ಟಾಲಿವುಡ್​ನಲ್ಲಿ ಕಿಚ್ಚ ಸುದೀಪ್ ಫೇವರಿಟ್ ಹೀರೋಯಿನ್ ಯಾರು ಗೊತ್ತಾ?

ಕಿಚ್ಚ ಸುದೀಪ್ ಅವರ ಹಳೆಯ ಸಂದರ್ಶನದ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಅವರು ತಮ್ಮ ನೆಚ್ಚಿನ ನಟಿಯರ ಬಗ್ಗೆ ಮಾತನಾಡಿದ್ದಾರೆ. ಸಮಂತಾ, ನಯನತಾರಾ, ಸಾಯಿ ಪಲ್ಲವಿ ಮತ್ತು ತಮನ್ನಾ ಅವರಲ್ಲಿ ಸಮಂತಾ ಅವರನ್ನು ತಮ್ಮ ನೆಚ್ಚಿನ ನಟಿ ಎಂದು ಹೇಳಿದ್ದಾರೆ.

ಟಾಲಿವುಡ್​ನಲ್ಲಿ ಕಿಚ್ಚ ಸುದೀಪ್ ಫೇವರಿಟ್ ಹೀರೋಯಿನ್ ಯಾರು ಗೊತ್ತಾ?
ಸುದೀಪ್
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 25, 2024 | 7:50 AM

ಕಿಚ್ಚ ಸುದೀಪ್ ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಅವರು ಸದ್ಯ ತಾಯಿ ಕಳೆದುಕೊಂಡ ಶೋಕದಲ್ಲಿ ಇದ್ದಾರೆ. ಈ ದುಃಖಕ್ಕೆ ಅನೇಕರು ಜೊತೆಯಾಗಿದ್ದಾರೆ. ಟಾಲಿವುಡ್​ನವರು ಕೂಡ ಸುದೀಪ್​ಗೆ ಹೆಗಲು ಕೊಟ್ಟಿದ್ದಾರೆ. ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರು ಕನ್ನಡದಲ್ಲೇ ಟ್ವೀಟ್ ಮಾಡಿ ಧೈರ್ಯ ತುಂಬಿದ್ದಾರೆ. ಈಗ ಸುದೀಪ್ ಅವರ ಒಂದು ಹಳೆಯ ವಿಡಿಯೋದ ಬಗ್ಗೆ ನೋಡೋಣ. ಹಾಗಂತ ಇದು ಅವರ ತಾಯಿಗೆ ಸಂಬಂಧಿಸಿದ ವಿಡಿಯೋ ಅಲ್ಲ.

ಸುದೀಪ್ ಅವರು ಈ ಮೊದಲು ಸಾಕಷ್ಟು ಸಂದರ್ಶನಗಳನ್ನು ನೀಡಿದ್ದರು. ಈ ಸಂದರ್ಶನದ ಪೈಕಿ ಒಂದು ಸಂದರ್ಶನವು ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಸುದೀಪ್ ತಮ್ಮಿಷ್ಟದ ಹೀರೋಯಿನ್​ಗಳ ಬಗ್ಗೆ ಮಾತನಾಡಿದ್ದರು. ಅವರಿಗೆ ಆಯ್ಕೆಗಳೆಲ್ಲವೂ ಇದ್ದಿದ್ದು ತೆಲುಗು ಹಾಗೂ ತಮಿಳು ಹೀರೋಯಿನ್​ಗಳ ಹೆಸರೇ ಆಗಿತ್ತು. ಇದರಲ್ಲಿ ಅವರು ಒಂದು ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು.

‘ಸಮಂತಾ, ನಯನತಾರಾ, ಸಾಯಿ ಪಲ್ಲವಿ ಅಥವಾ ತಮನ್ನಾ. ಇವರಲ್ಲಿ ನಿಮ್ಮ ಫೇವರಿಟ್​ ಯಾರು’ ಎಂದು ಕೇಳಲಾಯಿತು. ಇದಕ್ಕೆ ಸಮಂತಾ ಹೆಸರನ್ನು ಆಯ್ಕೆ ಮಾಡಿಕೊಂಡರು ಸುದೀಪ್. ‘ಸಮಂತಾ ಯಾವಾಗಲೂ ನನ್ನ ಫೇವರಿಟ್. ಅವರು ಸ್ವೀಟ್ ಹುಡುಗಿ. ನಾನು ಅವರ ಸಿನಿಮಾ ನೋಡಿದ್ದೇನೆ. ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರು ತಮ್ಮನ್ನು ತಾವು ಒಳ್ಳೆಯ ರೀತಿಯಲ್ಲಿ ಕಾಯ್ದುಕೊಂಡಿದ್ದಾರೆ’ ಎಂದು ಸುದೀಪ್ ಅವರು ಹೇಳಿಕೊಂಡಿದ್ದರು. ಕೆಲವರು ಈ ವಿಡಿಯೋನ ವೈರಲ್ ಮಾಡಿದ್ದಾರೆ.

ಸುದೀಪ್ ಹಾಗೂ ಸಮಂತಾ ಮಧ್ಯೆ ಒಂದು ಫ್ರೆಂಡ್​ಶಿಪ್ ಬೆಳೆಯಲು ಕಾರಣ ‘ಈಗ’ ಚಿತ್ರ. ಎಸ್​ಎಸ್​ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಹಾಗೂ ಸಮಂತಾ ಒಟ್ಟಾಗಿ ನಟಿಸಿದ್ದರು. ಸುದೀಪ್ ವಿಲನ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ಈ ಚಿತ್ರದುದ್ದಕ್ಕೂ ಸಮಂತಾ ಹಾಗೂ ಸುದೀಪ್ ಮಧ್ಯೆ ಹಲವು ದೃಶ್ಯಗಳು ಇವೆ. ಈ ಕಾರಣಕ್ಕೆ ಸೆಟ್​ನಲ್ಲಿ ಇವರ ಮಧ್ಯೆ ಗೆಳೆತನ ಬೆಳೆದಿದೆ ಎಂದು ಹೇಳಬಹುದು. ಆ ಗೆಳೆತನ ಈಗಲೂ ಉಳಿದುಕೊಂಡಿದೆ ಎಂದು ಹೇಳಬಹುದು.

ಇದನ್ನೂ ಓದಿ: ಸುದೀಪ್ ಎಚ್ಚರಿಕೆ ನೀಡಿದ ಮೇಲೂ ಉದ್ಧಟತನ ಮುಂದುವರಿಸಿದ ಚೈತ್ರಾ ಕುಂದಾಪುರ

ಸುದೀಪ್ ತಾಯಿ ಸರೋಜಾ ಅವರು ಇತ್ತೀಚೆಗೆ ನಿಧನ ಹೊಂದಿದರು. ಈ ನೋವಲ್ಲಿ ಸುದೀಪ್ ಇದ್ದಾರೆ. ಅವರು ಬಿಗ್ ಬಾಸ್​ನ ನಡೆಸಿಕೊಡೋಕೆ ಬರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಈ ಪ್ರಶ್ನೆಗೆ ಶನಿವಾರ ಉತ್ತರ ಸಿಗಲಿದೆ ಎಂದು ಹೇಳಬಹುದು. ಈ ಮಧ್ಯೆ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:40 am, Fri, 25 October 24

ಬೆಂಗಳೂರು, ಒಂದಾದಮೇಲೊಂದು ಕಟ್ಟಡ ಕುಸಿಯುವ ಭೀತಿ: ಮತ್ತೊಂದು ಕಟ್ಟಡ ಬಿರುಕು
ಬೆಂಗಳೂರು, ಒಂದಾದಮೇಲೊಂದು ಕಟ್ಟಡ ಕುಸಿಯುವ ಭೀತಿ: ಮತ್ತೊಂದು ಕಟ್ಟಡ ಬಿರುಕು
ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ