‘ಕಾಂತಾರ: ಚಾಪ್ಟರ್ 1’ ಸಿನಿಮಾ ಗೆಲ್ಲಲು ಪುನೀತ್ ಆಶೀರ್ವಾದವೂ ಕಾರಣ; ಹಳೆಯ ವಿಡಿಯೋ ವೈರಲ್

‘ಕಾಂತಾರ’ ಸಿನಿಮಾದ ಕಥೆ ಮೊದಲು ರೆಡಿ ಆಗಿತ್ತು. ರಿಷಬ್ ಶೆಟ್ಟಿ ಅವರು ಇದನ್ನು ನಿರ್ದೇಶನ ಮಾಡುವ ಉದ್ದೇಶ ಹೊಂದಿದ್ದರು. ಆರಂಭದಲ್ಲಿ ಅವರಿಗೆ ತಾವೇ ನಟಿಸುವ ಆಲೋಚನೆ ಇರಲೇ ಇಲ್ಲ. ಈ ಕಾರಣದಿಂದಲೇ ಅವರು ಸಿನಿಮಾಗೆ ಪುನೀತ್ ರಾಜ್​ಕುಮಾರ್ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ಏನಾಯಿತು ಎಂಬುದನ್ನು ಪ್ರಗತಿ ಅವರು ವಿವರಿಸಿದ್ದರು.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಗೆಲ್ಲಲು ಪುನೀತ್ ಆಶೀರ್ವಾದವೂ ಕಾರಣ; ಹಳೆಯ ವಿಡಿಯೋ ವೈರಲ್
ರಿಷಬ್-ಪುನೀತ್
Edited By:

Updated on: Oct 07, 2025 | 6:15 AM

‘ಕಾಂತಾರ: ಚಾಪ್ಟರ್ 1’ ಸಿನಿಮಾ ದೊಡ್ಡ ಗೆಲುವನ್ನು ಕಂಡಿದೆ. ಈ ಚಿತ್ರದಿಂದ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಗೆಲುವಿನ ಸಿಹಿಯನ್ನು ಸವಿದಿದ್ದಾರೆ. ಹೀಗಿರುವಾಗಲೇ ಪ್ರಗತಿ ಶೆಟ್ಟಿ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ‘ಕಾಂತಾರ ಸಿನಿಮಾದ ಕಥೆಯನ್ನು ಅಪ್ಪು ಮಾಡಬೇಕಿತ್ತು’ ಎಂದಿದ್ದರು. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರ ಗೆಲ್ಲಲು ಪುನೀತ್ ಆಶೀರ್ವಾದವೂ ಇದೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

‘ಕಾಂತಾರ’ ಸಿನಿಮಾದ ಕಥೆ ಮೊದಲು ರೆಡಿ ಆಗಿತ್ತು. ರಿಷಬ್ ಶೆಟ್ಟಿ ಅವರು ಇದನ್ನು ನಿರ್ದೇಶನ ಮಾಡುವ ಉದ್ದೇಶ ಹೊಂದಿದ್ದರು. ಆರಂಭದಲ್ಲಿ ಅವರಿಗೆ ತಾವೇ ನಟಿಸುವ ಆಲೋಚನೆ ಇರಲೇ ಇಲ್ಲ. ಈ ಕಾರಣದಿಂದಲೇ ಅವರು ಸಿನಿಮಾಗೆ ಪುನೀತ್ ರಾಜ್​ಕುಮಾರ್ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ಏನಾಯಿತು ಎಂಬುದನ್ನು ಪ್ರಗತಿ ಅವರು ವಿವರಿಸಿದ್ದರು.

ಇದನ್ನೂ ಓದಿ
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು
ಪುನೀತ್​ಗೆ ರಚಿತಾ ಅವಮಾನ ? ನಾಲಿಗೆ ಮೇಲೆ ಹಿಡಿತ ಇರಲಿ ಎಂದ ಫ್ಯಾನ್ಸ್
‘ಕಾಂತಾರ: ಚಾಪ್ಟರ್ 1’ ಚಿತ್ರದ ಭಾನುವಾರದ ಕಲೆಕ್ಷನ್ ಇಷ್ಟೊಂದಾ?
‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ

‘ಅಪ್ಪು ಸರ್ ಕಥೆ ಕೇಳಿದರು. ಕಥೆ ಇಷ್ಟಪಟ್ಟರು. ಅವರು ಡೇಟ್ಸ್ ಹೊಂದಾಣಿಕೆ ಮಾಡಲು ಸಾಧ್ಯವಾಗಿಲ್ಲ ಎಂದರು. ರಿಷಬ್ ಶೆಟ್ಟಿಗೆ ಪುಶ್ ಮಾಡೋ ಹಾಗೇ ಇರಲಿಲ್ಲ. ರಿಷಬ್ ಕಾಂಪ್ರಮೈಸ್ ಆಗಬೇಡಿ, ನೀವೇ ಮಾಡಿ ಎಂದು ಪುನೀತ್ ಹೇಳಿದ್ದರು. ಶೂಟಿಂಗ್ ನಡೆಯುವಾಗ ಪುನೀತ್ ಅವರು ರಿಷಬ್​ನ ಕರೆದು ಶೂಟಿಂಗ್ ಹೇಗೆ ಆಗುತ್ತಿದೆ? ಏನಕ್ಕೂ ಕಾಂಪ್ರಮೈಸ್ ಆಗಬೇಡಿ ಎಂಬುದಾಗಿ ಹೇಳಿದ್ದರು’ ಎಂದು ಪ್ರಗತಿ ಶೆಟ್ಟಿ ವಿವರಿಸಿದ್ದರು.

‘ಬಹುಶಃ ಅಪ್ಪು ಆಶೀರ್ವಾದ ಇದೆ ಎಂದು ಅನಿಸುತ್ತದೆ. ಪುನೀತ್ ಇದ್ದಿದ್ದರೆ ಖಂಡೀತವಾಗಿಯೂ ಕರೆದು ಶುಭಕೋರುತ್ತಿದ್ದರು’ ಎಂದು ಪ್ರಗತಿ ಶೆಟ್ಟಿ ಹೇಳಿದ್ದರು. ‘ಕಾಂತಾರ’ ಯಶಸ್ಸಿನ ಬಳಿಕ ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರವೂ ಗೆಲುವು ಕಂಡಿದೆ. ಅನೇಕರು ಇದಕ್ಕೆ ಪುನೀತ್ ಆಶೀರ್ವಾದ ಕೂಡ ಕಾರಣ ಎಂದು ಹೇಳುತ್ತಾ ಇದ್ದಾರೆ.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿ ಮಾತೇ ಬರದೆ ನಿಂತ ಅನುಪಮ್ ಖೇರ್

ಪುನೀತ್ ರಾಜ್​ಕುಮಾರ್ ಅವರು ಅನೇಕ ಸಂದರ್ಭದಲ್ಲಿ ರಿಷಬ್​ನ ಬೆಂಬಲಿಸಿದ್ದಿದೆ. ಅವರ ಚಿತ್ರಗಳನ್ನು ನೋಡಿ ಹೊಗಳಿದ್ದಾರೆ. ಈಗ ‘ಕಾಂತಾರ: ಚಾಪ್ಟರ್ 1’ ಗೆಲುವಿನ ಸಮಯದಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಈ ಸಿನಿಮಾ 220 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರೋದು ಗಮನಾರ್ಹ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us