Sign In

By signing in or creating an account, you agree with Associated Broadcasting Company's Terms & Conditions and Privacy Policy.

777 Charlie: ಶ್ವಾನ ಪ್ರೇಮಿಗಳೇ ಹುಷಾರ್​! ‘777 ಚಾರ್ಲಿ’ ಚಿತ್ರದ ಒಂದು ತಪ್ಪಿನಿಂದ ನಾಯಿಗಳಿಗೆ ಹೆಚ್ಚಬಹುದು ಸಂಕಷ್ಟ

777 Charlie | Stray Dog: ‘777 ಚಾರ್ಲಿ’ ಸಿನಿಮಾ ನೋಡಿದ ಬಳಿಕ ಬಹುತೇಕರಿಗೆ ವಿದೇಶಿ ತಳಿಯ ಶ್ವಾನಗಳ ಮೇಲೆ ಪ್ರೀತಿ ಉಕ್ಕುತ್ತಿದೆ. ಇದರಿಂದ ಚಿತ್ರದ ಆಶಯವೇ ಬುಡಮೇಲು ಆಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

777 Charlie: ಶ್ವಾನ ಪ್ರೇಮಿಗಳೇ ಹುಷಾರ್​! ‘777 ಚಾರ್ಲಿ’ ಚಿತ್ರದ ಒಂದು ತಪ್ಪಿನಿಂದ ನಾಯಿಗಳಿಗೆ ಹೆಚ್ಚಬಹುದು ಸಂಕಷ್ಟ
ರಕ್ಷಿತ್ ಶೆಟ್ಟಿ, ಚಾರ್ಲಿ
Follow us
TV9 Web
| Updated By: ಮದನ್​ ಕುಮಾರ್​

Updated on: Jun 20, 2022 | 1:44 PM

ಬಾಕ್ಸ್​ ಆಫೀಸ್​ನಲ್ಲಿ ‘777 ಚಾರ್ಲಿ’ (777 Charlie) ಸಿನಿಮಾ ಗೆದ್ದಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಪರಭಾಷೆಯ ಪ್ರೇಕ್ಷಕರು ಕೂಡ ಈ ಎಮೋಷನಲ್​ ಕಥೆಗೆ ಮನಸೋತಿದ್ದಾರೆ. ಶಾನ್ವ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ‘777 ಚಾರ್ಲಿ’ ಚಿತ್ರ ಯಶಸ್ವಿ ಆಗಿದೆ. ಇದರಿಂದ ನಟ/ನಿರ್ಮಾಪಕ ರಕ್ಷಿತ್ ಶೆಟ್ಟಿ (Rakshit Shetty) ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಕ್ಕಿದೆ. ಪ್ರೇಕ್ಷಕರಿಗೆ ಅವರ ಮೇಲೆ ಇದ್ದ ಅಭಿಮಾನ ಇನ್ನಷ್ಟು ಹೆಚ್ಚಿದೆ. ಚೊಚ್ಚಲ ನಿರ್ದೇಶನದಲ್ಲಿಯೇ ಕಿರಣ್​ ರಾಜ್​ (Director Kiran Raj) ಕೂಡ ಗಮನ ಸೆಳೆದಿದ್ದಾರೆ. ಇಷ್ಟೆಲ್ಲ ಮೆಚ್ಚುಗೆಗೆ ಪಾತ್ರವಾಗಿರುವ ಸಿನಿಮಾದಲ್ಲಿ ನಾಯಿಯೇ ಹೈಲೈಟ್​. ಆದರೆ ಈಗ ಶ್ವಾನಗಳಿಗೆ ಒಂದು ಸಮಸ್ಯೆ ಎದುರಾಗುವ ಸಂಭವ ಇದೆ. ಅದಕ್ಕೆ ಪರೋಕ್ಷವಾಗಿ ‘777 ಚಾರ್ಲಿ’ ಸಿನಿಮಾ ಕಾರಣ ಆಗುತ್ತಿದೆ ಎಂಬುದು ವಿಪರ್ಯಾಸ.

ಬೀದಿನಾಯಿಗಳನ್ನು ಸಾಕಿ, ಅವುಗಳಿಗೆ ಕಾಳಜಿ ತೋರಿಸಿ ಎಂಬ ಮೆಸೇಜ್​ ‘777 ಚಾರ್ಲಿ’ ಚಿತ್ರದಲ್ಲಿ ಇದೆ. ಆದರೆ ಇಡೀ ಸಿನಿಮಾದಲ್ಲಿ ಮಿಂಚಿರುವುದು ಲ್ಯಾಬ್ರಡಾರ್ ತಳಿಯ ನಾಯಿ. ಇದರ ಮುದ್ದು ಮೊಗಕ್ಕೆ ಜನರು ಮನಸೋತಿದ್ದಾರೆ. ಸಿನಿಮಾ ನೋಡಿದ ಬಳಿಕ ಬಹುತೇಕರು ಲ್ಯಾಬ್ರಡಾರ್ ಜಾತಿ ನಾಯಿಯನ್ನೇ ಸಾಕಲು ಆಸೆಪಡುತ್ತಿದ್ದಾರೆ. ಇದರಿಂದ ಬೀದಿನಾಯಿಗಳನ್ನು ಕೇಳುವವರೇ ಇಲ್ಲದಂತೆ ಆಗುತ್ತಿದೆ. ಹಾಗಾಗಿ ಚಿತ್ರದ ಆಶಯವೇ ಬುಡಮೇಲು ಆಗುತ್ತಿದೆಯಲ್ಲ ಎಂಬ ಪ್ರಶ್ನೆ ಎದುರಾಗಿದೆ.

ಎಲ್ಲರೂ ವಿದೇಶಿ ತಳಿಯ ನಾಯಿಯೇ ಬೇಕು ಎಂದು ಬಯಸುವುದರಿಂದ ಬೀದಿ ನಾಯಿಗೆ ಮಾತ್ರವಲ್ಲದೇ ಜಾತಿ ನಾಯಿಗಳಿಗೂ ಸಂಕಷ್ಟ ಎದುರಾಗುತ್ತದೆ. ಬೇಡಿಕೆ ಹೆಚ್ಚಿದಾಗ ಬೇಗ ಮರಿಗಳನ್ನು ಪಡೆಯಲು ಕೆಲವರು ಇನ್​ಬ್ರೀಡಿಂಗ್​ Inbreeding ಮಾಡಿಸುತ್ತಾರೆ. ಅದರಿಂದ ಸಿನಿಮಾದಲ್ಲಿ ತೋರಿಸಿದ ರೀತಿಯಲ್ಲೇ ಜಾತಿ ನಾಯಿಗಳಿಗೆ ಕ್ಯಾನ್ಸರ್​ ಮುಂತಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ
Image
777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾ​ರ್ಲಿಯ ಎಮೋಷನಲ್​ ಜರ್ನಿ; ಇಲ್ಲಿದೆ ವಿಮರ್ಶೆ
Image
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?
Image
777 Charlie: ಸುದ್ದಿಗೋಷ್ಠಿಗೆ ಚಾರ್ಲಿ ಶ್ವಾನಕ್ಕೆ ನೋ ಎಂಟ್ರಿ; ‘ಮನಸ್ಸು ಬದಲಾಗ್ಬೇಕು’ ಎಂದ ರಕ್ಷಿತ್​ ಶೆಟ್ಟಿ
Image
777 Charlie: ‘777 ಚಾರ್ಲಿ’ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ

‘777 ಚಾರ್ಲಿ’ ಸಿನಿಮಾದಲ್ಲಿಯೂ ಕಥಾನಾಯಕ ಲ್ಯಾಬ್ರಡಾರ್​ ಬದಲಿಗೆ ದೇಸಿ ತಳಿಯ ಬೀದಿ ನಾಯಿಯನ್ನೇ ಸಾಕುವಂತೆ ತೋರಿಸಿದ್ದರೆ ಜನರಿಗೆ ಹೆಚ್ಚು ಮನವರಿಕೆ ಆಗುತ್ತಿತ್ತು. ಆದರೆ ಈ ವಿಚಾರದಲ್ಲಿ ಚಿತ್ರತಂಡ ಪ್ರೇಕ್ಷಕರನ್ನು ಕೊಂಚ ದಾರಿತಪ್ಪಿಸಿದಂತೆ ಆಗುತ್ತಿದೆ. ವಿದೇಶಿ ತಳಿಯ ಜಾತಿ ನಾಯಿಯನ್ನು ವಿಜೃಂಭಿಸಿದ ಬಳಿಕ ಎಲ್ಲರೂ ಬೀದಿನಾಯಿಯನ್ನು ಸಾಕಬೇಕು ಎಂಬ ಸಂದೇಶ ಹೇಳಿದರೆ ಅದನ್ನು ಕೇಳುವವರ ಸಂಖ್ಯೆ ಕಡಿಮೆ ಎನಿಸುತ್ತದೆ.

ಕ್ಷಣಿಕ ಉತ್ಸಾಹಕ್ಕೆ ಸಾಕದಿರಿ:

ಒಂದು ವೇಳೆ ವಿದೇಶಿ ತಳಿಯ ನಾಯಿಯನ್ನೇ ಸಾಕುವುದಾದರೂ ಕೂಡ ಅದಕ್ಕೂ ಮುನ್ನ ಸರಿಯಾಗಿ ಆಲೋಚಿಸಬೇಕು. ಸಿನಿಮಾ ನೋಡಿದ ಬಳಿಕ ನಾಯಿ ಸಾಕಬೇಕು ಎಂಬ ಉತ್ಸಾಹ ಏಕಾಏಕಿ ಮೂಡಬಹುದು. ಆದರೆ ಕೊನೆವರೆಗೂ ಅದನ್ನು ತುಂಬ ಕಾಳಜಿಯಿಂದ ನೋಡಿಕೊಳ್ಳುವ ತಾಳ್ಮೆ ನಿಮ್ಮಲ್ಲಿ ಇರಬೇಕು. ನಾಯಿಗೆ ಅಗತ್ಯವಾದಷ್ಟು ಸಮಯ ನೀಡಬೇಕು. ಇಲ್ಲದಿದ್ದರೆ ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​