ಮೇಲೆ ಭರವಸೆ ಇಟ್ಟು ‘ಗಿಲ್ಕಿ’ ಚಿತ್ರವನ್ನು ನಿರ್ಮಿಸಿದ್ದಾರೆ. ‘ಇಂಥ ಕಥೆಗೆ ಬಂಡವಾಳ ಹೂಡಿದ್ದರೂ ಕೂಡ ಒಂದು ರೂಪಾಯಿಯನ್ನೂ ರಿಸ್ಕ್​ ಮಾಡಿಕೊಂಡೆ ಅಂತ ನನಗೆ ಅನಿಸಿಲ್ಲ. ನಡುವೆ ಸ್ವಲ್ಪ ಕಷ್ಟ ಬಂತು. ಆದರೆ ಇಡೀ ತಂಡದ ಬೆಂಬಲದಿಂದ ಈ ಸಿನಿಮಾ ಈಗ ರಿಲೀಸ್​ ಹಂತಕ್ಕೆ ಬಂದಿದೆ’ ಎಂದಿದ್ದಾರೆ ನರಸಿಂಹ ಕುಲಕರ್ಣಿ.

ಯೂಟ್ಯೂಬ್​ನಲ್ಲಿ ‘ಗಿಲ್ಕಿ’ ಸಿನಿಮಾದ ಟ್ರೇಲರ್​ ನೋಡಿರುವ ಜನರು ಕೂಡ ಪಾಸಿಟಿವ್​ ಆಗಿ ಕಮೆಂಟ್​ ಮಾಡಿದ್ದಾರೆ. ಕೆಂಪರಾಜು ಬಿ.ಎಸ್​. ಸಂಕಲನ, ಆದಿಲ್​ ನದಾಫ್​ ಸಂಗೀತ ನಿರ್ದೇಶನ, ಕಾರ್ತಿಕ್​ ಎಸ್​. ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದನ್ನೂ ಓದಿ:

‘ಗಿಲ್ಕಿ’ ಚಿತ್ರದ ಚಾಲೆಂಜಿಂಗ್​ ಪಾತ್ರದಲ್ಲಿ ಚೈತ್ರಾ ಆಚಾರ್​, ತಾರಕ್​ ಪೊನ್ನಪ್ಪ; ನಿರೀಕ್ಷೆ ಮೂಡಿಸಿದ ಸಿನಿಮಾ​

ಪರಭಾಷೆಯಲ್ಲೂ ‘ಜೇಮ್ಸ್​’ ಟೀಸರ್​ ಮಿಲಿಯನ್​ ವೀಕ್ಷಣೆ; ತಮಿಳು, ಹಿಂದಿ, ತೆಲುಗು ಪ್ರೇಕ್ಷಕರು ಏನಂದ್ರು?

Published On - 9:58 am, Sat, 12 February 22

Follow Us
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ