AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಪೀಟೇಶನ್ ಜಗತ್ತಲ್ಲೂ 50 ದಿನ ಪೂರೈಸಿದ ‘ಕನ್ನೇರಿ’: ಕಾರಣಕರ್ತರಿಗೆ ಚಿತ್ರತಂಡದಿಂದ ಧನ್ಯವಾದ

ಉತ್ತರ ಕರ್ನಾಕಟದ ಮಂದಿ ಸಿನಿಮಾವನ್ನು ಉಳಿಸಿ ಬೆಳೆಸುವುದರಲ್ಲಿ ಸದಾ ಮುಂದು. ಈಗ ಕನ್ನೇರಿಗೂ ಅದೇ ಪ್ರೀತಿ ತೋರಿದ್ದಾರೆ. ರಾಯಬಾಗದ ದತ್ತ ಚಿತ್ರಮಂದಿರದಲ್ಲಿ 50 ದಿನಗಳನ್ನು ಪೂರೈಸಿದೆ.

ಕಾಂಪೀಟೇಶನ್ ಜಗತ್ತಲ್ಲೂ 50 ದಿನ ಪೂರೈಸಿದ 'ಕನ್ನೇರಿ': ಕಾರಣಕರ್ತರಿಗೆ ಚಿತ್ರತಂಡದಿಂದ ಧನ್ಯವಾದ
ಕನ್ನೇರಿ
TV9 Web
| Edited By: |

Updated on: Apr 25, 2022 | 8:15 PM

Share

ಇವತ್ತು ಸಿನಿಮಾ ಮಾಡುವುದು ಕಷ್ಟ ಎನಿಸಿಕೊಳ್ಳುವುದಕ್ಕಿಂತ, ಆ ಸಿನಿಮಾವನ್ನು ಜನರಿಗೆ ತಲುಪಿಸುವುದು ಸುಲಭ ಎನಿಸುತ್ತಿಲ್ಲ. ಕಳೆದ ಐದಾರು ವರ್ಷಗಳ ಹಿಂದೆ ಸಿನಿಮಾವೊಂದು ವಾರಾನುಗಟ್ಟಲೇ ಥಿಯೇಟರ್ ನಲ್ಲಿ ಉಳಿದುಕೊಳ್ಳುತ್ತಿತ್ತು. ಬಾಯಿಂದ ಬಾಯಿಗೆ ಪ್ರಮೋಷನ್ ಆಗಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುತ್ತಿತ್ತು. ಆದರೆ ಈಗಿನ ಸ್ಥಿತಿ ಹೇಗಿದೆ ಎಂದರೆ ಬಾಯಿಂದ ಬಾಯಿಗೆ ಸಿನಿಮಾ ಬಗ್ಗೆ ಪ್ರಮೋಷನ್ ಆಗುವುದರೊಳಗೆ ಸಿನಿಮಾ ಆ ಥಿಯೇಟರ್ ನಲ್ಲಿ ಇರುವುದೇ ಇಲ್ಲ. ಮತ್ಯಾವುದೊ ಹೊಸ ಸಿನಿಮಾ ಆ ಜಾಗವನ್ನು ಆಕ್ರಮಿಸಿಕೊಂಡಿರುತ್ತದೆ. ಪರಿಸ್ಥಿತಿಯೂ ಅದೇ ರೀತಿ ಇದೆ.

ವಾರಕ್ಕೆ ಏನಿಲ್ಲ ಎಂದರು 9-10 ಸಿನಿಮಾಗಳು ತೆರೆಗೆ ಅಪ್ಪಳಿಸಿದರೆ ವಾರವಾದ ಮೇಲೂ ಉಳಿದುಕೊಳ್ಳುವುದು ಬೆರಳೆಣಿಕೆಯಷ್ಟು. ಇನ್ನು ಯಶಸ್ವಿ ಪಯಣ ಸಾಗಿಸುವುದು ಅದರಲ್ಲೂ ಕಡಿಮೆ. ಆದರೆ ಈ ಎಲ್ಲಾ ಕಾಂಪಿಟೇಷನ್ ನಲ್ಲೂ ಕನ್ನೇರಿ ಗೆದ್ದು ಬೀಗಿದೆ. ಜನಕ್ಕೆ ಕಥೆ ಇಷ್ಟವಾಗಿ ಬಿಟ್ಟರೆ ಸಿನಿಮಾಗೆ ಡಿಮ್ಯಾಂಡ್ ಬರುವುದು ಗ್ಯಾರಂಟಿ ಅಂತಾರಲ್ಲ ಹಂಗೆ ಆಗಿದೆ. ನೈಜ ಘಟನೆಯನ್ನು ಜನ ಅಪ್ಪಿ ಒಪ್ಪಿದ ಕನ್ನೇರಿಗೀಗ 50 ದಿನಗಳ ಸಂಭ್ರಮ.

ಉತ್ತರ ಕರ್ನಾಕಟದ ಮಂದಿ ಸಿನಿಮಾವನ್ನು ಉಳಿಸಿ ಬೆಳೆಸುವುದರಲ್ಲಿ ಸದಾ ಮುಂದು. ಈಗ ಕನ್ನೇರಿಗೂ ಅದೇ ಪ್ರೀತಿ ತೋರಿದ್ದಾರೆ. ರಾಯಬಾಗದ ದತ್ತ ಚಿತ್ರಮಂದಿರದಲ್ಲಿ 50 ದಿನಗಳನ್ನು ಪೂರೈಸಿದೆ. ಈ ಪಯಣದ ಯಶಸ್ಸನ್ನು ಚಿತ್ರತಂಡ ಪ್ರೇಕ್ಷಕರ ಪ್ರೀತಿ ಜೊತೆಗೆ ಆಚರಿಸಿದ್ದಾರೆ. ದತ್ತ ಥಿಯೇಟರ್ ನಲ್ಲಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಕನ್ನೇರಿ ಸಿನಿಮಾ ಮಹಿಳಾ ಪ್ರಧಾನವಾಗಿದ್ದು, ಕಾಡಿನಲ್ಲೇ ನೆಮ್ಮದಿ ಕಂಡುಕೊಂಡು, ಕಾಡನ್ನೇ ಅದ್ಭುತ ಪ್ರಪಂಚ ಎಂದುಕೊಂಡಿದ್ದ ಬುಡಕಟ್ಟು ಮಂದಿಯನ್ನು ಒಕ್ಕಲೆಬ್ಬಿಸಿದ ಕಥೆ ಇದು. ಈ ನೈಜಕಥೆಯನ್ನು ನಿರ್ದೇಶಕ ನೀನಾಸಂ ಮಂಜು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಕ್ಕಲೆಬ್ಬಿಸಿದ ಬಳಿಕ ಅಲ್ಲಿನ ಜನರ ಸ್ಥಿತಿಗತಿ, ಮುಖ್ಯವಾಗಿ ಹೆಣ್ಣುಮಕ್ಕಳ ಸ್ಥಿತಿ ಏನಾಯಿತು ಎಂಬೆಲ್ಲಾ ವಿಚಾರಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಸದ್ಯ ರಾಜ್ಯಾದ್ಯಂತ 10 ಥಿಯೇಟರ್ ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ಓಟಿಟಿಗೂ ಬರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಚಿತ್ರದಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ ಒಳಗೊಂಡ ಅನುಭವಿ ಕಲಾವಿದರ ಅಭಿನಯವಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ: 50ನೇ ದಿನದತ್ತ ‘ಕನ್ನೇರಿ’ ಗೆಲುವಿನ ಹೆಜ್ಜೆ

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ