ಪುನೀತ್ ಬಾಲನಟನಾಗಿ ನಟಿಸಿದ ಸಿನಿಮಾಗಳು ಇವು; ಒಂದಕ್ಕಿಂತ ಒಂದು ಸೂಪರ್

Puneeth Rajkumar Movies: ಪುನೀತ್ ಅವರಿಗೆ ಇಂದು ಜನ್ಮದಿನ. ಆದರೆ, ಇಂದು ಅವರು ನಮ್ಮೊಂದಿಗೆ ಇಲ್ಲ. ಹೀರೋ ಆಗಿ ಮಿಂಚುವುದಕ್ಕೂ ಮೊದಲು ಬಾಲನಟನಾಗಿ ಗಮನ ಸೆಳೆದಿದ್ದರು. ಅವರು ಆಗಲೇ ರಾಷ್ಟ್ರ ಪ್ರಶಸ್ತಿ ಕೂಡ ಪಡೆದುಕೊಂಡರು. ಅವರು ಬಾಲ ಕಲಾವಿದನಾಗಿ ನಟಿಸಿದ ಸಿನಿಮಾಗಳ ವಿವರ ಇಲ್ಲಿದೆ.

ಪುನೀತ್ ಬಾಲನಟನಾಗಿ ನಟಿಸಿದ ಸಿನಿಮಾಗಳು ಇವು; ಒಂದಕ್ಕಿಂತ ಒಂದು ಸೂಪರ್
ಪುನೀತ್
Edited By:

Updated on: Mar 17, 2026 | 7:39 AM

ಬಾಲ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದ ಕನ್ನಡಿಗರ ಪ್ರೀತಿಯ ಅಪ್ಪು ಇಂದು ನಮ್ಮ ಜೊತೆ ಇಲ್ಲ. ಇಂದು (ಮಾರ್ಚ್ 17) ಪುನೀತ್ ಜನ್ಮದಿನ. ಅವರು ಬಾಲನಟನಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಎಲ್ಲರಿಂದಲೂ ಅವರು ಭೇಷ್ ಎನಿಸಿಕೊಂಡರು. ಅವರು ಆಗಲೇ ರಾಷ್ಟ್ರ ಪ್ರಶಸ್ತಿ ಕೂಡ ಪಡೆದುಕೊಂಡರು. ಅವರು ಬಾಲ ಕಲಾವಿದನಾಗಿ ನಟಿಸಿದ ಸಿನಿಮಾಗಳ ವಿವರ ಇಲ್ಲಿದೆ.

  1. ಪುನೀತ್ ನಟನೆಯ ಮೊದಲ ಚಿತ್ರ ಪ್ರೇಮದ ಕಾಣಿಕೆ. 1976ರಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಶಿಶುವಾಗಿದ್ದಾಗಲೇ ಬಣ್ಣದ ಲೋಕದಲ್ಲಿ ಅಪ್ಪು ಕಾಣಿಸಿಕೊಂಡಿದ್ದರು.
  2. 1977ರಲ್ಲಿ ಬಿಡುಗಡೆಯಾದ ಸನಾದಿ ಅಪ್ಪಣ್ಣ ಚಿತ್ರದಲ್ಲಿಯೂ ಅಶೋಕ್ ಎನ್ನುವ ಪಾತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದರು.
  3. 1978ರಲ್ಲಿ ‘ತಾಯಿಗೆ ತಕ್ಕ ಮಗ’ ಸಿನಿಮಾದಲ್ಲಿ ಅಪ್ಪು ನಟಿಸಿದರು.
  4. 1980ರಲ್ಲಿ ‘ವಸಂತ ಗೀತ’ ಚಿತ್ರ ಬಿಡುಗಡೆಯಾಗಿತ್ತು. ಇದರಲ್ಲಿ ರಾಜಕುಮಾರ್ ಅವರೊಂದಿಗೆ ನಟಿಸಿದ್ದರು.
  5. 1981ರಲ್ಲಿ ಬಿಡುಗಡೆಯಾದ ‘ಭಾಗ್ಯವಂತ’ ಚಿತ್ರದಲ್ಲಿಯೂ ಅಪ್ಪು ಬಾಲನಟನಾಗಿ ಬಣ್ಣ ಹಚ್ಚಿದರು.
  6. ಬಾಲ ನಟನಾಗಿ ಅವರಿಗೆ ಸಾಲು ಸಾಲು ಆಫರ್​​ಗಳು ಬರುತ್ತಿದ್ದವು. 1982ರಲ್ಲಿ ರಿಲೀಸ್ ಆದ ‘ಹೊಸ ಬೆಳಕು’ ಚಿತ್ರದಲ್ಲಿ ಅಭಿನಯಿಸಿದ್ದರು.
  7. ಅದೇ ವರ್ಷ ಬಿಡುಗಡೆಯಾದ ‘ಚಲಿಸುವ ಮೋಡಗಳು’ ಚಿತ್ರದಲ್ಲಿಅದ್ಭುತ ನಟನೆಯ ಮೂಲಕ ಜನಪ್ರಿಯತೆ ಪಡೆದರು.
  8. ವಿಷ್ಟುವಿನ ಭಕ್ತನಾಗಿ ಮಿಂಚಿದ ‘ಭಕ್ತ ಪ್ರಹ್ಲಾದ’ ಸಿನಿಮಾ ಗಮನ ಸೆಳೆಯಿತು. ಈ ಚಿತ್ರವು 1983ರಲ್ಲಿ ಚಿತ್ರ ಬಿಡುಗಡೆಯಾಗಿತ್ತು.
  9. ಪುನೀತ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ ಸಿನಿಮಾ ಎಂದರೆ ಅದು ಎರಡು ನಕ್ಷತ್ರಗಳು. 1983ರಲ್ಲಿ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಂಡಿತು.
  10. 1984ರಲ್ಲಿ ರಿಲೀಸ್ ಆದ ಯಾರಿವನು ಚಿತ್ರದಲ್ಲಿ ಪುನೀತ್ ನಟನೆ ಅಭಿಮಾನಿಗಳನ್ನು ಖುಷಿಪಡಿಸಿತ್ತು.
  11. 1985ರಲ್ಲಿ ಬಿಡುಗಡೆಯಾದ ‘ಬೆಟ್ಟದ ಹೂವು’ ಚಿತ್ರ ಪುನೀತ್ ಸಿನಿ ಬದುಕಿಗೆ ಭದ್ರ ಬುನಾದಿ ಹಾಕಿತು. ಇದಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದರು.
  12. 1988ರಲ್ಲಿ ಬಿಡುಗಡೆ ಕಂಡ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರ ಸೂಪರ್ ಹಿಟ್ ಆಗಿತ್ತು. ಪುನೀತ್ ನಟನೆ ಅಭಿಮಾನಿಗಳ ಮನಸ್ಸನ್ನು ಸ್ಪರ್ಶಿಸಿತ್ತು.
  13. ಬಾಲ ನಟನಾಗಿ ಅಪ್ಪು ನಟಿಸಿದ ಕೊನೆಯ ಚಿತ್ರ ‘ಪರಶುರಾಮ’. ಅಪ್ಪು ಎನ್ನುವ ಹೆಸರಿನ ಪಾತ್ರವನ್ನು ಈ ಚಿತ್ರದಲ್ಲಿ ಪುನೀತ್ ನಟಿಸಿದ್ದರು. ಆ ಬಳಿಕ ‘ಅಪ್ಪು’ ಸಿನಿಮಾ ಮೂಲಕ ಹೀರೋ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us