AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

James Movie: ಇಂದಿನಿಂದ ಪುನೀತ್ ಧ್ವನಿಯಲ್ಲಿ ‘ಜೇಮ್ಸ್’ ರೀ-ಎಂಟ್ರಿ; ಹಲವೆಡೆ ಫ್ಯಾನ್ಸ್ ಶೋ

Puneeth Rajkumar | James Re-Release: ಪ್ರಸ್ತುತ ರಾಜ್ಯದ 65 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಮಂದಿರಗಳಲ್ಲಿ ಇನ್ನುಮುಂದೆ ಪುನೀತ್ ರಾಜ್​ಕುಮಾರ್ ಧ್ವನಿಯಲ್ಲಿಯೇ ಚಿತ್ರವನ್ನು ವೀಕ್ಷಿಸಬಹುದು. ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಅಪ್ಪು ಧ್ವನಿಯಲ್ಲಿಯೇ ಚಿತ್ರದ ಮೊದಲ ಪ್ರದರ್ಶನ ನಡೆಯಲಿದೆ.

James Movie: ಇಂದಿನಿಂದ ಪುನೀತ್ ಧ್ವನಿಯಲ್ಲಿ ‘ಜೇಮ್ಸ್’ ರೀ-ಎಂಟ್ರಿ; ಹಲವೆಡೆ ಫ್ಯಾನ್ಸ್ ಶೋ
ಪುನೀತ್
TV9 Web
| Updated By: shivaprasad.hs|

Updated on:Apr 22, 2022 | 10:04 AM

Share

ಪುನೀತ್ ರಾಜ್​ಕುಮಾರ್ (Puneeth Rajkumar) ನಾಯಕರಾಗಿ ಕಾಣಿಸಿಕೊಂಡಿದ್ದ ‘ಜೇಮ್ಸ್’ (James Movie) ಚಿತ್ರ ಮಾರ್ಚ್ 17ರಂದು ಅವರ ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವಾದ್ಯಂತ ತೆರೆ ಕಂಡಿತ್ತು. ಈ ಚಿತ್ರದೊಂದಿಗೆ ಕರುನಾಡಿನ ಪ್ರೇಕ್ಷಕರು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರು. ಎಲ್ಲೆಡೆಯಿಂದ ಚಿತ್ರಕ್ಕೆ ಅದ್ಭುತ ಸ್ವಾಗತ ದೊರೆಯಿತು. ‘ಜೇಮ್ಸ್ ಜಾತ್ರೆ’ ಹೆಸರಿನಲ್ಲಿ ಅಭಿಮಾನಿಗಳು ಪುನೀತ್ ಚಿತ್ರವನ್ನು ಸಂಭ್ರಮಿಸಿದರು. ಪುನೀತ್ ಭಾಗದ ಚಿತ್ರೀಕರಣವಾಗಿದ್ದರೂ ಅಪ್ಪು ಡಬ್ಬಿಂಗ್ ಮಾಡಿರಲಿಲ್ಲ. ಹೀಗಾಗಿ ಚಿತ್ರತಂಡ ಶಿವರಾಜ್​ಕುಮಾರ್ (Shivarajkumar) ಧ್ವನಿಯಲ್ಲಿ ಚಿತ್ರವನ್ನು ರಿಲೀಸ್ ಮಾಡಿತ್ತು. ಆದರೆ ಪುನೀತ್ ಧ್ವನಿಯನ್ನು ಚಿತ್ರಕ್ಕೆ ಅಳವಡಿಸಲು ತಂಡ ಪ್ರಯತ್ನ ಮುಂದುವರೆಸಿತ್ತು. ಅಂತಿಮವಾಗಿ ಅದರಲ್ಲಿ ಯಶಸ್ವಿಯೂ ಆಯಿತು. ಪರಿಣಾಮವಾಗಿ ಇಂದಿನಿಂದ (ಏ.22) ‘ಜೇಮ್ಸ್’ ಅಪ್ಪು ಧ್ವನಿಯಲ್ಲೇ ರಾಜ್ಯಾದ್ಯಂತ ಪ್ರದರ್ಶನ ಕಾಣಲಿದೆ.

ಪ್ರಸ್ತುತ ರಾಜ್ಯದ 65 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಮಂದಿರಗಳಲ್ಲಿ ಇನ್ನುಮುಂದೆ ಪುನೀತ್ ರಾಜ್​ಕುಮಾರ್ ಧ್ವನಿಯಲ್ಲಿಯೇ ಚಿತ್ರವನ್ನು ವೀಕ್ಷಿಸಬಹುದು. ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಅಪ್ಪು ಧ್ವನಿಯಲ್ಲಿಯೇ ಚಿತ್ರದ ಮೊದಲ ಪ್ರದರ್ಶನ ನಡೆಯಲಿದೆ. ಇದಲ್ಲದೇ ಹಲವೆಡೆ ಫ್ಯಾನ್ಸ್ ಶೋಗಳನ್ನು ಏರ್ಪಡಿಸಲಾಗಿದೆ.

ಆಧುನಿಕ ತಂತ್ರಜ್ಞಾನದೊಂದಿಗೆ ಜೇಮ್ಸ್ ರೀ-ರಿಲೀಸ್ ಆಗುತ್ತಿರುವ ನಡುವೆಯೇ ಫ್ಯಾನ್ಸ್ ಸಂಭ್ರಮ ಹೆಚ್ಚಲು ಇನ್ನೊಂದು ಕಾರಣವೂ ಇದೆ. ಸದ್ಯದಲ್ಲೇ 50ನೇ ದಿನವನ್ನ ಜೇಮ್ಸ್ ಪೂರೈಸಲಿದೆ. ಹೀಗಾಗಿ ಅಭಿಮಾನಿಗಳು ಖುಷ್ ಆಗಿದ್ದು, ಅದನ್ನು ಭರ್ಜರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಚಿತ್ರತಂಡ ಎಲ್ಲೆಡೆ ಪುನೀತ್ ಧ್ವನಿಯಲ್ಲಿರುವ ಹೊಸ ಅವತರಣಿಕೆ ಫ್ಯಾನ್ಸ್ ಶೋ ಆಯೋಜಿಸಲು ಚಿಂತನೆ ನಡೆಸಿದೆ.

ಪುನೀತ್ ಧ್ವನಿಯಲ್ಲಿ ‘ಜೇಮ್ಸ್’:

ಹೊಸ ತಂತ್ರಜ್ಞಾನದ ಮೂಲಕ ಪುನೀತ್ ಧ್ವನಿ ಅಳವಡಿಕೆ:

ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಧ್ವನಿ ತಂತ್ರಜ್ಞರು ಪುನೀತ್ ಧ್ವನಿಯನ್ನು ಚಿತ್ರಕ್ಕೆ ಅಳವಡಿಸಿದ ಹಿನ್ನೆಲೆ ವಿವರಿಸಿದ್ದರು. ‘‘ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿಯೇ ಇದು ಮೊದಲ ಪ್ರಯತ್ನವಾಗಿದೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ರೀಸರ್ಚ್ ಮಾಡುತ್ತಿದ್ದೆವು. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಎಲ್ಲಾ ಭಾಷೆಗೆ ಅದೇ ಕಲಾವಿದರ ವಾಯ್ಸ್ ಇದ್ರೆ ಹೇಗಿರುತ್ತೆ ಅಂತ ಟ್ರೈ ಮಾಡುತ್ತಿದ್ದೆವು. ಶ್ರೀಕಾಂತ್ ಸರ್ ಹೇಳಿದ್ರು, ಜೇಮ್ಸ್‌ ಸಿನಿಮಾ ಬಗ್ಗೆ ಪರಿಸ್ಥಿತಿಯ ಬಗ್ಗೆ.. ಆಗ ನಾವು ಈ ಪ್ರಯತ್ನಕ್ಕೆ ಕೈ ಹಾಕಿದೆವು’’

‘‘ಸಿನಿಮಾ ರಿಲೀಸ್​ಗೂ ಮೊದಲೇ ಕೇಳಿದ್ದರು. ಆದರೆ ಆ ಸಮಯದಲ್ಲಿ ಅದನ್ನು ಮಾಡೋಕೆ ಸಾಧ್ಯವಾಗಲಿಲ್ಲ. ಕಾರಣ ನಾವು ಆಗಷ್ಟೇ ಪ್ರಯತ್ನ ನಡೆಸುತ್ತಿದ್ದೆವು. ಹಾಗಾಗಿ ಸಾಧ್ಯವಾಗಲಿಲ್ಲ. ಈ ಬಗ್ಗೆ ಬೇಸರವಿದೆ. ನಟ ಪ್ರಭಾಸ್ ಸರ್ ಜೊತೆ ನಾವು ‘ಆದಿಪುರುಷ್’ ಚಿತ್ರಕ್ಕೆ ಕೆಲಸ ಮಾಡುತ್ತಿದ್ದೆವು. ಈಗ ಪ್ರಭಾಸ್ ಬಳಿ ಅನುಮತಿ ಪಡೆದು, ಆದಿ ಪುರುಷ್ ಕೆಲಸ ನಿಲ್ಲಿಸಿ, ಜೇಮ್ಸ್ ಸಿನಿಮಾ ಕೈಗೆತ್ತಿಕೊಂಡಿದ್ದೇವೆ. ಈಗ ನಮಗೆ ಖುಷಿ ಆಗುತ್ತಿದೆ. ಇಂತಹ ಅವಕಾಶ ಕೊಟ್ಟಿದ್ದಕ್ಕೆ ಜೇಮ್ಸ್ ತಂಡಕ್ಕೆ ಧನ್ಯವಾದ’’ ಎಂದು ವಾಯ್ಸ್ ಮಿಕ್ಸಿಂಗ್ ತಂತ್ರಜ್ಞರು ಹೇಳಿದ್ದರು.

ಅಂದಹಾಗೆ ಧ್ವನಿ ತಂತ್ರಜ್ಞರು ಹಲವು ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಇದು ಅವರಿಗೆ ಸಿಕ್ಕ ಮೊದಲ ಜಯವಾಗಿದೆ. ಈ ಬಗ್ಗೆಯೂ ಚಿತ್ರತಂಡ ಸಂತಸ ಹಂಚಿಕೊಂಡಿತ್ತು.

ಅಪ್ಪು ಧ್ವನಿಯಲ್ಲಿ ‘ಜೇಮ್ಸ್’ ರಿರಿಲೀಸ್; ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದು:

ಇದನ್ನೂ ಓದಿ: ಏಪ್ರಿಲ್ 22ಕ್ಕೆ ವಿಶ್ವಾದ್ಯಂತ ‘ಜೇಮ್ಸ್​’ ಫ್ಯಾನ್ಸ್​ ಶೋ ಆಯೋಜಿಸಲು ಚಿಂತನೆ

‘ನಮ್ಮ​ ಕೆಲಸ ನಿಲ್ಲಿಸಿ, ಮೊದಲು ಜೇಮ್ಸ್​ ಚಿತ್ರದ ಕೆಲಸ ಮಾಡಿ’: ತಂತ್ರಜ್ಞರಿಗೆ ಪ್ರಭಾಸ್​ ಹೇಳಿದ ಮಾತಿದು

Published On - 9:56 am, Fri, 22 April 22

ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಶಿಫ್ಟ್ ಆಗುತ್ತಿರುವ ಜನ
ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಶಿಫ್ಟ್ ಆಗುತ್ತಿರುವ ಜನ
ಬಸ್ ಎದುರು ಹೋಗಿ ಕುಳಿತ ವ್ಯಕ್ತಿ, ಏಳೋಕೆ ರೆಡಿ ಇಲ್ಲ
ಬಸ್ ಎದುರು ಹೋಗಿ ಕುಳಿತ ವ್ಯಕ್ತಿ, ಏಳೋಕೆ ರೆಡಿ ಇಲ್ಲ