Kichcha Sudeep: ‘ಹಾರದ ಜತೆ ಮೊಟ್ಟೆಯೂ ಬರುತ್ತೆ’; ರಶ್ಮಿಕಾ ಕುರಿತ ಟ್ರೋಲ್​​ಗೆ ಕಿಚ್ಚ ಸುದೀಪ್ ಕೊಟ್ರು ಖಡಕ್ ಪ್ರತಿಕ್ರಿಯೆ

Rashmika Mandanna: ರಶ್ಮಿಕಾ ಅವರನ್ನು ಎಷ್ಟೇ ಟ್ರೋಲ್ ಮಾಡಿದರೂ ಅವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಿತ್ಯ ಒಂದೊಂದೇ ಹೆಜ್ಜೆ ಮೇಲಕ್ಕೆ ಏರುತ್ತಿದ್ದಾರೆ. ಹಲವು ಚಿತ್ರಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.

Kichcha Sudeep: ‘ಹಾರದ ಜತೆ ಮೊಟ್ಟೆಯೂ ಬರುತ್ತೆ’; ರಶ್ಮಿಕಾ ಕುರಿತ ಟ್ರೋಲ್​​ಗೆ ಕಿಚ್ಚ ಸುದೀಪ್ ಕೊಟ್ರು ಖಡಕ್ ಪ್ರತಿಕ್ರಿಯೆ
ರಶ್ಮಿಕಾ-ಸುದೀಪ್​
Edited By:

Updated on: Jan 04, 2023 | 11:34 AM

ರಶ್ಮಿಕಾ ಮಂದಣ್ಣಗೂ (Rashmika Mandanna) ಟ್ರೋಲ್​​ಗೂ ಎಲ್ಲಿಲ್ಲದ ನಂಟು. ಅವರನ್ನು ಟೀಕಿಸೋಕೆ ಒಂದು ವರ್ಗದ ಜನರು ಕಾದು ಕುಳಿತಿರುತ್ತಾರೆ. ‘ಕಾಂತಾರ ಸಿನಿಮಾ ವೀಕ್ಷಿಸಿಲ್ಲ’ ಎಂದು ರಶ್ಮಿಕಾ ನವೆಂಬರ್​ನಲ್ಲಿ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ರಶ್ಮಿಕಾ ಅವರ ಹೇಳಿಕೆ ಇಟ್ಟುಕೊಂಡು ಅನೇಕರು ಮನಬಂದಂತೆ ಟೀಕೆ ಮಾಡಿದ್ದರು. ‘ರಶ್ಮಿಕಾಗೆ ಕನ್ನಡದ ಬಗ್ಗೆ ಗೌರವ ಇಲ್ಲ’ ಎಂದು ಅನೇಕರು ಟೀಕಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಈಗ ಕಿಚ್ಚ ಸುದೀಪ್ (Kichcha Sudeep) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕು’ ಎಂದು ಅವರು ಹೇಳಿದ್ದಾರೆ.

ಇಂಡಿಯಾಗ್ಲಿಟ್ಜ್​​ ತೆಲುಗಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್​, ‘ಜಗತ್ತನ್ನು ಹೇಗೆ ಬದಲಾಯಿಸಲು ಸಾಧ್ಯ? 15-20 ವರ್ಷಗಳ ಹಿಂದೆ ಮಾಧ್ಯಮದವರು ನಮ್ಮನ್ನು ಸಂದರ್ಶನ ಮಾಡುತ್ತಿದ್ದರು. ಆಗಿನ ಕಾಲಕ್ಕೆ ಅದು ಹೊಸದು. ಡಾ.ರಾಜ್​ಕುಮಾರ್ ಅವರ ಕಾಲದಲ್ಲಿ ದೂರದರ್ಶನ ಮತ್ತು ಪೇಪರ್ ಬಿಟ್ಟು ಬೇರೆ ಯಾವುದೂ ಇರುತ್ತಿರಲಿಲ್ಲ’ ಎಂದಿದ್ದಾರೆ ಸುದೀಪ್.

‘ಅಂದಿನ ಕಾಲವೇ ಚೆನ್ನಾಗಿತ್ತು ಎಂದು ಹೇಳುವುದೆಲ್ಲ ತಪ್ಪು. ನಾವು ಇದನ್ನು ನಿರ್ವಹಣೆ ಮಾಡುವುದನ್ನು ಕಲಿಯಬೇಕಿದೆ. ಪಬ್ಲಿಕ್ ಫಿಗರ್ ಆದೆವು ಎಂದರೆ ಹೂವಿನ ಮಾಲೆಯ ಜತೆಗೆ ಮೊಟ್ಟೆ, ಟೊಮ್ಯಾಟೋ ಹಾಗೂ ಕಲ್ಲುಗಳು ಕೂಡ ನಮ್ಮ ಕಡೆ ಬರುತ್ತವೆ’ ಎಂದಿದ್ದಾರೆ ಸುದೀಪ್​.

ಇದನ್ನೂ ಓದಿ
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಇದನ್ನೂ ಓದಿ:  ಸ್ಥಳ ಒಂದೇ, ಫೋಟೋ ಬೇರೆ; ವೈರಲ್ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ಫೋಟೋ

ರಶ್ಮಿಕಾ ಅವರನ್ನು ಎಷ್ಟೇ ಟ್ರೋಲ್ ಮಾಡಿದರೂ ಅವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಿತ್ಯ ಒಂದೊಂದೇ ಹೆಜ್ಜೆ ಮೇಲಕ್ಕೆ ಏರುತ್ತಿದ್ದಾರೆ. ಹಲವು ಚಿತ್ರಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರ ನಟನೆಯ ‘ವಾರಿಸು’ ಸಿನಿಮಾ ಜನವರಿ 12ರಂದು ರಿಲೀಸ್ ಆಗುತ್ತಿದೆ. ಹಲವು ಆಫರ್​​ಗಳು ಅವರನ್ನು ಹುಡುಕಿ ಬರುತ್ತಿವೆ.

ಸುದೀಪ್ ಮುಂದಿನ ಚಿತ್ರದ ಬಗ್ಗೆ ಕುತೂಹಲ

ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. 2022ರಲ್ಲಿ ತೆರೆಗೆ ಬಂದ ‘ವಿಕ್ರಾಂತ್ ರೋಣ’ ಸಿನಿಮಾ ಬಳಿಕ ಅವರ ಯಾವುದೇ ಚಿತ್ರ ಘೋಷಣೆ ಆಗಿಲ್ಲ. ಲೈಕಾ ಪ್ರೊಡಕ್ಷನ್ ಜತೆ ಸುದೀಪ್ ಹೊಸ ಚಿತ್ರಕ್ಕೆ ಸಹಿ ಹಾಕಲಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:12 am, Wed, 4 January 23