AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್​

‘ಪುನೀತ್ ನನ್ನ ಆತ್ಮೀಯ ಗೆಳೆಯ. ಫ್ಯಾಮಿಲಿ ಫ್ರೆಂಡ್​ ಆಗಿದ್ದರು. ನನ್ನ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಅವರಿಗೆ ಕಾಳಜಿಯಿತ್ತು. ಸಿಕ್ಕಾಗ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೆವು. ಮಾತಾಡುತ್ತಿದ್ದೆವು’ ಎಂದಿದ್ದಾರೆ ನೆನಪಿರಲಿ ಪ್ರೇಮ್​.

‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್​
ಪುನೀತ್​ ರಾಜ್​ಕುಮಾರ್​, ನೆನಪಿರಲಿ ಪ್ರೇಮ್
TV9 Web
| Edited By: |

Updated on: Nov 06, 2021 | 3:14 PM

Share

ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಸಾಕಷ್ಟು ಯುವಕರು ಜಿಮ್​ಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಹೃದಯಾಘಾತಕ್ಕೂ ಜಿಮ್​ಗೂ ಸಂಬಂಧ ಇದೆ ಎಂದು ಕೆಲವರು ಭಾವಿಸಿದ್ದಾರೆ. ಆ ಕುರಿತು ನಟ ನೆನಪಿರಲಿ ಪ್ರೇಮ್​ ಮಾತನಾಡಿದ್ದಾರೆ. ‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು. ಅದೇ ಟೈಮ್​ನಲ್ಲಿ ಓವರ್​​ ಆಗಿ ಏನೇ ಮಾಡಿದರೂ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತದೆ. ಒತ್ತಾಯಪೂರ್ವಕವಾಗಿ ಹಾಗೆ ಮಾಡಿದರೆ ಅಪಾಯದ ಸಾಧ್ಯತೆ ಇರುತ್ತದೆ. ಜಿಮ್​​ಗೆ ಹೋಗುವುದರಿಂದ ಆ ರೀತಿ ಆಗುತ್ತೆ ಎನ್ನುವುದು ಸುಳ್ಳು. ಲಕ್ಷಾಂತರ ಜನ ಜಿಮ್​ ನಂಬಿ ಬದುಕುತ್ತಿದ್ದಾರೆ’ ಎಂದು ಪ್ರೇಮ್​ ಹೇಳಿದ್ದಾರೆ.

‘ಜಿಮ್​ಗೆ ಹೋಗುವುದರಿಂದ ಅನೇಕರು ಆರೋಗ್ಯ ಕಾಪಾಡಿಕೊಂಡಿದ್ದಾರೆ. ಯಾವುದೇ ಆದ್ರೂ ಹಂತಹಂತವಾಗಿ ಮಾಡಿಕೊಂಡು ಹೋಗ್ಬೇಕು. ಕೆಲವರು ಯಾವುದೋ ಒಂದು ವಿಡಿಯೋ ನೋಡಿ ವರ್ಕೌಟ್ ಮಾಡುತ್ತಾರೆ. ಒಂದೇ ದಿನದಲ್ಲಿ ಫಿಟ್ ಆಗಬೇಕು, ತೂಕ ಇಳಿಸಬೇಕೆಂದು ಕಸರತ್ತು ಮಾಡ್ತಾರೆ. ತುಂಬಾನೇ ವರ್ಕೌಟ್​ ಮಾಡಿದಾಗ ಹೀಗೆ ಆಗುವುದು ಸಾಮಾನ್ಯ’ ಎಂಬುದು ಪ್ರೇಮ್​ ಅಭಿಪ್ರಾಯ.

‘ಪುನೀತ್ ನನ್ನ ಆತ್ಮೀಯ ಗೆಳೆಯ. ಫ್ಯಾಮಿಲಿ ಫ್ರೆಂಡ್​ ಆಗಿದ್ದರು. ನನ್ನ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಅವರಿಗೆ ಕಾಳಜಿಯಿತ್ತು. ಸಿಕ್ಕಾಗ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೆವು. ಮಾತಾಡುತ್ತಿದ್ದೆವು. ಅಪ್ಪು ಸರ್ ನಿಧನರಾದಾಗ ನನ್ನ ಪುತ್ರಿ ನೋಡಬೇಕೆಂದು ಹೇಳಿದ್ದಳು. ತುಂಬಾ ಜನರಿದ್ದಾರೆ ಎಂದು ಹೇಳಿದಾಗ ಊಟ ಬಿಟ್ಟು ಮಲಗಿದ್ದಳು. ಮರುದಿನ ಮನೆಯವರೆಲ್ಲರನ್ನೂ ಕರೆದೊಯ್ದು ಅಂತಿಮ ದರ್ಶನ ಮಾಡಿಸಿದೆ. ಯಾಕಮ್ಮ ಇಷ್ಟೊಂದು ಹಠ ಮಾಡಿದೆ ಎಂದು ಮಗಳನ್ನು ಕೇಳಿದೆ. ಎಷ್ಟೇ ಜನರ ನಡುವೆ ಇದ್ದರೂ ನನ್ನನ್ನು ಗುರುತಿಸಿ ಮಾತಾಡುತ್ತಿದ್ರು, ನನ್ನನ್ನು ಗುರುತಿಸಿ ಕರೆದು ಮಾತನಾಡಿಸುತ್ತಿದ್ದರು ಅಂತ ಮಗಳು ಹೇಳಿದಳು. ನಮ್ಮ ಮತ್ತು ಅವರ ಕುಟುಂಬದ ನಡುವೆ ಅಂತಹ ಬಾಂಧವ್ಯವಿತ್ತು’ ಎಂದಿದ್ದಾರೆ ಪ್ರೇಮ್​.

ಇದನ್ನೂ ಓದಿ:

‘ಸಮಾಜ ಸೇವೆ ಮಾಡಿದ ಅಪ್ಪು​ ಯಾವ ದೇವರಿಗೂ ಕಮ್ಮಿ ಇಲ್ಲ’; ಸಮಾಧಿ ಬಳಿ ಮದುವೆ ಆಗಲು ಬಂದ ಪ್ರೇಮಿಗಳ ಮಾತು

ಪುನೀತ್​ ಸಮಾಧಿಗೆ ಪ್ರತಿದಿನ 20 ಸಾವಿರ ಮಂದಿ ಭೇಟಿ; ಕಂಠೀರವ ಸ್ಟುಡಿಯೋದಲ್ಲಿ ಈಗ ಹೇಗಿದೆ ಪರಿಸ್ಥಿತಿ?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್