AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ಕುಂದಾಪುರದವರು ಎಂದೇ ಅನಿಸುತ್ತದೆ’; ರಿಷಬ್-ಜೂ. ಎನ್​ಟಿಆರ್ ಕನ್ನಡ ಸಂಭಾಣೆ ಹೇಗಿತ್ತು ನೋಡಿ

ಇತ್ತೀಚೆಗೆ ಸೈಮಾ ಅವಾರ್ಡ್​ ಕಾರ್ಯಕ್ರಮ ನಡೆದಿದೆ. ರಿಷಬ್ ಶೆಟ್ಟಿ, ಜೂನಿಯರ್ ಎನ್​ಟಿಆರ್ ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ರಿಷಬ್ ನಟನೆಯ ‘ಕಾಂತಾರ’ ಸಿನಿಮಾಗೆ 10 ಪ್ರಶಸ್ತಿ ಸಿಕ್ಕಿದೆ. ರಿಷಬ್ ಕೂಡ ಅವಾರ್ಡ್ ಗೆದ್ದಿದ್ದಾರೆ. ರಿಷಬ್ ವೇದಿಕೆ ಮೇಲೆ ಮಾತನಾಡುವಾಗ ಜೂನಿಯರ್ ಎನ್​ಟಿಆರ್​ಗೆ ಧನ್ಯವಾದ ಹೇಳಿದ್ದಾರೆ.

‘ನೀವು ಕುಂದಾಪುರದವರು ಎಂದೇ ಅನಿಸುತ್ತದೆ’; ರಿಷಬ್-ಜೂ. ಎನ್​ಟಿಆರ್ ಕನ್ನಡ ಸಂಭಾಣೆ ಹೇಗಿತ್ತು ನೋಡಿ
ರಿಷಬ್-ಜೂನಿಯರ್ ಎನ್​ಟಿಆರ್
ರಾಜೇಶ್ ದುಗ್ಗುಮನೆ
|

Updated on: Sep 23, 2023 | 7:08 AM

Share

ಜೂನಿಯರ್ ಎನ್​ಟಿಆರ್ (Jr NTR) ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಅವರು ಅನೇಕ ಬಾರಿ ಕನ್ನಡದಲ್ಲಿ ಮಾತನಾಡಿದ್ದಿದೆ. ‘ಆರ್​ಆರ್​ಆರ್’ ಚಿತ್ರದಲ್ಲಿ ಅವರು ಮಾಡಿದ ಪಾತ್ರಕ್ಕೆ ಅವರೇ ಡಬ್ ಮಾಡಿದ್ದರು. ಪುನೀತ್ ರಾಜ್​ಕುಮಾರ್ ನಟನೆಯ ‘ಚಕ್ರವ್ಯೂಹ’ ಸಿನಿಮಾದ ‘ಗೆಳೆಯ..’ ಹಾಡನ್ನು ಅವರೇ ಹಾಡಿದ್ದರು. ಈಗ ಜೂನಿಯರ್ ಎನ್​ಟಿಆರ್ ಹಾಗೂ ರಿಷಬ್ ಶೆಟ್ಟಿ (Rishab Shetty) ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಇದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಅವರು ಮುಖಾಮುಖಿ ಆಗಿದ್ದು ಎಲ್ಲಿ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇತ್ತೀಚೆಗೆ ಸೈಮಾ ಅವಾರ್ಡ್​ ಕಾರ್ಯಕ್ರಮ ನಡೆದಿದೆ. ರಿಷಬ್ ಶೆಟ್ಟಿ, ಜೂನಿಯರ್ ಎನ್​ಟಿಆರ್ ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ರಿಷಬ್  ನಟನೆಯ ‘ಕಾಂತಾರ’ ಸಿನಿಮಾಗೆ 10 ಪ್ರಶಸ್ತಿ ಸಿಕ್ಕಿದೆ. ರಿಷಬ್ ಕೂಡ ಅವಾರ್ಡ್ ಗೆದ್ದಿದ್ದಾರೆ. ರಿಷಬ್ ವೇದಿಕೆ ಮೇಲೆ ಮಾತನಾಡುವಾಗ ಜೂನಿಯರ್ ಎನ್​ಟಿಆರ್​ಗೆ ಧನ್ಯವಾದ ಹೇಳಿದ್ದಾರೆ.

ರಿಷಬ್​ಗೆ ‘ಕಂಗ್ರಾಜ್ಯುಲೇಷನ್ಸ್’ ಎಂದರು ಜೂನಿಯರ್ ಎನ್​ಟಿಆರ್. ಆ ಬಳಿಕ ಅಕುಲ್ ಬಾಲಾಜಿ ಅವರು ಜೂನಿಯರ್ ಎನ್​ಟಿಆರ್ ಬಳಿ ತೆರಳಿ, ‘ನಿಮ್ಮ ಬಾಯಲ್ಲಿ ಕನ್ನಡ ಕೇಳೋಕೆ ಖುಷಿ ಆಗುತ್ತದೆ. ಮನೆಯಲ್ಲಿ ಹೀಗೆಯೇ ಮಾತನಾಡೋದಾ’ ಎಂದು ಕೇಳಿದರು. ‘ಅಮ್ಮನ ಜೊತೆ ನಾನು ಹೀಗೆಯೇ ಮಾತನಾಡೋದು’ ಎಂದರು ಜೂನಿಯರ್ ಎನ್​ಟಿಆರ್.

ಇದನ್ನೂ ಓದಿ: ‘ಹ್ಯಾಪಿ ಬರ್ತ್​ಡೇ ಸೈಫ್​ ಸರ್​..’: ಸೈಫ್​ ಅಲಿ ಖಾನ್​ಗೆ ಜನ್ಮದಿನದ ಶುಭ ಕೋರಿದ ಜೂನಿಯರ್​ ಎನ್​ಟಿಆರ್​

‘ನೀವು ತುಂಬಾ ಚೆನ್ನಾಗಿ ಕನ್ನಡ ಮಾತನಾಡ್ತೀರ’ ಎಂದು ಜೂನಿಯರ್ ಎನ್​ಟಿಆರ್ ಅವರನ್ನು ಹೊಗಳಿದರು ಅಕುಲ್. ‘ಅವರು (ರಿಷಬ್) ಕನ್ನಡ ಮಾತಾಡಿದ್ಮೇಲೆ ನಮ್ಮದೆಲ್ಲ ಎಲ್ಲಿ’ ಎಂದರು ಜೂ. ಎನ್​ಟಿಆರ್​. ಆಗ ವೇದಿಕೆ ಮೇಲಿದ್ದ ರಿಷಬ್ ಮಾತು ಆರಂಭಿಸಿದರು. ‘ನಿಮಗೆ ನೇರವಾಗಿ ಸಿಕ್ಕಿ ಧನ್ಯವಾದ ಹೇಳೋಕೆ ಚಾನ್ಸ್ ಸಿಗಲೇ ಇಲ್ಲ. ಕಿರಿಕ್ ಪಾರ್ಟಿ ಸಿನಿಮಾ ಸೈಮಾ ಗೆದ್ದಾಗ ನಮಗೆ ಅವಾರ್ಡ್​ ನೀಡಿದ್ದು ನೀವೇ ಆಗಿತ್ತು. ನಿಮ್ಮ ತಾಯಿ ಊರು, ನಮ್ಮ ಊರು ಎರಡೂ ಒಂದೇ. ಹೀಗಾಗಿ, ನೀವು ಆಂಧ್ರದವರು ಅನಿಸುವುದೇ ಇಲ್ಲ. ನಿಮ್ಮದು ಕುಂದಾಪುರ ಎನ್ನುವುದೇ ನನ್ನ ಭಾವನೆ’ ಎಂದರು ರಿಷಬ್ ಶೆಟ್ಟಿ. ಈ ವೇಳೆ ಜೂನಿಯರ್ ಎನ್​ಟಿಆರ್ ಮನಃಪೂರ್ತಿಯಾಗಿ ನಕ್ಕರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ