Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣಿವೆ, ಕಾಡು, ಸಮುದ್ರದ ಪಕ್ಕ ಮನೆ, ನದಿ ಸಮೀಪ ತೋಟ; ನನಸಾಗಿದೆ ಪ್ರಕಾಶ್ ರೈ ಕನಸು

ಪ್ರಕಾಶ್ ರಾಜ್ ಅವರಿಗೆ ಸಿಟಿ ಎಂದರೆ ಮೊದಲಿನಿಂದಲೂ ಇಷ್ಟವಿಲ್ಲ. ಹೀಗಾಗಿ, ಅವರು ಮೈಸೂರು ಸಮೀಪದ ಶ್ರೀರಂಗಪಟ್ಟಣದಲ್ಲಿರುವ ಫಾರ್ಮ್​ಹೌಸ್​ನಲ್ಲಿ ವಾಸವಿರುತ್ತಾರೆ. ಸಿನಿಮಾ ಕೆಲಸ ಮುಗಿಸಿ ಅವರು ನೇರವಾಗಿ ಇಲ್ಲಿಯೇ ತೆರಳುತ್ತಾರೆ. ಈ ರೀತಿ ಮನೆ ಹೊಂದುವುದು ಅವರ ಕನಸಾಗಿತ್ತಂತೆ.

ಕಣಿವೆ, ಕಾಡು, ಸಮುದ್ರದ ಪಕ್ಕ ಮನೆ, ನದಿ ಸಮೀಪ ತೋಟ; ನನಸಾಗಿದೆ ಪ್ರಕಾಶ್ ರೈ ಕನಸು
ಪ್ರಕಾಶ್ ರಾಜ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 26, 2024 | 12:00 PM

ಪ್ರಕಾಶ್ ರಾಜ್ (Prakash Raj) ಅವರಿಗೆ ಇಂದು (ಮಾರ್ಚ್ 26) ಬರ್ತ್​ಡೇ ಸಂಭ್ರಮ. ಅವರ ಅಭಿಮಾನಿಗಳು ನಟನಿಗೆ ವಿಶ್ ಮಾಡುತ್ತಿದ್ದಾರೆ. ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರ ಬಳಿ ಸಾಕಷ್ಟು ಆಸ್ತಿ ಇದೆ. ಹಾಗಂತ ಅವರು ಐಷಾರಾಮಿ ಜಾಗದಲ್ಲಿ ಹೋಗಿ ಮನೆ ಖರೀದಿಸಿಲ್ಲ. ಮೊದಲಿನಿಂದ ಇದ್ದ ಒಂದು ಕನಸನ್ನು ಅವರು ಈಡೇರಿಸಿಕೊಂಡಿದ್ದಾರೆ. ಕಣಿವೆ, ಕಾಡು, ಸಮುದ್ರ ಪಕ್ಕ ಒಂದು ಮನೆ ಇರಬೇಕು, ನದಿ ಪಕ್ಕ ತೋಟ ಎಂಬುದು ಪ್ರಕಾಶ್ ರಾಜ್ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಪ್ರಕಾಶ್ ರಾಜ್ ಸಂದರ್ಶನಗಳನ್ನು ನೀಡೋದು ತುಂಬಾನೇ ಅಪರೂಪ. ಇತ್ತೀಚೆಗೆ ಅವರು ‘ಫಿಲ್ಮ್​ ಕಂಪಾನಿಯನ್ ಸೌತ್​’ಗೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ಹಲವು ವಿಚಾರ ಹಂಚಿಕೊಂಡಿದ್ದಾರೆ. ಪ್ರಕಾಶ್ ರಾಜ್​ಗೆ ಜೀವನದಲ್ಲಿ ಬೇಸರ ಎಂಬುದೇ ಬಂದಿಲ್ಲವಂತೆ. ಸಿನಿಮಾ ಕೆಲಸದಿಂದ ಬ್ರೇಕ್ ಪಡೆದರೆ ರಂಗಭೂಮಿಯಲ್ಲಿ ಬ್ಯುಸಿ ಇರುತ್ತಾರೆ. ಇದರ ಜೊತೆಗೆ ಕೃಷಿಯಲ್ಲೂ ತೊಡಗಿಕೊಳ್ಳುತ್ತಾರೆ.

ಪ್ರಕಾಶ್ ರಾಜ್ ಅವರಿಗೆ ಸಿಟಿ ಎಂದರೆ ಮೊದಲಿನಿಂದಲೂ ಇಷ್ಟವಿಲ್ಲ. ಹೀಗಾಗಿ, ಅವರು ಮೈಸೂರು ಸಮೀಪದ ಶ್ರೀರಂಗಪಟ್ಟಣದಲ್ಲಿರುವ ಫಾರ್ಮ್​ಹೌಸ್​ನಲ್ಲಿ ವಾಸವಿರುತ್ತಾರೆ. ಸಿನಿಮಾ ಕೆಲಸ ಮುಗಿಸಿ ಅವರು ನೇರವಾಗಿ ಇಲ್ಲಿಯೇ ತೆರಳುತ್ತಾರೆ. ಈ ರೀತಿ ಮನೆ ಹೊಂದುವುದು ಅವರ ಕನಸಾಗಿತ್ತಂತೆ.

‘ನನಗೆ ಸಿಟಿ ಬೇಡ. 20 ವರ್ಷಗಳ ಹಿಂದೆಯೇ ಈ ವಿಚಾರ ಅರಿವಾಯಿತು. ನದಿ ಸಮೀಪ ಒಂದು ತೋಟ, ಸಮುದ್ರ, ಕಾಡು ಹಾಗೂ ಕಣಿವೆಯಲ್ಲಿ ಒಂದು ಮನೆ ಹೊಂದಬೇಕು ಎಂಬುದು ನನ್ನ ಆಸೆ ಆಗಿತ್ತು. ಆ ಆಸೆ ಈಡೇರಿದೆ. ಕಣಿವೆ ಬೇಕು ಎಂದರೆ ಕೊಡೈಕೆನಲ್​ ಮನೆಗೆ ಹೋಗುತ್ತೇನೆ. ಸಮುದ್ರ ಬೇಕು ಎಂದರೆ ಚೆನ್ನೈ ತೆರಳುತ್ತೇನೆ. ಕಾಡು, ನದಿ ಬೇಕು ಎಂದರೆ ಮೈಸೂರಿನ ಫಾರ್ಮ್​ಹೌಸ್​ಗೆ ಬರುತ್ತೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಹಣಕ್ಕಾಗಿ ನಾನು ಸ್ಟುಪಿಡ್ ಸಿನಿಮಾಗಳನ್ನೂ ಮಾಡಿದ್ದೇನೆ’; ಪ್ರಕಾಶ್ ರೈ ನಿಲುವು ಇದು

‘ಇದೆಲ್ಲ ಸಣ್ಣ ಹೂಡಿಕೆ. ಜುಬ್ಲಿ ಹಿಲ್ಸ್​ನಲ್ಲಿ ಏಕೆ ಮನೆ ಪಡೆಯಬಾರದು ಎಂದು ಕೆಲವರು ಕೇಳಿದ್ದರು. ಅಲ್ಲಿ 10 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಬೇಕು. ಬಾಗಿಲು ತೆರೆದರೆ ಬೇರೆ ಯಾರದ್ದೋ ಮನೆ ಕಾಣುತ್ತದೆ. ಆದರೆ, ಒಂದೂವರೆ ಕೋಟಿ ರೂಪಾಯಿಗೆ ಇಲ್ಲಿ ಐದು ಎಕರೆ ಮನೆ ಇದೆ. ಇದು ಹೂಡಿಕೆ ಅಲ್ಲ’ ಎಂದಿದ್ದಾರೆ.

ಪ್ರಕಾಶ್ ರಾಜ್ ಅವರು ಸಾಕಷ್ಟು ಸಮಯವನ್ನು ಮರಗಳ ಜೊತೆ, ಗಿಡಗಳ ಜೊತೆ ಕಳೆಯಲು ಇಷ್ಟಪಡುತ್ತಾರೆ. ಈ ಕಾರಣಕ್ಕೆ ಸಮಯ ಸಿಕ್ಕಾಗ ಅವರು ಫಾರ್ಮ್​ಹೌಸ್​ನಲ್ಲಿ ಇರಲು ಬಯಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ