AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಂದು ನೋಡ್ಕಂಡು ಹೋಗೋ ಕಂದ’; ಪುನೀತ್ ನಿಧನದ ಬಳಿಕವೂ ಪರಿಪರಿಯಾಗಿ ಕೇಳಿದ್ದ ನಾಗಮ್ಮ

ರಾಜಕುಮಾರ್ ಅವರ ಸಹೋದರಿ ನಾಗಮ್ಮ ಅವರು ಪುನೀತ್ ರಾಜಕುಮಾರ್ ಅವರನ್ನು ನೋಡುವ ಆಸೆ ಹೊಂದಿದ್ದರು.ಪುನೀತ್ ಅವರ ನಿಧನದ ಸುದ್ದಿಯನ್ನು ಅವರಿಂದ ಮುಚ್ಚಿಡಲಾಗಿತ್ತು. ನಾಗಮ್ಮ ಅವರ ಅಂತ್ಯಕ್ರಿಯೆ ಗಾಜನೂರಿನಲ್ಲಿ ನಡೆಯಲಿದೆ. ನಾಗಮ್ಮ ಅವರ ಪುನೀತ್ ಅವರ ಮೇಲಿನ ಅಪಾರ ಪ್ರೀತಿ ಮತ್ತು ಅವರ ಕೊನೆಯ ಆಸೆಯು ಈಗ ವೈರಲ್ ಆಗಿರುವ ಒಂದು ವೀಡಿಯೊದಲ್ಲಿ ಸ್ಪಷ್ಟವಾಗಿದೆ.

‘ಬಂದು ನೋಡ್ಕಂಡು ಹೋಗೋ ಕಂದ’; ಪುನೀತ್ ನಿಧನದ ಬಳಿಕವೂ ಪರಿಪರಿಯಾಗಿ ಕೇಳಿದ್ದ ನಾಗಮ್ಮ
ನಾಗಮ್ಮ-ಪುನೀತ್
ರಾಜೇಶ್ ದುಗ್ಗುಮನೆ
|

Updated on: Aug 02, 2025 | 2:42 PM

Share

ರಾಜ್​ಕುಮಾರ್ ಸಹೋದರಿ ನಾಗಮ್ಮ (Nagamma) ಅವರು ಶುಕ್ರವಾರ (ಆಗಸ್ಟ್ 1) ನಿಧನ ಹೊಂದಿದ್ದಾರೆ. ಇಂದು (ಆಗಸ್ಟ್ 2) ಗಾಜನೂರಿನಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಪುನೀತ್ ಕಂಡರೆ ನಾಗಮ್ಮನಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಪುನೀತ್ ತಮ್ಮನ್ನು ನೋಡಲು ಬರುತ್ತಿಲ್ಲ ಎಂಬ ಕೊರಗು ಅವರನ್ನು ಬಹುವಾಗಿ ಕಾಡಿತ್ತು. ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು ಎಂಬ ಕಾರಣಕ್ಕೆ ಪುನೀತ್ ನಿಧನ ವಾರ್ತೆ ಬಗ್ಗೆ ನಾಗಮ್ಮಗೆ ಯಾರೂ ಹೇಳಿರಲಿಲ್ಲ. ಈಗ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.

ಮಾರ್ಚ್ 17ರಂದು ಪುನೀತ್ ಜನ್ಮದಿನ. ಅವರು ಬದುಕಿದ್ದರೆ ಈ ವರ್ಷ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಈ ವೇಳೆ ನಾಗಮ್ಮ ಮಾತನಾಡಿದ್ದರು. ‘ಅಪ್ಪು, ನಿನಗೆ 50 ವರ್ಷ. ಚೆನ್ನಾಗಿದೀಯಾ ಮಗನೆ’ ಎಂದು ಭಾವುಕರಾಗಿ ಮಾತು ಆರಂಭಿಸಿದ್ದರು ನಾಗಮ್ಮ.

ಇದನ್ನೂ ಓದಿ
Image
ಸಮಂತಾ ಕೈಯಲ್ಲಿ ಹೊಸ ಉಂಗುರ; ಹುಟ್ಟಿತು ನಿಶ್ಚಿತಾರ್ಥದ ಚರ್ಚೆ
Image
‘ಕೊತ್ತಲವಾಡಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?
Image
ಗಂಟೆಗೆ 11 ಸಾವಿರ ಟಿಕೆಟ್ ಮಾರಿದ ಸು ಫ್ರಮ್ ಸೋ; ಶುಕ್ರವಾರ ದಾಖಲೆ ಕಲೆಕ್ಷನ್
Image
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಇದನ್ನೂ ಓದಿ: ಅಪ್ಪುಗಾಗಿ ಕಾದಿದ್ದ ಅಣ್ಣಾವ್ರ ಸಹೋದರಿ ನಾಗಮ್ಮತ್ತೆ ನಿಧನ

‘ಭೂಮಿಗೆ ಬಂದ ಭಗವಂತ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ವಿದೇಶಿಗರು ಬಂದು ಫೋಟೋ ತೆಗೆಸಿಕೊಂಡರು. ಕೆಲವರು ಕಾಲಿಗೆ ನಮಸ್ಕಾರ ಮಾಡಿದರು. ದೇವರು, ದೇವರು ಎಂದರು. ಅವತ್ತು ಶೂಟಿಂಗ್ ಮಾಡಲೇ ಇಲ್ಲ. ಫೋಟೋ ತೆಗೆದುಕೊಳ್ಳುವುದರಲ್ಲೇ ಆಯ್ತು’ ಎಂದು ಹಳೆಯ ಘಟನೆ ಹೇಳಿದ್ದರು ನಾಗಮ್ಮ. ‘ಒಮ್ಮೆ ಬಂದು ನೋಡ್ಕಂಡು ಹೋಗು ಕಂದಾ. ನೋಡಿ ಬಿಡ್ತೀನಿ. ಇನ್ನೂ ನಿನ್ನ ಮಗು ಎಂದುಕೊಂಡಿದ್ದೇನೆ’ ಎಂದು ನಾಗಮ್ಮ ಹೇಳಿದ ವಿಡಿಯೋನ ಈಗ ವೈರಲ್ ಮಾಡಲಾಗುತ್ತಿದೆ.

ನಾಗಮ್ಮ ಅವರು  ಗಾಜನೂರಿನಲ್ಲಿ ವಾಸವಿದ್ದರು. ಅವರಿಗೆ ಬಹಳವೇ ವಯಸ್ಸಾಗಿತ್ತು. ಸರಿಯಾಗಿ ಎದ್ದು ಓಡಾಡುವುದು ಕಷ್ಟ ಆಗಿತ್ತು. ಪುನೀತ್ ನೋಡಬೇಕು ಎಂಬುದು ಅವರ ಬಯಕೆ ಆಗಿತ್ತು. ಆದರೆ, ಈ ಬಯಕೆ ಈಡೇರದೆ ಅವರು ನಿಧನ ಹೊಂದಿದರು. ಪುನೀತ್ ಸತ್ತ ವಿಚಾರವನ್ನು ಹೇಳಿದ್ದರೆ ಅವರಿಗೆ ಅರಗಿಸಿಕೊಳ್ಳುವ ಶಕ್ತಿ ಇಲ್ಲ ಎಂಬುದು ಕುಟುಂಬಕ್ಕೆ ಸ್ಪಷ್ಟವಾಗಿತ್ತು. ಹೀಗಾಗಿ, ವಿಚಾರವನ್ನು ಮುಚ್ಚಿಡಲಾಗಿದೆ. ಒಂದು ಗಾಜನೂರಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಇಡೀ ಕುಟುಂಬದವರು ಭಾಗಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ